ಆ್ಯಪ್ನಗರ

ಹಾಸನ: ಕಳವು, ದರೋಡೆ ಪ್ರಕರಣ, ವಾರಸುದಾರರ ಕೈಸೇರಿದ 2.80 ಕೋಟಿ ಮೌಲ್ಯದ ಚಿನ್ನಾಭರಣ

ಕಳವು ಸ್ವತ್ತನ್ನು ಹಸ್ತಾಂತರಿಸಿದ ಬಳಿಕ ಮಾತನಾಡಿದ ಐಜಿ ಪ್ರವೀಣ್ ಪವಾರ್ ಜಿಲ್ಲಾ ಪೊಲೀಸ್ ಅಕಾರಿಗಳು ಮತ್ತು ಸಿಬ್ಬಂದಿ ಶ್ಲಾಘನೀಯ ಕೆಲಸ ಮಾಡಿ ಜನರ ನಂಬಿಕೆ, ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ

Vijaya Karnataka Web 27 Nov 2021, 6:47 pm
ಹಾಸನ: ಕಳವು, ದರೋಡೆ, ಸುಲಿಗೆ ಸೇರಿದಂತೆ 2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ವರದಿಯಾಗಿದ್ದ 71 ಪ್ರಕರಣದಲ್ಲಿ 162 ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಂಡಿದ್ದ 2.80 ಕೋಟಿ ಮೌಲ್ಯದ ಚಿನ್ನಾಭರಣ, ನಗದನ್ನು ವಾರಸುದಾರರಿಗೆ ಮೈಸೂರು ದಕ್ಷಿಣ ವಲಯ ಐಜಿ ಪ್ರವೀಣ್ ಮಧುಕರ್ ಪವಾರ್ ಹಸ್ತಾಂತರಿಸಿದರು.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಹಾಸನ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಶನಿವಾರ ಹಲವು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಆಭರಣ, ನಗದನ್ನು ಪ್ರದರ್ಶಿಸಿದ ಬಳಿಕ ವಾರಸುದಾರರಿಗೆ ಐಜಿ ಹಾಗೂ ಎಸ್‌ಪಿ ಶ್ರೀನಿವಾಸಗೌಡ , ಎಎಸ್‌ಪಿ ನಂದಿನಿ ಮತ್ತಿತರ ಅಕಾರಿಗಳು ಸ್ವತ್ತನ್ನು ನೀಡಿದರು. ಒಟ್ಟು ಪ್ರಕರಣದಲ್ಲಿ 2,80,40,611 ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಹಾಸನ: ಕಂದಾಯ ಸಚಿವರು ಸಮೀಕ್ಷೆ ಮಾಡೋದು ಮುಖ್ಯವಲ್ಲ, ಪರಿಹಾರ ಬಿಡುಗಡೆ ಮಾಡಿಸಲಿ ಎಂದ ರೇವಣ್ಣ

3.89 ಕೆಜಿ ಚಿನ್ನ, 7 ಕೆಜಿ ಬೆಳ್ಳಿ, 16.82 ಲಕ್ಷ ರೂ. 5.45 ಲಕ್ಷದ ಬೈಕ್, 11 ಲಕ್ಷ ಬೆಲೆಯ ಟಾಟಾ ಏಸ್ ಗೂಡ್ಸ್ ವಾಹನ, ಮೊಬೈಲ್, ಎಲ್‌ಇಡಿ ಟಿವಿ, ಟಿಪ್ಪರ್ ಲಾರಿ, ಕಾರು,ಜೀಪ್, ಕಂಪ್ಯೂಟರ್, 100 ಲೀಟರ್ ಡೀಸೆಲ್ ವಶಪಡಿಸಿಕೊಂಡು, ನ್ಯಾಯಾಲಯದ ಅನುಮತಿ ಅನ್ವಯ ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಐಜಿ ತಿಳಿಸಿದರು.

ಮಹಿಳಾ ಸಿಬ್ಬಂದಿ ಗಸ್ತು

ಕಳವು ಸ್ವತ್ತನ್ನು ಹಸ್ತಾಂತರಿಸಿದ ಬಳಿಕ ಮಾತನಾಡಿದ ಐಜಿ ಪ್ರವೀಣ್ ಪವಾರ್ ಜಿಲ್ಲಾ ಪೊಲೀಸ್ ಅಕಾರಿಗಳು ಮತ್ತು ಸಿಬ್ಬಂದಿ ಶ್ಲಾಘನೀಯ ಕೆಲಸ ಮಾಡಿ ಜನರ ನಂಬಿಕೆ, ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವುದೇ ಘಟನೆ, ಪ್ರಕರಣ ಬೆಳಕಿಗೆ ಬಂದ 48 ಗಂಟೆ ಗಂಭೀರತೆ ಪಡೆದಿರುತ್ತದೆ. ಆ ಬಳಿಕ ಆಸಕ್ತಿ ಕುಂದುತ್ತದೆ ಯಾವುದೇ ಪ್ರಕರಣ ಇರಲಿ ಅದನ್ನು ಗಂಭೀರವಾಗಿ ಪರಿಗಣಿಸಿ, ಪದೇಪದೆ ಸಭೆ ಮಾಡಿ ಪರಿಶೀಲಿಸಿದಲ್ಲಿ ಪ್ರಕರಣ ಪತ್ತೆಗೆ ಸಹಕಾರಿಯಾಗುತ್ತದೆ ಎಂದರಲ್ಲದೆ ಕಳೆದ ಮೂರು ವರ್ಷದಲ್ಲಿ ಪ್ರಕರಣ ಹೆಚ್ಚಿದೆ. ಮುಂದಿನ ದಿನದಲ್ಲಿ ಶೇ.75 ರಷ್ಟು ರಿಕವರಿ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಹಾಸನ: ಧಾರಾಕಾರ ಮಳೆಗೆ ಅಪಾರ ಬೆಳೆಹಾನಿ, 425 ಕೋಟಿ ರೂ. ನಷ್ಟ

ಜಿಲ್ಲೆಯಲ್ಲಿಯೂ ಇನ್ನುಮುಂದೆ ಮಹಿಳಾ ಸಿಬ್ಬಂದಿ ಗಸ್ತು ಹಾಕಿ ಅವರು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ