ಆ್ಯಪ್ನಗರ

ಕನಿಷ್ಠ ಕೂಲಿ ಆಗ್ರಹಿಸಿ ಪ್ರತಿಭಟನೆ

ಹೈಕೋರ್ಟ್‌ ಆದೇಶದಂತೆ ಅನುಸೂಚಿತ 37 ಉದ್ದಿಮೆಗಳಲ್ಲಿ ಕನಿಷ್ಠ ಕೂಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಖಾನೆಗಳ ಕಾರ್ಮಿಕರು ಪ್ರತಿಭಟನೆ ನಡೆಸಿದರು.

Vijaya Karnataka 23 May 2019, 5:00 am
ಹಾಸನ : ಹೈಕೋರ್ಟ್‌ ಆದೇಶದಂತೆ ಅನುಸೂಚಿತ 37 ಉದ್ದಿಮೆಗಳಲ್ಲಿ ಕನಿಷ್ಠ ಕೂಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಕಾರ್ಖಾನೆಗಳ ಕಾರ್ಮಿಕರು ಪ್ರತಿಭಟನೆ ನಡೆಸಿದರು.
Vijaya Karnataka Web HSN-HSN22N10


ನಗರದ ಕಾರ್ಮಿಕ ಇಲಾಖೆ ಕಚೇರಿ ಎದುರು ಗಂಟೆಗೂ ಅಧಿಕ ಕಾಲ ಧರಣಿ ನಡೆಸಲಾಯಿತು. ಸರಕಾರ ಅನುಸೂಚಿ ಹೊರಡಿಸಿ ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಪಾಲಿಸಿಲ್ಲ. ಸರಕಾರ ಆದೇಶ ಹೊರಡಿಸಿದ ದಿನದಿಂದಲೇ ಶೇ.6ರಷ್ಟು ಬಡ್ಡಿಯೊಂದಿಗೆ ಬಾಕಿ ಹಣ ಪಾವತಿಸಬೇಕು. ಕಡಿಮೆ ಹಣ ನೀಡುತ್ತಿರುವ ಕಾರ್ಖಾನೆಗಳು ಕೂಡಲೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶುಲ್ಕ ಏರಿಕೆಗೆ ಖಂಡನೆ: ಅಭದ್ರತೆ ಜತೆಗೆ ಇತರೆ ಸಮಸ್ಯೆಗಳಿಂದ ದುಡಿಯುತ್ತಿರುವ ಕಾರ್ಮಿಕರು ಹಿತ ರಕ್ಷಣೆಗಾಗಿ ಸಂಘಟನೆ ಕಟ್ಟಿಕೊಳ್ಳುವುದು ಕಾರ್ಮಿಕರ ಹಕ್ಕು ಅಂತೆಯೆ, ಕಾರ್ಮಿಕ ಸಂಘ ನೋಂದಣಿಗಾಗಿ ಇದುವರೆಗೆ ಕೇವಲ 10 ರೂ. ಶುಲ್ಕ ನಿಗದಿಪಡಿಸಲಾಗಿತ್ತು. ಆದರೆ, ಈಗ ಸಾವಿರ ರೂ. ಗೆ ಏರಿಸಿದ್ದು ಭಾರಿ ಹೊರೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ಅವೈಜ್ಞಾನಿಕ ನೀತಿಯೀಂದ ಅಂಗನವಾಡಿ ಕಾರ್ಯಕರ್ತೆಯರು, ಟೈಲರ್‌ಗಳು, ಮೆಕಾನಿಕ್‌, ಹಮಾಲಿ, ಕ್ಷೌರಿಕರು, ಚಿಂದಿ ಆಯುವವರು ಹಾಗೂ ಚಾಲಕರಿಗೆ ಭಾರಿ ತೊಂದರೆಯಾಗುತ್ತಿದೆ ಎಂದರು. ಕಾರ್ಮಿಕ ಇಲಾಖೆಯಿಂದ ದೊರೆಯಬೇಕಿರುವ ಯಾವ ಸವಲತ್ತು ಅರ್ಹರಿಗೂ ತಲುಪುತ್ತಿಲ್ಲ. ಸ್ಮಾರ್ಟ್‌ ಕಾರ್ಡ್‌ ನೀಡುವುದಾಗಿ ಅರ್ಜಿ ಸ್ವೀಕರಿಸಿ ವರ್ಷವಾದರೂ ಇದುವರೆಗೆ ವಿತರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌, ಉಪಾಧ್ಯಕ್ಷೆ ಇಂದಿರಮ್ಮ, ಪ್ರಕಾಶ್‌ ಹಾಗೂ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ