ಆ್ಯಪ್ನಗರ

ಮಳೆ ಆರ್ಭಟಕ್ಕೆ ಅಪಾರ ಹಾನಿ

ಬಿರುಗಾಳಿ ಸಹಿತ ಗುಡುಗು -ಸಿಡಿಲಿನ ಆರ್ಭಟದೊಂದಿಗೆ ಶುಕ್ರವಾರ ಸಂಜೆ ಗಂಟೆಗಟ್ಟಲೆ ಜಿಲ್ಲಾದ್ಯಂತ ನಾನಾ ಭಾಗಗಳಲ್ಲಿ ಸುರಿದ ಮಳೆಯಿಂದ ಮನೆಗಳು ಹಾನಿಗೊಂಡಿವೆ.

Vijaya Karnataka 26 May 2019, 5:00 am
ಹಾಸನ : ಬಿರುಗಾಳಿ ಸಹಿತ ಗುಡುಗು ಧಿಧಿ-ಸಿಡಿಲಿನ ಆರ್ಭಟದೊಂದಿಗೆ ಶುಕ್ರವಾರ ಸಂಜೆ ಗಂಟೆಗಟ್ಟಲೆ ಜಿಲ್ಲಾದ್ಯಂತ ನಾನಾ ಭಾಗಗಳಲ್ಲಿ ಸುರಿದ ಮಳೆಯಿಂದ ಮನೆಗಳು ಹಾನಿಗೊಂಡಿವೆ.
Vijaya Karnataka Web HSN-IMG-20190525-WA0049


ವಿದ್ಯುತ್‌ ಕಂಬಗಳು ಮುರಿದು ಬಿದ್ದು, 2 ಜಾನುವಾರು ಅಸುನೀಗಿದ್ದಲ್ಲದೆ, ಆಸ್ತಿಪಾಸ್ತಿಯೂ ಹಾನಿಯಾಗಿದೆ. ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ಸೇರಿದಂತೆ ಹಲವೆಡೆ ಮರಗಳು ಬುಡ ಮೇಲಾಗಿದ್ದು, ಚನ್ನರಾಯಪಟ್ಟಣದ ವಿದ್ಯಾನಗರಿಯಲ್ಲಿ ಭಾರಿ ಗಾತ್ರದ ಮರ ಬಿದ್ದು ಕಾರು ಹಾಗೂ ವಾಹನಗಳು ಜಖಂಗೊಂಡಿವೆ.

ಅರಸೀಕೆರೆಯ ಚೌಡೇಶ್ವರಿ ನಗರದ ಧನಂಜಯ್‌, ಪುಟ್ಟರಾಜು, ಜಯಣ್ಣ ಸೇರಿದಂತೆ ಶಿವಾಲಯದ ಸುತ್ತಮುತ್ತಲಿನ ಮನೆಗಳಿಗೆ ಭಾರಿ ಹಾನಿಯಾಗಿದೆ. ನಗರದ ತಗ್ಗು ಪ್ರದೇಶದ ಬಡಾವಣೆಗಳಾದ ಚೌಡೇಶ್ವರಿ ನಗರ, ಇಂದಿರಾನಗರ, ಸರಸ್ವತಿಪುರಂ, ಹಾಸನ ರಸ್ತೆಯ ಎಡ ಹಾಗೂ ಬಲಭಾಗದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರಿತಪಿಸುವಂತಾಯಿತು.

ವಿದ್ಯುತ್‌ ಕಂಬಗಳು ಹಾಗೂ ಬೃಹತ್‌ ಮರಗಳು ಧರೆಗುರುಳಿದ್ದರಿಂದ ವಿದ್ಯುತ್‌ ಕಡಿತಗೊಂಡ ಪರಿಣಾಮ ರಾತ್ರಿಯಿಡಿ ನಗರ ವಾಸಿಗಳು ಕತ್ತಲೆಯಲ್ಲಿ ಕಾಲ ಕಳೆಯಬೇಕಾಯಿತು. ಇನ್ನು ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮುಖ್ಯ ರಸ್ತೆಗಳ ಚರಂಡಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯಗಳು ಮಳೆಯ ರಭಸಕ್ಕೆ ರಸ್ತೆ ಮೇಲೆ ಹರಿಯಿತು.

ಜಾನುವಾರು ಸಾವು: ತಾಲೂಕಿನ ಗಂಡಸಿ ಹೋಬಳಿ ಚೀರನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಹೋರಿ, ಒಂದು ಹಸು ಮೃತಪಟ್ಟಿದೆ. ಒಟ್ಟಾರೆ ಮಳೆಯಿಲ್ಲದೆ ಪರಿತಪಿಸುತ್ತಿದ್ದ ತಾಲೂಕಿನ ಜನತೆಗೆ ವರುಣ ಹರುಷದ ಜತೆಗೆ ಆತಂಕ ಕೂಡ ಸೃಷ್ಟಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ