ಆ್ಯಪ್ನಗರ

ಗಣೇಶೋತ್ಸವಕ್ಕೆ ಅನುಮತಿ ಕಡ್ಡಾಯ

ಬೇಲೂರು ಉಪವಿಭಾಗ ವ್ಯಾಪ್ತಿಯಲ್ಲಿನಡೆಯುವ ಗಣೇಶೋತ್ಸವ ಸಮಾರಂಭದ ಸ್ಥಳಗಳು ವಿದ್ಯುತ್‌ ಮಾರ್ಗದಡಿ ಇರದಂತೆ ಆಯೋಜಕರು ಎಚ್ಚರವಹಿಸಬೇಕು. ಜತೆಗೆ ಸುರಕ್ಷತಾ ಅಂತರವನ್ನು ಅಧಿಕಾರಿಗಳ ಮೂಲಕ ಖಚಿತಪಡಿಸಿಕೊಳ್ಳಬೇಕು ಹಾಗೂ ತಾತ್ಕಾಲಿಕವಾಗಿ ಅಧಿಕೃತ ವಿದ್ಯುತ್‌ ಸಂಪರ್ಕವನ್ನು ಪಡೆಯುವುದು ಕಡ್ಡಾಯ. ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಲು ಪಾಲಿಕೆ, ಸ್ಥಳೀಯ ಸಂಸ್ಥೆ, ಪೊಲೀಸ್‌ ಇಲಾಖೆ ಮತ್ತು ಅಗ್ನಿಶಾಮಕಕ್ಕೆ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕು.

Vijaya Karnataka 1 Sep 2019, 5:00 am
ಹಾಸನ: ಬೇಲೂರು ಉಪವಿಭಾಗ ವ್ಯಾಪ್ತಿಯಲ್ಲಿನಡೆಯುವ ಗಣೇಶೋತ್ಸವ ಸಮಾರಂಭದ ಸ್ಥಳಗಳು ವಿದ್ಯುತ್‌ ಮಾರ್ಗದಡಿ ಇರದಂತೆ ಆಯೋಜಕರು ಎಚ್ಚರವಹಿಸಬೇಕು. ಜತೆಗೆ ಸುರಕ್ಷತಾ ಅಂತರವನ್ನು ಅಧಿಕಾರಿಗಳ ಮೂಲಕ ಖಚಿತಪಡಿಸಿಕೊಳ್ಳಬೇಕು ಹಾಗೂ ತಾತ್ಕಾಲಿಕವಾಗಿ ಅಧಿಕೃತ ವಿದ್ಯುತ್‌ ಸಂಪರ್ಕವನ್ನು ಪಡೆಯುವುದು ಕಡ್ಡಾಯ. ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆಯಲು ಪಾಲಿಕೆ, ಸ್ಥಳೀಯ ಸಂಸ್ಥೆ, ಪೊಲೀಸ್‌ ಇಲಾಖೆ ಮತ್ತು ಅಗ್ನಿಶಾಮಕಕ್ಕೆ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕು. ಸಮಾರಂಭದಲ್ಲಿನೂರಕ್ಕೂ ಅಧಿಕ ಜನ ಸೇರುವ ಸಂದರ್ಭವಿದ್ದಲ್ಲಿಕಡ್ಡಾಯವಾಗಿ ವಿದ್ಯುತ್‌ ಪರಿವೀಕ್ಷಕರ ಅನುಮತಿ ಪಡೆಯಬೇಕು. ವೈರಿಂಗ್‌, ಇ.ಎಲ್‌.ಸಿ.ಬಿ ಅಳವಡಿಸುವುದಾದರೆ ನೋಂದಾಯಿತ ವಿದ್ಯುತ್‌ ಗುತ್ತಿಗೆದಾರರಿಂದ ಸಮಾಪನಾ ವರದಿ ಪಡೆಯಬೇಕು. ನಿಯಾಮಾನುಸಾರ ಅವಶ್ಯಕ ಶುಲ್ಕ ಪಾವತಿಸಿ ವಿದ್ಯುತ್‌ ಸಂಪರ್ಕವನ್ನು ಪಡೆದುಕೊಳ್ಳಬೇಕೆಂದು ಬೇಲೂರಿನ ಸೆಸ್ಕ್‌ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ತಿಳಿಸಿದ್ದಾರೆ.
Vijaya Karnataka Web permission to the ganeshotsav is compulsory
ಗಣೇಶೋತ್ಸವಕ್ಕೆ ಅನುಮತಿ ಕಡ್ಡಾಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ