ಆ್ಯಪ್ನಗರ

ಬೇಲೂರು: ಪ್ರಚಾರ ಗಿಟ್ಟಿಸಲು ಪುಲ್ವಾಮಾ ದಾಳಿ ವೈಭವೀಕರಣ

ಬೇಲೂರು: ಪುಲ್ವಾಮಾ ದಾಳಿಯನ್ನು ವೈಭವೀಕರಸಿಕೊಂಡು ಪ್ರಚಾರ ಗಿಟ್ಟಿಸುವ ಪ್ರಧಾನಿ ನರೇಂದ್ರ ಮೋದಿಯವರು ದೇಶದೊಳಗೆ ಆರ್‌ಡಿಎಕ್ಸ್‌ ಬಾಂಬ್‌ ಹೇಗೆ ಬಂತು ಎಂಬುದಕ್ಕೆ ಉತ್ತರ ನೀಡುತ್ತಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

Vijaya Karnataka 12 Apr 2019, 5:00 am
ಬೇಲೂರು: ಪುಲ್ವಾಮಾ ದಾಳಿಯನ್ನು ವೈಭವೀಕರಸಿಕೊಂಡು ಪ್ರಚಾರ ಗಿಟ್ಟಿಸುವ ಪ್ರಧಾನಿ ನರೇಂದ್ರ ಮೋದಿಯವರು ದೇಶದೊಳಗೆ ಆರ್‌ಡಿಎಕ್ಸ್‌ ಬಾಂಬ್‌ ಹೇಗೆ ಬಂತು ಎಂಬುದಕ್ಕೆ ಉತ್ತರ ನೀಡುತ್ತಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.
Vijaya Karnataka Web pulwama attack m b patil allegation pm narendra modi
ಬೇಲೂರು: ಪ್ರಚಾರ ಗಿಟ್ಟಿಸಲು ಪುಲ್ವಾಮಾ ದಾಳಿ ವೈಭವೀಕರಣ


ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 2014 ರಲ್ಲಿ ಕನಸಿನ ಬೀಜವನ್ನು ಬಿತ್ತಿ ಪ್ರಚಾರಕ್ಕೆ ಕೋಟ್ಯಂತರ ರೂಗಳನ್ನು ವ್ಯಯಿಸಿ ಅಧಿಕಾರ ಪಡೆದ ಮೋದಿಯವರು ಐದು ವರ್ಷದಲ್ಲಿ ಜನರಿಗೆ ನೀಡಿದ ಶಾಶ್ವತ ಯೋಜನೆಯಾದರೂ ಏನು? ನೋಟ್‌ ಬ್ಯಾನ್‌ನಿಂದ ದೇಶದಲ್ಲಿ ಆರ್ಥಿಕ ಸ್ಥಿತಿ ಅಧಃಪತನಕ್ಕೆ ಇಳಿದಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೇವಲ ಭಾಷಗಳಿಂದ ಪ್ರಧಾನಿ ಕಾಲ ಕಳೆದಿದ್ದಾರೆ. ಸದ್ಯ ದೇಶದ ಜನತೆಗೆ ಬೇಕಿರುವುದು ಬರೀ ಮಾತಲ್ಲ. ಕೆಲಸ ಮಾತ್ರ. ದೇಶದಲ್ಲಿ ಭದ್ರತೆ ಇಲ್ಲದ ಕಾರಣದಿಂದಲೇ ಬಾಂಬ್‌ ಪ್ರವೇಶ ಮಾಡಿ 44 ಸೈನಿಕರ ಹತ್ಯೆಗೆ ಕಾರಣವಾಗಿದೆ. ಆದರೆ, ಇಂತಹ ಹತ್ಯೆಯನ್ನು ಮೋದಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕೋಮುವಾದಿ ಪಕ್ಷ ವನ್ನು ದೂರ ಇಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ ಹೆಚ್ಚು ಸ್ಥಾನ ಪಡೆದರೂ ಜೆಡಿಎಸ್‌ಗೆ ಪಟ್ಟ ಕಟ್ಟಲಾಗಿದೆ. ಮಹಾಘಟ ಬಂಧನ್‌ ಕೂಡ ರೂಪಿಸಲಾಗಿದೆ. ಜನರು ಈ ಘಟಬಂಧನವನ್ನು ಬೆಂಬಲಿಸುತ್ತಾರೆ. ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಯುವಕರಾಗಿದ್ದು ಜನಸೇವೆಯ ಗುರಿಯನ್ನು ಹೊಂದಿದ್ದಾರೆ. ಇವರು ಎರಡೂ ಪಕ್ಷ ಗಳ ಕಾರ‍್ಯಕರ್ತರನ್ನು ಸಮಾನವಾಗಿ ಗೌರವಿಸಿಕೊಂಡು ಮುನ್ನಡೆಯಬೇಕು ಎಂದರು.

ಪ್ರಜ್ವಲ್‌ ರೇವಣ್ಣ ಮಾತನಾಡಿ ಸಚಿವ ಎಂ.ಬಿ.ಪಾಟೀಲ್‌ ಅವರು ಈ ಹಿಂದೆ ರಣಘಟ್ಟ ಯೋಜನೆ ಜಾರಿಯಲ್ಲಿ ಪೂರಕವಾಗಿ ಕೆಲಸ ಮಾಡಿದ್ದಾರೆ. ಬೇಲೂರ ತಾಲೂಕಿನ ನೀರಾವರಿ ಯೋಜನೆಗೆ ಸಹಕಾರ ನೀಡಿದ್ದಾರೆ. ಎತ್ತಿನ ಹೊಳೆ ಯೋಜನೆಯಲ್ಲಿ ತಾಲೂಕಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಹಕರಿಸಿದ್ದಾರೆ. ಇವರ ಸಹಕಾರದಿಂದ ತಾಲೂಕಿನ ಬಯಲು ಸೀಮೆಯ ಜನರಿಗೆ ಸಾಕಷ್ಟು ಉಪಯೋಗ ಉಂಟಾಗಿದೆ ಎಂದು ತಿಳಿಸಿದರು.

ಶಾಸಕ ಕೆ.ಎಸ್‌.ಲಿಂಗೇಶ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಕೆ.ಎಸ್‌.ಪೂರ್ಣೇಶ್‌, ಬಿ.ಡಿ.ಚಂದ್ರೇಗೌಡ, ಎಂ.ಎ.ನಾಗರಾಜು, ವೈ.ಎನ್‌.ಕೃಷ್ಣೇಗೌಡ, ಎಚ್‌.ಎಂ.ದಯಾನಂದ್‌, ವೈ.ಟಿ.ದಾಮೋದರ್‌, ಶ್ರೀನಿಧಿ, ರವಿಕುಮಾರ್‌, ನಾಗೇಶ್‌, ರಂಗೇಗೌಡ, ಅಬ್ಕುಲ್‌ ಸುಭಾನ್‌, ಜಿ.ಟಿ.ಇಂದಿರಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ