ಆ್ಯಪ್ನಗರ

ಸೋತ್‌ ತಕ್ಷಣ ಪಾರ್ಟಿ ಬಿಡ್ತಾರೆ: ಎ.ಮಂಜು ವಿರುದ್ಧದ ಪ್ರೀತಂ ಸಂಭಾಷಣೆ ವೈರಲ್‌

''ಸೋತ್‌ ತಕ್ಷಣ ಸಿದ್ದರಾಮಯ್ಯ ಅಂತ ಪಾರ್ಟಿ ಬಿಟ್ಟು ಹೋಗ್ತಾರೆ. 1999ರಲ್ಲಿ 2008 ಏನಾಯ್ತು. ಪಕ್ಷಕ್ಕೆ ಬಂದ್ರು ಹೋದ್ರು,''. ಹೀಗೆ ಬಿಜೆಪಿ ಅಭ್ಯರ್ಥಿ ಎ.ಮಂಜು ಕುರಿತಾದ ಹಾಸನದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಹಾಗೂ ಕಾರ್ಯಕರ್ತರೊಬ್ಬರ ನಡುವೆ ನಡೆದಿದೆ ಎನ್ನಲಾದ ಮೊಬೈಲ್‌ ಸಂಭಾಷಣೆ ಆಡಿಯೋ ವೈರಲ್‌ ಆಗಿದೆ. ಇದು ವಿರೋಧಿಗಳ ಪಿತೂರಿ ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.

Vijaya Karnataka 10 Apr 2019, 5:00 am
ಹಾಸನ: ''ಸೋತ್‌ ತಕ್ಷಣ ಸಿದ್ದರಾಮಯ್ಯ ಅಂತ ಪಾರ್ಟಿ ಬಿಟ್ಟು ಹೋಗ್ತಾರೆ. 1999ರಲ್ಲಿ 2008 ಏನಾಯ್ತು. ಪಕ್ಷಕ್ಕೆ ಬಂದ್ರು ಹೋದ್ರು,''.
Vijaya Karnataka Web preetham statement against manju goes viral
ಸೋತ್‌ ತಕ್ಷಣ ಪಾರ್ಟಿ ಬಿಡ್ತಾರೆ: ಎ.ಮಂಜು ವಿರುದ್ಧದ ಪ್ರೀತಂ ಸಂಭಾಷಣೆ ವೈರಲ್‌


ಹೀಗೆ ಬಿಜೆಪಿ ಅಭ್ಯರ್ಥಿ ಎ.ಮಂಜು ಕುರಿತಾದ ಹಾಸನದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಹಾಗೂ ಕಾರ್ಯಕರ್ತರೊಬ್ಬರ ನಡುವೆ ನಡೆದಿದೆ ಎನ್ನಲಾದ ಮೊಬೈಲ್‌ ಸಂಭಾಷಣೆ ಆಡಿಯೋ ವೈರಲ್‌ ಆಗಿದೆ. ಇದು ವಿರೋಧಿಗಳ ಪಿತೂರಿ ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.

ಏನಿದು ಸಂಭಾಷಣೆ? ಶಾಸಕ ಪ್ರೀತಂ ಗೌಡ ಜತೆ ಮಾತನಾಡಿರುವ ವ್ಯಕ್ತಿ, ''ಹೋಗ್ಲಿ ಅವ್ರಿಗೆ ಏನ್‌ ದರ್ದು. ನಮ್‌ ಪಾರ್ಟಿಗೆ ಬಂದು ಕ್ಯಾಂಡಿಡೇಟ್‌ ಆಗೋಕೆ? ಪುಕ್ಸಟ್ಟೆ ಲೀಡ್ರು ಆಗ್ತಾರಲ್ಲ. ಈಗ ಬೇಲೂರು, ಸಕಲೇಶಪುರ, ಅರಸೀಕೆರೆ, ಕಡೂರಿನಲ್ಲಿ ವೋಟ್‌ ಬ್ಯಾಂಕ್‌ ಇದೆ. ಒಂದ್‌ ನಿಮಿಷ ಅಣ್ಣಾ ನೀವು ಹೇಳ್ದಂಗೆ ಪುಕ್ಸಟ್ಟೆ ಲೀಡ್ರು ಆಗ್ತಾರೆ. ನೀವು ಜೆಡಿಎಸ್‌ಗೆ ಅನುಕೂಲ ಆಗುತ್ತದೆ ಎಂದು ಹೇಳ್ತೀರಲ್ಲ. ನೀವು ಮಾಡ್ತಿರುವ ಶ್ರಮವೆಲ್ಲ ವ್ಯರ್ಥ ಅಲ್ಲವಾ ಅಣ್ಣ? ಒಂದ್‌ ಪಕ್ಷ ಮಂಜಣ್ಣ ಗೆದ್ರೆ ಬಂದಿರುವ ವೋಟೆಲ್ಲ ಪ್ರೀತಂಗೌಡನ ಕಡೆಯಿಂದ ಬಂದಿದ್ದು ಎನ್ನುತ್ತಾರಾ? ಕಾಂಗ್ರೆಸ್‌ನಲ್ಲಿ ಇದ್ದುಕೊಂಡು ಸಚಿವರಾಗಿದ್ದ ಸಂದರ್ಭದಲ್ಲಿ ನಮ್ಮ ಬಿಜೆಪಿಯವ್ರ ಮೇಲೆ ಕೇಸ್‌ ಹಾಕ್ಸಿದ್ದಾರಲ್ಲ, ಅದೆಲ್ಲ ಮರೆಯಕ್ಕೆ ಆಯ್ತದಾ? ಹೋಗ್ಲಿ ಬಿಡಣ್ಣ ನೀವ್‌ ಹೇಳಿದ್ದು ಅರ್ಥ ಆಯ್ತು ವಾಪಸ್‌ ಎಲ್ಲಿಗೆ ಕಳುಹಿಸ್‌ಬೇಕೋ ಅಲ್ಲಿಗೆ ಕಳುಹಿಸುತ್ತೇವೆ'' ಎಂದಿದ್ದಾರೆ.

ಈ ಸಂಭಾಷಣೆ ನಡುವೆ ಪ್ರೀತಂಗೌಡ ಎಂದು ಹೇಳಲಾದ ವ್ಯಕ್ತಿಯು, ''ಇವರು ಗೆದ್ದರೆ, ನಾನೇ ವೋಟ್‌ ತಂದಿದ್ದು ಅಂತಾರೆ. ಸೋತರೆ, ಪಕ್ಷ ಬಿಡ್ತಾರೆ. ಇವರು ಪಕ್ಷದಲ್ಲಿ ಉಳಿಯುವವರು ಅಲ್ಲ'' ಎಂದು ಹೇಳುತ್ತಾರೆ. ಇದೀಗ ಈ ಸಂಭಾಷಣೆ ವೈರಲ್‌ ಆಗಿದೆ.

ಪ್ರೀತಮ್‌ ಗೌಡ ಸ್ಪಷ್ಟನೆ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಪ್ರೀತಂ ಗೌಡ ಅವರು, ''ಎ.ಮಂಜು ಪಕ್ಷ ಕ್ಕೆ ಸೇರ್ಪಡೆಗೆ ಮುಂಚೆ ಮಾತನಾಡಿದ ಆಡಿಯೋ ಇರಬಹುದು. ಆಗ ಕಾಂಗ್ರೆಸ್‌ನಲ್ಲಿ ಇದ್ದವರ ಕುರಿತು ನಾನು ಹೊಗಳಬೇಕಿತ್ತೇ? ಇದು ಎಡಿಟೆಡ್‌ ಆಡಿಯೋ. ನನ್ನ ಕಟ್ಟಿಹಾಕಲು ಇದು ವಿರೋಧಿಗಳ ಪಿತೂರಿ'' ಎಂದು ಆರೋಪಿಸಿದ್ದಾರೆ.

''ನನ್ನ ಮತ್ತು ಎ.ಮಂಜು ನಡುವೆ ವೈಮನಸ್ಸು ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಎ.ಮಂಜು ಅವರಿಗಿಂತ ಪ್ರೀತಮ್‌ಗೌಡ ಜಾಸ್ತಿ ಓಡಾಡುತ್ತಿದ್ದಾರೆ ಎಂದು ನಮ್ಮ ಮಧ್ಯೆ ಏನಾದ್ರೂ ಕಂದಕ ಸೃಷ್ಟಿಸಲು ಈ ಪ್ರಯತ್ನ ಮಾಡಿದ್ದಾರೆ'' ಎಂದು ಪ್ರೀತಂ ಆಕ್ರೋಶ ವ್ಯಕ್ತಪಡಿಸಿದರು.

''ಜೆಡಿಎಸ್‌ ಮಾಡಿರುವ ಪಿತೂರಿಯಿಂದ ಇದು ವೈರಲ್‌ ಆಗಿದೆ. ಹೊಳೇನರಸೀಪುರ ಮತ್ತು ಚನ್ನರಾಯಪಟ್ಟಣದಂತಹ ಕ್ಷೇತ್ರಗಳನ್ನು ನಾನು ಉಸ್ತುವಾರಿ ವಹಿಸಿಕೊಂಡಿದ್ದೇನೆ.

ಚುನಾವಣೆ ಫಲಿತಾಂಶ ಬಂದ ದಿನ ನಾನೂ ಕೂಡ ಮಾತನಾಡುತ್ತೇನೆ. ಮಂಡ್ಯದಲ್ಲಿ ಕೂಡ ನಾಲ್ಕು ಮಂದಿ ಸುಮಲತಾ ಅವರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಇದೆಲ್ಲ ಕುತಂತ್ರವಲ್ಲದೇ ಮತ್ತೇನು, ಜೆಡಿಎಸ್‌ಗೆ ಇಂತಹ ವಾಮಮಾರ್ಗ, ಕುತಂತ್ರದ ಆಡಳಿತ ಹೊಸತಲ್ಲ'' ಎಂದು ಟಾಂಗ್‌ ನೀಡಿದರು.

ಸತ್ಯಕ್ಕೆ ದೂರ

''ಶಾಸಕರ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು, ಇದು ಜೆಡಿಎಸ್‌ ಕುತಂತ್ರ'' ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ದೂರಿದ್ದಾರೆ.

''ನಾನು ಯಾರೊಂದಿಗೆ ಇರುತ್ತೇನೋ ಅಲ್ಲಿ ನಿಷ್ಠಾವಂತನಾಗಿ ಇರುತ್ತೇನೆ. 2009ರಲ್ಲಿ ಶಿವಪ್ಪನವರೊಂದಿಗೆ ಇದ್ದೆ. ನಂತರ ಸಿದ್ದರಾಮಯ್ಯ ಅವರೊಂದಿಗೆ ನಿಷ್ಠನಾಗಿಯೇ ಇದ್ದೆ. ಈ ಬಾರಿ ಶಾಸಕ ಪ್ರೀತಂ ಜೆ.ಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ನೇತೃತ್ವದಲ್ಲಿ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಕಾರ್ಯಕರ್ತರು, ಮುಖಂಡರು ಯಾರೂ ಕೂಡ ಗೊಂದಲಕ್ಕೆ ಒಳಗಾಗಬಾರದು,''ಎಂದು ಎ.ಮಂಜು ಮನವಿ ಮಾಡಿದ್ದಾರೆ. ''ಪ್ರೀತಂಗೌಡ ದಿನಕ್ಕೆ 20 ಗಂಟೆ ಶ್ರಮಿಸುತ್ತಿದ್ದಾರೆ. ಕಡೂರು ಶಾಸಕರು ಶಕ್ತಿಮೀರಿ ಶ್ರಮವಹಿಸಿದ್ದಾರೆ. ಮುಖಂಡರು, ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿರುವುದನ್ನು ಕಂಡು ಸಹಿಸಲಾಗದೆ ಇಂತಹ ಅಪಪ್ರಚಾರ ಮಾಡಲಾಗುತ್ತಿದೆ,''ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ