ಆ್ಯಪ್ನಗರ

ಮಾಲೇಕಲ್ಲು ತಿರುಪತಿ ಸ್ವಾಮಿಯ ಪುರಪ್ರವೇಶಕ್ಕೆ ನಗರಸಭೆ ಆಡಳಿತ ಸ್ವಾಗತ

ಅಮರಗಿರಿ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ನಗರ ಪುರಪ್ರವೇಶವನ್ನು ಶಾಸ್ತ್ರಬದ್ಧ ಸಾಂಪ್ರದಾಯಿಕ ಮೂಲಕ ನಗರಸಭೆಯ ಆಡಳಿತ ಪ್ರತಿವರ್ಷದಂತೆ ನಗರದ ಶಿವಾಲಯ ಭಾಗದಲ್ಲಿ ನಿಂತು ಸ್ವಾಗತಿಸಿದರು.

Vijaya Karnataka 16 Jul 2019, 5:00 am
ಅರಸೀಕೆರೆ : ಅಮರಗಿರಿ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ನಗರ ಪುರಪ್ರವೇಶವನ್ನು ಶಾಸ್ತ್ರಬದ್ಧ ಸಾಂಪ್ರದಾಯಿಕ ಮೂಲಕ ನಗರಸಭೆಯ ಆಡಳಿತ ಪ್ರತಿವರ್ಷದಂತೆ ನಗರದ ಶಿವಾಲಯ ಭಾಗದಲ್ಲಿ ನಿಂತು ಸ್ವಾಗತಿಸಿದರು.
Vijaya Karnataka Web HSN-HSN15ASK-P1


ಜಾತ್ರೆಯ ನಂತರದ ಮೂರನೆ ದಿನಕ್ಕೆ ನಗರ ಶಿವಾಲಯ ಬಳಿ ಆಗಮಿಸಿದ ದೇವರನ್ನು ಸಮಸ್ತ ನಾಗರಿಕರ ಪರವಾಗಿ ಸ್ವಾಗತಿಸಿ ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಮಾತನಾಡಿ, ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಜಾತ್ರೆಯು ಕರ್ನಾಟಕದಲ್ಲಿ ಮನೆ ಮಾತಾಗಿದ್ದು, ನೂರಾರು ವರ್ಷಗಳಿಂದ ಮನೆ ದೇವರನ್ನಾಗಿ ಸ್ವೀಕರಿಸಿ ಪೂಜಿಸುತ್ತಿದ್ದ ಅನೇಕ ಕುಟುಂಬದವರು ಬೇರೆಬೇರೆ ಊರುಗಳಲ್ಲಿ ನೆಲೆಸಿದ್ದರೂ ಇಂದಿಗೂ ಸಾಂಪ್ರದಾಯಿಕವಾಗಿ ಜಾತ್ರೆಯಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ ಎಂದರು.

ಉತ್ಸವ ಸಮಿತಿ ಸದಸ್ಯ ಟಿ.ಆರ್‌.ನಾಗರಾಜ್‌ ಮಾತನಾಡಿ, ಶ್ರೀಗಳ ಮೆರವಣಿಗೆ ಮೂಲಕ ಗಣಪತಿ ಪಂಡಲ್‌ನವರೆಗೆ ಸಂಚರಿಸಿ ಕೆಲ ಕಾಲ ಕುಳ್ಳಿರಿಸಲಾಗುವುದು. ನಂತರ ಶ್ರೀಯವರನ್ನು ಪುನಃ ಶ್ರೀಕ್ಷೇತ್ರಕ್ಕೆ ಕರೆತಂದು ರಾತ್ರಿ ಸಿಂಹಾವಾನೋತ್ಸವ, ಧ್ವಜಾವರೋಹಣ, ಮಹಾಪೂರ್ಣಾವತಿ, ರಕ್ಷಾಬಂಧನ ವಿಸರ್ಜನೆ ಮತ್ತು ಮೌನಬಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗವುದು ಎಂದರು.

ಮೆರವಣಿಗೆಯಲ್ಲಿ ನಗರಸಭೆ ವ್ಯವಸ್ಥಾಪಕ ಮಹಾತ್ಮ, ರಾಜಸ್ವ ಹೇಮಂತ್‌ಕುಮಾರ್‌, ಗೋಪಿ, ರಾಜು, ಆರೋಗ್ಯ ನಿರೀಕ್ಷಕ ರಮೇಶ್‌, ರೇವಣ್ಣ ಸಿದ್ದಪ್ಪ, ಅನಿತಾ, ಪುಷ್ಪಲತಾ, ಅಗ್ಗುಂದ ಗ್ರಾ.ಪಂ ಸದಸ್ಯ ಗೀರೀಶ್‌, ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ವಿದ್ಯಾಧರ್‌, ರಾಜು, ಗಿರೀಶ್‌, ಜಿ.ಎನ್‌. ಮನೋಜ್‌ಕುಮಾರ್‌, ಮಲ್ಲಿಕಾರ್ಜುನ್‌, ಸಿಖಂದರ್‌, ಟಿಪ್ಪು, ಉತ್ಸವ ಸಮಿತಿ ಸದಸ್ಯರಾದ ರಂಗರಾಜು ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

ಭಕ್ತರಿಗೆ ನಿರಾಸೆ : ಕಳೆದ 4 ವರ್ಷಗಳಿಂದ ನಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದು ಕಾರಣ ಹೇಳಿ ನಗರದಾದ್ಯಂತ ನಡೆಯುತ್ತಿದ್ದ ದೇವರ ಮೆರವಣಿಗೆಯನ್ನು ನಿಲ್ಲಿಸಿದ್ದ ದೇವಸ್ಥಾನದ ಸಮಿತಿ ಇಂದು ರಸ್ತೆ ಕಾಮಗಾರಿ ನಡೆದಿದ್ದರೂ ಊರಿನಲ್ಲಿ ಮೆರವಣಿಗೆ ನಡೆಸದೆ ಇದ್ದದ್ದು ಸಮಿತಿಯ ಏಕಪಕ್ಷೀಯ ನಡೆಯಿಂದ ಭಕ್ತರು ನಿರಾಸೆಗೊಳಪಡಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ