ಆ್ಯಪ್ನಗರ

ಹಾಸನದಲ್ಲಿ ಪ್ರತ್ಯೇಕ ಗಾಂಜಾ ಮಾರಾಟ ಪ್ರಕರಣ: ಆರು ಜನರ ಬಂಧನ

ಅಕ್ರಮವಾಗಿ ಗಾಂಜಾದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಆರುಜನ ಆರೋಪಿಗಳನ್ನು ಬಂಸಿರುವ ಪೊಲೀಸರು ಒಂದು ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡಿದ್ದಾರೆ. ಸುಮಿತ್ರಾ(56), ನವೀನ ಬಂಧಿತರು.

Vijaya Karnataka Web 15 Sep 2020, 7:34 pm
ಹಾಸನ: ಅಕ್ರಮವಾಗಿ ಗಾಂಜಾದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಆರುಜನ ಆರೋಪಿಗಳನ್ನು ಬಂಸಿರುವ ಪೊಲೀಸರು ಒಂದು ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡಿದ್ದಾರೆ. ಸುಮಿತ್ರಾ(56), ನವೀನ ಬಂಧಿತರು.
Vijaya Karnataka Web ganja
Representative image


ಚನ್ನರಾಯಪಟ್ಟಣ ತಾಲೂಕು, ಶ್ರವಣಬೆಳಗೊಳ ಹೋಬಳಿ ಕುಂಬೇನಹಳ್ಳಿ ಗ್ರಾಮದ ನವೀನ ತನ್ನ ಮನೆಯ ಹಿಂಭಾಗದ ಹಿತ್ತಲಿನ ಹೂವಿನ ಕುಂಡದಲ್ಲಿ ಗಾಂಜಾ ಬೆಳೆದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಶ್ರವಣಬೆಳಗೊಳ ಠಾಣೆ ಪಿಎಸ್‌ಐ ಶ್ರೀನಿವಾಸ ಎಂ.ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿನೀಡಿ ಸುಮಿತ್ರ 56 ವರ್ಷ, ಆಕೆಯ ಪುತ್ರ ನವೀನ ಕುಂಬೇನಹಳ್ಳಿ ಅವರನ್ನು ಬಂಧಿಸಿದ್ದಾರೆ.

ಸುಮಾರು 25 ಸಾವಿರ ರೂ. ಮೌಲ್ಯದ 1 ಕೆ.ಜಿ 70 ಗ್ರಾ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರದಲ್ಲಿ ಮೂರು ಲಕ್ಷ ರೂಪಾಯಿ ಮೌಲ್ಯದ 134 ಗಾಂಜಾ ಗಿಡ ವಶ: ಆರೋಪಿ ಸೆರೆ!

ಅರಕಲಗೂಡಲ್ಲಿ ಗಾಂಜಾ ಮಾರಾಟ: ಮೂವರ ಬಂಧನ
ಅರಕಲಗೂಡು ತಾಲೂಕು, ರಾಮನಾಥಪುರ ಹೋಬಳಿ, ಮಧುರನಹಳ್ಳಿ ಗ್ರಾಮದ ವಾಸಿ ಇಕ್ಬಾಲ್, ಹಾಗೂ ಇತರರು ಹಣ
ಸಂಪಾದನೆ ಮಾಡುವ ಉದ್ದೇಶದಿಂದ ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ಕೊಣನೂರು ಪಿಎಸ್‌ಐ ಎಸ್.ಎಲ್ ಸಾಗರ್,
ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

ಇಕ್ಬಾಲ್ ಬಿನ್ ಅಬ್ದುಲ್ ಖಾದರ್, (46 ) ಮಧುರನಹಳ್ಳಿ, ಸಂತೋಷ್( 23), ಅಕ್ಷಯ್ ( 24) ಕೇರಳಾಪುರ ಗ್ರಾಮದವರನ್ನು ಬಂಧಿಸಿದ್ದು, ಮಾರಾಟಕ್ಕಿಟ್ಟಿದ್ದ 330 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ