ಆ್ಯಪ್ನಗರ

ಉತ್ತಮ ಮಳೆ: ಕೃಷಿ ಚಟುವಟಿಕೆ ಚುರುಕು

ಹಲವೆಡೆ ಶುಕ್ರವಾರ ತಡರಾತ್ರಿ ಉತ್ತಮವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಕಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.

Vijaya Karnataka 3 Jun 2019, 5:00 am
ಕೇರಳಾಪುರ: ಹಲವೆಡೆ ಶುಕ್ರವಾರ ತಡರಾತ್ರಿ ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ರೈತರು ಕಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.
Vijaya Karnataka Web HSN-HSN 01 KRL 01 (1)


ಕೆಲವು ಕಡೆ ತಡರಾತ್ರಿ 11 ಗಂಟೆಗೆ ಸುಮಾರಿಗೆ ಶುರುವಾರ ಗುಡುಗು ಸಹಿತ ಮಳೆ ನಸುಕಿನ 3 ಗಂಟೆ ವರೆಗೆ ಸೋನೆಯಾಗಿ ಸುರಿದು ಇಳೆಯ ತೇವಾಂಶ ಹೆಚ್ಚಿಸಿದೆ. ಮಳೆಯಿಲ್ಲದೆ ಕಂಗೆಟ್ಟಿದ್ದ ರೈತರ ಮೊಗದಲ್ಲೀಗ ಮಂದಹಾಸ ಮೂಡಿದ್ದು ಜಮೀನುಗಳತ್ತ ತೆರಳಿ ಕಷಿ ಕಾಯಕ ಬಿರುಸುಗೊಳಿಸಿದ್ದಾರೆ.

ಕೆಲ ತಿಂಗಳಿಂದ ಮುಂಗಾರು ಪೂರ್ವ ಮಳೆ ಸರಿಯಾಗಿ ಬೀಳದೆ ರೈತರನ್ನು ಹೈರಾಣಾಗಿಸಿತ್ತು. ಆಲೂಗಡ್ಡೆ, ಮುಸುಕಿನ ಜೋಳ, ಶುಂಠಿ ಮತ್ತಿತರ ದ್ವಿದಳ ಧಾನ್ಯಗಳ ಬಿತ್ತನೆಗೆ ಜಮೀನು ಉಳುಮೆ ಮಾಡಲು ಸಾಧ್ಯಗಾದಷ್ಟು ಮಟ್ಟಿಗೆ ವರುಣ ಮುನಿಸು ಮುಂದುವರೆದಿತ್ತು. ಇದೀಗ ಹದ ಮಳೆಗೆ ರೈತರು ಜಮೀನು ಉಳುಮೆ ಕೈಗೊಂಡು ಬಿತ್ತನೆಗೆ ಸಿದ್ದಪಡಿಸುತ್ತಿದ್ದಾರೆ.

ಹೊಗೆಸೊಪ್ಪು ನಾಟಿಗೆ ಪ್ರಸಿದ್ಧಿಯಾದ ರಾಮನಾಥಪುರ ಭಾಗದಲ್ಲಿ ಮಳೆಯಿಲ್ಲದೆ ಸಸಿ ಮಡಿ ಬೆಳೆಸಿದ್ದ ತಂಬಾಕು ಗಿಡಗಳು ಅತಿಯಾಗಿ ಬೆಳೆದು ಕರಿಕಡ್ಡಿ ಕಾಯಿಲೆ, ಕೀಟ ಬಾಧೆಗೆ ತುತ್ತಾಗಿ ನಾಶವಾಗುವ ಹಂತಕ್ಕೆ ತಲುಪಿದ್ದವು. ಕೆಲ ದಿನಗಳ ವಿಂದೆ ಒಂದೆರಡು ಸಲ ಬಿದ್ದ ಮಳೆಗೆ ನಾಟಿಯಾಗಿದ್ದ ಸಸಿಗಳು ಸಹ ಹದ ಮಳೆಯಿಲ್ಲದೆ ಬಿಸಿಲಿನ ತಾಪಕ್ಕೆ ಸಾಕಷ್ಟು ಕಡೆ ಒಣಗಿ ಹಾಳಾಗಿದ್ದವು. ಇದೀಗ ಸುರಿದ ಮಳೆಗೆ ರೈತರು ಶನಿವಾರ ಬೆಳಗ್ಗೆ ಎದ್ದೊಡನೆ ಹೊಗೆಸೊಪ್ಪು ನಾಟಿ ನಡೆಸಲು ಹೊಲಗಳತ್ತ ಮುಖ ಮಾಡಿದ್ದರು. ಹೀಗಾಗಿ ಕಷಿ ಜಮೀನುಗಳಲ್ಲಿ ಎತ್ತ ನೋಡಿದರೂ ಈ ಭಾಗದಲ್ಲಿ ರೈತಾಪಿ ವರ್ಗದ ಜನರು ತಂಬಾಕು ನಾಟಿ ಕಾರ್ಯದಲ್ಲಿ ತೊಡಗಿದ್ದು ಕಂಡುಬಂತು.

ಈ ಬಾರಿ ಮಳೆ ತಡವಾಗಿ ಬಿದ್ದ ಪರಿಣಾಮ ಸಕಾಲದಲ್ಲಿ ತಂಬಾಕು ನಾಟಿಗೆ ಹಿನ್ನಡೆಯಾಗಿದೆ. ಇದರಿಂದ ಇಳುವರಿ ಪ್ರಮಾಣವೂ ತಗ್ಗಲಿದೆ. ಈ ವೇಳೆಗಾಗಲೇ ನಾಟಿ ಕೆಲಸ ಪೂರ್ಣಗೊಳಿಸಿ ರಸಗೊಬ್ಬರ ನೀಡಿ ಗಿಡಗಳು ಮೇಲೆಳಬೇಕಿತ್ತು. ವರಣನ ಅವಕಪೆಯಿಂದಾಗಿ ಸಕಾಲದಲ್ಲಿ ನಾಟಿ ಮಾಡಲು ತೊಂದರೆಯಾಗಿದೆ. ಕಟ್ಟೇಪುರ ನಾಲಾ ಪ್ರದೇಶದಲ್ಲಿ ನಾಟಿ ಮಾಡುವ ಸಮಯವೂ ಮೀರಿದ್ದು ಈ ಸಲ ಅಪಾರ ರೈತರು ತಂಬಾಕು ಬೆಳೆ ನಷ್ಟ ಅನುಭವಿಸಬೇಕಾದ ಸ್ಥಿತಿ ತಲೆದೋರಿದೆ.
ಮಳೆಯಾಶ್ರಿತ ಪ್ರದೇಶದಲ್ಲಷ್ಟೆ ಅಲ್ಪಸ್ವಲ್ಪ ತಂಬಾಕು ಬೆಳೆಯಲು ಈಗ ಸುರಿದ ಮಳೆ ಅನುಕೂಲಕರವಾಗಿದೆ ಎನ್ನುತ್ತಾರೆ ಹೊಗೆಸೊಪ್ಪು ಬೆಳೆಗಾರರು.

ಮುಂಗಾರು ಪೂರ್ವ ಮಳೆ ಈ ಸಲ ಸರಿಯಾಗಿ ಬೀಳದೆ ಭೂಮಿ ಉಳುಮೆ ಮಾಡಲು ಕಷ್ಟವಾಗಿದ್ದು ಬೆಳೆ ಬಿತ್ತನೆಗೆ ತೊಡಕಾಗಿತ್ತು. ಶುಕ್ರವಾರ ತಡರಾತ್ರಿ ಸುರಿದ ಹದ ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಗಿದ್ದು ಸದ್ಯಕ್ಕೆ ವರುಣನಿಗಾಗಿ ಪ್ರಾರ್ಥಿಸಿ ಮುಗಿಲಿನತ್ತ ಮುಖ ಮಾಡುವುದು ತಪ್ಪಿದೆ. ಮಳೆ ಬಿದ್ದ ಸಂತಸದಲ್ಲಿ ಆಳುಗಳನ್ನು ಕರೆತದಂದು ಹೊಗೆಸೊಪ್ಪು ನಾಟಿ ಕಾರ್ಯ ನಡೆಸಲಾಗುತ್ತಿದೆ.
- ಶಿವಣ್ಣ, ತಂಬಾಕು ಬೆಳೆಗಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ