ಆ್ಯಪ್ನಗರ

ದಲಿತರ ಜಾಗದಲ್ಲಿ ಲೇಔಟ್‌: ಪ್ರತಿಭಟನೆ

ದಲಿತರಿಗೆ ಸೇರಿದ ತಾಲೂಕಿನ ಕಸಬಾ ಹೋಬಳಿಯ ಸರ್ವೆ ನಂ. 232ರಲ್ಲಿ 5.38 ಎಕರೆ, 234ರಲ್ಲಿ 2.28 ಎಕರೆ ಜಾಗದ ನಕಲಿ ದಾಖಲೆ ಸೃಷ್ಟಿಸಿ ಪ್ರಭಾವಿಗಳು ಲೇಔಟ್‌ ಮಾಡಿ ವಂಚಿಸಲೆತ್ನಿಸಿದ್ದು, ನ್ಯಾಯ ದೊರಕಿಸುವಂತೆ ಸಮತಾ ಸೈನಿಕ ದಳ ನೇತೃತ್ವದಲ್ಲಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

Vijaya Karnataka 4 Jul 2019, 5:00 am
ಹಾಸನ: ದಲಿತರಿಗೆ ಸೇರಿದ ತಾಲೂಕಿನ ಕಸಬಾ ಹೋಬಳಿಯ ಸರ್ವೆ ನಂ. 232ರಲ್ಲಿ 5.38 ಎಕರೆ, 234ರಲ್ಲಿ 2.28 ಎಕರೆ ಜಾಗದ ನಕಲಿ ದಾಖಲೆ ಸೃಷ್ಟಿಸಿ ಪ್ರಭಾವಿಗಳು ಲೇಔಟ್‌ ಮಾಡಿ ವಂಚಿಸಲೆತ್ನಿಸಿದ್ದು, ನ್ಯಾಯ ದೊರಕಿಸುವಂತೆ ಸಮತಾ ಸೈನಿಕ ದಳ ನೇತೃತ್ವದಲ್ಲಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
Vijaya Karnataka Web HSN-HSN3N2


ವಿರೂಪಾಕ್ಷ ದೇವರಿಗೆ ಸೇರಿದ ಭೂಮಿಯನ್ನು ದಲಿತರು ಮತ್ತು ಒಕ್ಕಲಿಗರು ಏಳು ದಶಕದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. 2015ರಲ್ಲಿ ಮಹಿಳೆಯೊಬ್ಬರು ಸುಳ್ಳು ದಾಖಲೆ ಸೃಷ್ಟಿ ಮಾಡಿ ವಿರೂಪಾಕ್ಷ ದೇವರ ಹೆಸರಿನಲ್ಲಿರುವ ಸರ್ವೆ ನಂ. 250ರಲ್ಲಿ 1 ಎಕರೆ, 229ರಲ್ಲಿ 33 ಗುಂಟೆ ಜಮೀನು ಸೇರಿ ಒಟ್ಟು 8.20 ಎಕರೆ ಭೂಮಿಯನ್ನು ಕಬಳಿಸಿ ನಿವೇಶನ ಮಾಡಿ ಮಾರಾಟ ಮಾಡಿದ್ದಾರೆ. ಇದನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

8.20 ಎಕರೆ ಜಾಗದ ವಿವಾದ ಕೋರ್ಟ್‌ನಲ್ಲಿದ್ದು, ಅಕ್ರಮವಾಗಿ ಖಾತೆ ಮಾಡಿಸಿ, ಮಾರಾಟ ಮಾಡಲಾಗಿದೆ. ನಿವೇಶನದ ಹಕ್ಕು ಪತ್ರ ಮತ್ತು ಮನೆ ಕಟ್ಟಲು ಸಂಬಂಧಪಟ್ಟ ಇಲಾಖೆಗಳು ಪರವಾನಗಿ ನೀಡಬಾರದು ಎಂದು ಒತ್ತಾಯಿಸಿದರು.

ಸರ್ವೆ ನಂ. 232, 234, 229ರ ಭೂಮಿ ಹುಣಸಿನಕೆರೆ ಬಡಾವಣೆಯಲ್ಲಿದ್ದು, ಕೋರ್ಟ್‌ನಲ್ಲಿ ಈ ವಿವಾದ ಇತ್ಯರ್ಥವಾಗುವವರೆಗೂ ನಿವೇಶನಗಳ ಮಾರಾಟಕ್ಕೆ ಹಾಗೂ ಮನೆ ಕಟ್ಟಲು ಪರವಾನಗಿ ನೀಡಬಾರದು ಎಂದರು.

ಮನವಿ ಸ್ವೀಕರಿಸಿದ ಸಚಿವ ಎಚ್‌.ಡಿ. ರೇವಣ್ಣ, 'ಕಾನೂನು ಎಲ್ಲರಿಗೂ ಒಂದೇ, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು' ಎಂದು ಭರವಸೆ ನೀಡಿದರು.

ಮುಖಂಡರಾದ ಮರಿಜೋಸೆಫ್‌, ಸತೀಶ್‌ , ಪರಮೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ