ಆ್ಯಪ್ನಗರ

ರಾಘವೇಂದ್ರಸ್ವಾಮಿ ಆರಾಧನಾ ಮಹೋತ್ಸವ

ಪಟ್ಟಣದ ಕೋಟೆಯಲ್ಲಿರುವ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಪೂರ್ವಾರಾಧನೆ ನಡೆಯಿತು.

Vijaya Karnataka 17 Aug 2019, 5:00 am
ಚನ್ನರಾಯಪಟ್ಟಣ: ಪಟ್ಟಣದ ಕೋಟೆಯಲ್ಲಿರುವ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಪೂರ್ವಾರಾಧನೆ ನಡೆಯಿತು.
Vijaya Karnataka Web raghavendra swamy aradhana mahothsva
ರಾಘವೇಂದ್ರಸ್ವಾಮಿ ಆರಾಧನಾ ಮಹೋತ್ಸವ


ಬೆಳಗ್ಗೆ 6.30ರಿಂದಲೇ ಉಷಃಕಾಲ ಪೂಜೆಯೊಂದಿಗೆ ಆರಂಭಗೊಂಡ ಪೂಜಾವಿಧಾನಗಳು ಮಧ್ಯಾಹ್ನದ ಮಹಾಮಂಗಳಾರತಿಯೊಂದಿಗೆ ಸಂಪನ್ನಗೊಂಡಿತು. ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆಯ ನಂತರ ವಿಪ್ರ ಮಹಿಳಾವೃಂದದವರಿಂದ ಭಜನೆ ಕಾರ‍್ಯಕ್ರಮ ನಡೆಯಿತು. ಶ್ರೀಮಠದ ಅರ್ಚಕರಾದ ಕೆ.ವಿ.ಅನಂತಾಚಾರ‍್ಯರ ನೇತೃತ್ವದಲ್ಲಿ ಮಹಾಮಂಗಳಾರತಿಯ ನಂತರ ತೀರ್ಥ, ಪ್ರಸಾದ ವಿನಿಯೋಗವಾಯಿತು. ಸಂಜೆ ಹರ್ಷ ಎನ್‌.ಕೌಂಡಿನ್ಯ ಅವರಿಂದ ಹಾಡುಗಾರಿಕೆ ಹಾಗೂ ವಿದುಷಿ ಎಸ್‌.ವಿದ್ಯಾರಾಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ‍್ಯಕ್ರಮ ಜರುಗಿತು. ಇವರೊಂದಿಗೆ ಪಕ್ಕವಾದ್ಯ ವಯೋಲಿನ್‌ನಲ್ಲಿ ಮೈಸೂರಿನ ಎಂ.ವಿ.ಶಾಂತಕುಮಾರ್‌, ಮೃದಂಗ ಡಾ.ಜಯರಾಂ ಮತ್ತು ಘಟಿಂನಲ್ಲಿ ವಿದ್ವಾನ್‌ ಎಂ.ಜೆ.ಕಿರಣ್‌ ಸಹಕರಿಸಿದರು.

ಗುರುವಾರ ಸಾಮೂಹಿಕ ಸತ್ಯನಾರಾಯಣಪೂಜೆ ಶ್ರೀಮಠದ ಆವರಣದಲ್ಲಿಯೇ ಜರುಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಗೋಪೂಜೆ, ಧಾನ್ಯಪೂಜೆಯ ನಂತರ ವಿದುಷಿ ಲತಾಶ್ರೀ ತಂಡದವರಿಂದ ಭರತನಾಟ್ಯ ನಡೆಯಿತು. ನಂತರ ಪ್ರಸನ್ನಮೂರ್ತಿಯವರಿಂದ ಹಾಡುಗಾರಿಕೆ ರಾತ್ರಿ 8-30ಕ್ಕೆ ಮಹಾಮಂಗಳಾರತಿ ನಡೆಯಿತು.

ಮಧ್ಯಾರಾಧನೆ ಅಂಗವಾಗಿ ಶನಿವಾರ ಪಂಚಾಮೃತ ಅಭಿಷೇಕ, ಪಾದಪೂಜೆಯ ನಂತರ ಅಲಂಕಾರ ಪಂಕ್ತೀಯ ಬ್ರಾಹ್ಮಣಪೂಜೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಆಯೋಜನೆಗೊಂಡಿದೆ. ಸಂಜೆ ದೊಡ್ಡಳ್ಳಿರಮೇಶ್‌ ಹಾಗೂ ಮಹದೇವ್‌ ತಂಡದವರಿಂದ ಭಾವಗೀತೆ , ಭಕ್ತಿಗೀತೆ ಕಾರ‍್ಯಕ್ರಮಗಳು ನಡೆಯಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ