ಆ್ಯಪ್ನಗರ

ಶುಲ್ಕದಲ್ಲಿ ಶೇ.30 ಕಡಿತಕ್ಕೆ ಖಾಸಗಿ ಶಾಲೆಗಳ ಆಕ್ಷೇಪ: ಫೆ.23ಕ್ಕೆ ಬೃಹತ್‌ ಪ್ರತಿಭಟನೆ

ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶೇ. 30ರಷ್ಟು ಶುಲ್ಕ ಕಡಿತಗೊಳಿಸ ಬೇಕೆಂಬ ಅವೈಜ್ಞಾನಿಕ ಆದೇಶ ಹಿಂಪಡೆಯಲು ಆಗ್ರಹಿಸಿ ಫೆ. 23ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದೆ.

Vijaya Karnataka Web 12 Feb 2021, 9:45 pm
ಹಾಸನ: ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶೇ. 30ರಷ್ಟು ಶುಲ್ಕ ಕಡಿತಗೊಳಿಸ ಬೇಕೆಂಬ ಅವೈಜ್ಞಾನಿಕ ಆದೇಶ ಹಿಂಪಡೆಯಲು ಆಗ್ರಹಿಸಿ ಫೆ. 23ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುತ್ತಿದ್ದು, ಇದಕ್ಕೂ ಸರಕಾರ ಸ್ಪಂದಿಸದಿದ್ದಲ್ಲಿ ಶಾಲೆಗಳನ್ನೇ ಮುಚ್ಚುತ್ತೇವೆ ಎಂದು ಜಿಲ್ಲಾ ಅನುದಾನ ರಹಿತ ಶಾಲೆಗಳ ಮಂಡಳ ಒಕ್ಕೂಟದ ಅಧ್ಯಕ್ಷ ಬಿ.ಇ. ಶಿವರಾಮೇಗೌಡ ತಿಳಿಸಿದರು.
Vijaya Karnataka Web School fees
The government order said schools cannot collect fees under other headers like development fee.


ರಾಜ್ಯ ಮಟ್ಟದ ಶೈಕ್ಷಣಿಕ ಸಂಘಟನೆಗಳ ವತಿಯಿಂದ ಸರಕಾರದ ಆದೇಶ ವಿರೋಧಿಸಿ ಲಕ್ಷಾಂತರ ಸಂಖ್ಯೆಯ ಖಾಸಗಿ ಶಾಲೆ ಮುಖ್ಯಸ್ಥರು, ಶಿಕ್ಷಕ ವೃಂದ ಬೃಹತ್‌ ಪ್ರತಿಭಟನೆ ನಡೆಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶುಲ್ಕ ತೆಗೆದುಕೊಳ್ಳಬಾರದು, ಶಿಕ್ಷಕರ ವೇತನ ನಿಲ್ಲಿಸಬಾರದು, ಸೌಲಭ್ಯ ಕಡಿತಗೊಳಿಸಬಾರದು ಎಂಬ ಶಿಕ್ಷಣ ಸಚಿವರ ಆದೇಶ ಗಮನಿಸಿದರೆ ಅವರೊಬ್ಬ ಅಸಮರ್ಥ ಸಚಿವರು ಎಂದು ಭಾವಿಸಬೇಕಾಗುತ್ತದೆ ಎಂದು ಕಿಡಿಕಾರಿದರು.

ಲಾಕ್‌ಡೌನ್‌ನಿಂದ ಈವರೆಗೆ ಶಿಕ್ಷಕರಿಗೆ ವೇತನ ನೀಡಿದ್ದೇವೆ. ಬ್ಯಾಂಕ್‌ ಸಾಲ ಪಾವತಿಸಿದ್ದೇವೆ. ನಾವು ಏನೆಲ್ಲ ಕಸರತ್ತು ನಡೆಸಿ ಕಷ್ಟದಲ್ಲಿದ್ದರೂ, ಅದ್ಯಾವುದನ್ನು ಲೆಕ್ಕಿಸದೆ ನಮ್ಮ ಸಮಸ್ಯೆಗೆ ಸ್ಪಂದಿಸದೆ ಆದೇಶ ಹೊರಡಿಸುವುದನ್ನು ನಾವು ಒಪ್ಪಬೇಕೆ ಎಂದು ಪ್ರಶ್ನಿಸಿದರು.

ನಮ್ಮ ಮೊದಲ ಪುಟದಿಂದ ಎಲ್ಲಾ ಖಾಸಗಿ ಶಾಲೆಗಳು ಅಗ್ನಿಶಾಮಕ ಪರಿಕರಗಳನ್ನು ಅಳವಡಿಸಿ ಇಲಾಖೆಯಿಂದ ಎನ್‌ಒಸಿ ಪಡೆದುಕೊಳ್ಳಬೇಕು ಮತ್ತು ಪಿಡಬ್ಲ್ಯುಡಿ ಇಲಾಖೆಯ ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ಬಲವಂತ ಪಡಿಸಲಾಗಿದೆ. ಇದರಿಂದ ಸಂಸ್ಥೆಗಳಿಗೆ ನಾಲ್ಕರಿಂದ ಐದು ಲಕ್ಷ ರೂ. ವೆಚ್ಚ ಮಾಡುವುದು ಹೊರೆಯಾಗಲಿದೆ ಎಂದರು. ಟೀಚರ್‌ ವೆಲ್‌ಫೇರ್‌ ಫಂಡ್‌ನಲ್ಲಿ 3000 ಕೋಟಿ ರೂ. ಹಣವಿದ್ದು ಶಿಕ್ಷಕರ ನೆರವಿಗೆ ಧಾವಿಸಿ ಆರ್ಥಿಕ ಹೊರೆಯನ್ನು ತಗ್ಗಿಸಬೇಕು. ಆದರೆ ಶಿಕ್ಷಕರ ಅನುಕೂಲಕ್ಕೆ ಬಳಸದಿದ್ದ ಮೇಲೆ ಅದನ್ನು ಪಡೆಯವುದು ಏಕೆ ಎಂದು ಪ್ರಶ್ನಿಸಿದರು.

ಶಾಲಾ ಶುಲ್ಕ ಕಟ್ಟದ ಮಕ್ಕಳು ಡಿಫಾಲ್ಟರ್‌: ಪರೀಕ್ಷೆ ನೆಪದಲ್ಲಿ ಖಾಸಗಿ ಶಾಲೆಗಳಿಂದ ಬ್ಲ್ಯಾಕ್‌ಮೇಲ್‌!

ತಾರತಮ್ಯ ನೀತಿ: ಚಿತ್ರಮಂದಿರದಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ, ಕಲ್ಯಾಣ ಮಂಟಪದಲ್ಲಿ ಮದುವೆ ಶುಭ ಸಮಾರಂಭಕ್ಕೆ ಮಿತಿ ಇಲ್ಲದಂತೆ ತೆರೆಯಲು ಅವಕಾಶ ಕಲ್ಪಿಸಿರುವ ಸರಕಾರ ಪ್ರಾಥಮಿಕ ಶಾಲೆ ತೆರೆಯಲು ಅನುಮತಿ ನೀಡಲು ವಿಳಂಬ ಮಾಡುತ್ತಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು. ಆದಾಯ ಮೂಲವೆ ಪ್ರಾಥಮಿಕ ಹಂತದ ಶಾಲೆಗಳು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದನ್ನು ತಡೆಯಲು ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸುತ್ತೋಲೆ ಹೊರಡಿಸುವಂತೆ ಮನವಿ ಮಾಡಿದರು.

ಸರಕಾರ ಮತ್ತು ಶಿಕ್ಷಣ ಇಲಾಖೆ ಧನಾತ್ಮಕವಾಗಿ ಸ್ಪಂದಿಸಿ ಖಾಸಗಿ ಶಾಲೆಗಳ ನೆರವಿಗೆ ಬಾರದಿದ್ದರೆ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬೋಧನೆ ನಿಲ್ಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಒಕ್ಕೂಟದ ಉಪಾಧ್ಯಕ್ಷರಾದ ತಾರಾ ಎಸ್.‌ ಸ್ವಾಮಿ, ಕಾರ್ಯದರ್ಶಿ ಗಂಗಾಧರ್‌, ರಮೇಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ