ಆ್ಯಪ್ನಗರ

ಮಿಷನ್‌ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಸಿಬ್ಬಂದಿ ಪ್ರತಿಭಟನೆ

ನಗರದ ಆರ್‌ಸಿ ರಸ್ತೆಯಲ್ಲಿರುವ ಸಿಎಸ್‌ಐ ಮಿಷನ್‌ ಆಸ್ಪತ್ರೆಯಲ್ಲಿರುವ ಲ್ಯಾಬ್‌ ಅನ್ನು ಮತ್ತೊಂದು ಖಾಸಗಿ ಸಂಸ್ಥೆಗೆ ವಹಿಸದೇ ಇರುವ ಸಿಬ್ಬಂದಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿ ಆಡಳಿತ ಮಂಡಳಿ ನಿರ್ಧಾರದ ವಿರುದ್ಧ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

Vijaya Karnataka 9 Aug 2018, 5:00 am
ಹಾಸನ: ನಗರದ ಆರ್‌ಸಿ ರಸ್ತೆಯಲ್ಲಿರುವ ಸಿಎಸ್‌ಐ ಮಿಷನ್‌ ಆಸ್ಪತ್ರೆಯಲ್ಲಿರುವ ಲ್ಯಾಬ್‌ ಅನ್ನು ಮತ್ತೊಂದು ಖಾಸಗಿ ಸಂಸ್ಥೆಗೆ ವಹಿಸದೇ ಇರುವ ಸಿಬ್ಬಂದಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿ ಆಡಳಿತ ಮಂಡಳಿ ನಿರ್ಧಾರದ ವಿರುದ್ಧ ಸಿಬ್ಬಂದಿ ಪ್ರತಿಭಟನೆ ನಡೆಸಿದರು.
Vijaya Karnataka Web HSN-HSN8N1


ನಗರದ ಸಿಎಸ್‌ಐ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಕಳೆದ 36 ವರ್ಷಗಳಿಂದ ಮಿಷನ್‌ ಆಸ್ಪತ್ರೆಯಲ್ಲಿ ಲ್ಯಾಬ್‌ ಇನ್‌ಚಾರ್ಜ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೊರೆರಾಜು ಮತ್ತು 20 ವರ್ಷಗಳಿಂದ ಲ್ಯಾಬ್‌ನಲ್ಲೆ ಸೇವೆ ಸಲ್ಲಿಸುತ್ತಿರುವ ವಿಜಯಕುಮಾರಿ ಅವರನ್ನು ಏಕಾಏಕಿ ಈ ಭಾಗದಿಂದ ತೆಗೆದು ಹಾಕಿ ಬೇರೆಡೆಗೆ ಹಾಕಿರುವುದನ್ನು ಖಂಡಿಸಿದರು.

ಪ್ರತಿಭಟನೆ ವೇಳೆ ಮಿಷನ್‌ ಆಸ್ಪತ್ರೆಯ ಆಡಳಿತಾಧಿಕಾರಿ ರೋಹನ್‌ ಮತ್ತು ಮ್ಯಾನೇಜ್‌ಮೆಂಟ್‌ನ ಜ್ಯೋತಿ ಅವರು ಆಸ್ಪತ್ರೆ ಸಿಬ್ಬಂದಿಯವರ ಜತೆ ಚರ್ಚಿಸುವಾಗ ಇಬ್ಬರ ನಡುವೆ ಮಾತಿನ ವಾಗ್ವಾದ ಉಂಟಾಯಿತು. ಕೆಲವು ಸಮಯದಲ್ಲೆ ಪೊಲೀಸ್‌ ಸಿಬ್ಬಂದಿಯನ್ನು ಕರೆಯಿಸಿಕೊಂಡರು. ಬಳಿಕ ಮಾತನಾಡಿದ ಆಡಳಿತಾಧಿಕಾರಿ, 'ಇದು ನಮ್ಮ ನಿರ್ಧಾರವಲ್ಲ, ನಮ್ಮ ಮೇಲಿನ ಅಧಿಕಾರಿಗಳು ಹೇಳಿರುವಂತೆ ಲಾಬ್‌ನನ್ನು ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದ್ದೇವೆ' ಎಂದರು.

ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಿಷನ್‌ ಆಸ್ಪತ್ರೆ ಕಾರ್ಮಿಕರು, ಆಸ್ಪತ್ರೆಯಲ್ಲಿ ಸುಮಾರು 36 ವರ್ಷಗಳಿಂದಲೂ ಲ್ಯಾಬ್‌ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೊರೆರಾಜು ಮತ್ತು 20 ವರ್ಷಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿರುವ ವಿಜಯಕುಮಾರಿ ಇವರ ಹುದ್ದೆಯಿಂದ ತೆಗೆದುಹಾಕಿ, ಖಾಸಗಿಗೆ ಲ್ಯಾಬನ್ನು ವಹಿಸಲು ಮುಂದಾಗಿದ್ದಾರೆ. ಲ್ಯಾಬ್‌ಗೆ ಸಿಬ್ಬಂದಿಗಳ ಕೊರತೆ ಇದ್ದರೂ ಇಷ್ಟು ವರ್ಷಗಳ ಕಾಲ ಇಬ್ಬರೇ ನಡೆಸಿಕೊಂಡು ಬಂದಿರುತ್ತಾರೆ. ಅಭಿವೃದ್ಧಿಯಾಗಿರುವ ಲ್ಯಾಬ್‌ನನ್ನು ಖಾಸಗಿಗೆ ಕೊಡಲು ಹೊರಟಿದ್ದಾರೆ. ಕಳೆದ 6 ತಿಂಗಳಿನಿಂದ ಲ್ಯಾಬ್‌ ವಿಭಾಗಕ್ಕೆ ನಾಲ್ಕೈದು ಸಿಬ್ಬಂದಿಯನ್ನು ಕೇಳಲಾಗಿದ್ದರೂ ಇದುವರೆಗೂ ನೇಮಕ ಮಾಡಿರುವುದಿಲ್ಲ ಎಂದು ಆರೋಪಿಸಿದರು.

ಮಿಷನ್‌ ಆಸ್ಪತ್ರೆಯ ಆಡಳಿತಾಧಿಕಾರಿ ಫಾಧರ್‌ ರೋಹನ್‌ ಮತ್ತು ಮ್ಯಾನೇಜ್‌ಮೆಂಟ್‌ ಜ್ಯೋತಿ ಮಾತನಾಡಿ, ನಾವು ಲ್ಯಾಬ್‌ ವಿಭಾಗದಿಂದ ಇಬ್ಬರನ್ನು ಕೆಲಸದಿಂದ ತೆಗೆದು ಹಾಕಿರುವುದಿಲ್ಲ. ಬೇರೆ ವಿಭಾಗಕ್ಕೆ ವರ್ಗ ಮಾಡಿದ್ದೇವೆ. ದೊರೆರಾಜು ಮತ್ತು ವಿಜಯ ಕುಮಾರಿ ಇಬ್ಬರು ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಹಿರಿಯ ಅಧಿಕಾರಿಗಳ ಆದೇಶ ನಾವು ಪಾಲಿಸಬೇಕು. ಆಸ್ಪತ್ರೆಯಲ್ಲಿರುವ ಲ್ಯಾಬ್‌ ಅನ್ನು ದಿನದ 24 ಗಂಟೆ ಮಾಡಲು ಹೊರಗಿನಿಂದ ಒಂದು ತಂಡವನ್ನು ಕರೆಯಿಸುತ್ತಿದ್ದೇವೆ. 35ಲಕ್ಷ ರೂ. ವೆಚ್ಚದಲ್ಲಿ ಲ್ಯಾಬನ್ನು ಇನ್ನು ಅಭಿವೃದ್ಧಿ ಮಾಡಲು ಆಸ್ಪತ್ರೆಯಿಂದ ಸಾಧ್ಯವಿಲ್ಲದ ಕಾರಣ ಹೊರಗಿನ ಬೇರೆ ಕಂಪನಿಯವರಿಗೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ