ಆ್ಯಪ್ನಗರ

ಸಂಧಾನದಿಂದ ಅಯೋಧ್ಯೆ ವಿವಾದ ಇತ್ಯರ್ಥ ಅನುಮಾನ: ಪೇಜಾವರ ಶ್ರೀ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಮುಸ್ಲಿಮರಿಗೂ ಮಸೀದಿ ನಿರ್ಮಾಣವಾಗಲಿ. ಆದರೆ, ಅದು ಅಲ್ಲೆ ಆಗಬೇಕೆಂದೇನಿಲ್ಲ. ಅಯ್ಯೋಧ್ಯೆಯ ಸ್ವಲ್ಪ ದೂರದಲ್ಲಿ ಆಗಲಿ ಎಂದು ತಿಳಿಸಿದರು.

Vijaya Karnataka Web 12 Mar 2019, 6:39 pm
ಹಾಸನ: ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರು ರಾಮ ಮಂದಿರ ಮಧ್ಯಸ್ಥಿಕೆ ವಹಿಸಿರುವುದನ್ನು ಸ್ವಾಗತಿಸಿರುವ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇ ಬೇಕು ಎಂದು ಆಗ್ರಹಿಸಿದ್ದಾರೆ.
Vijaya Karnataka Web pejavar


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಮುಸ್ಲಿಮರಿಗೂ ಮಸೀದಿ ನಿರ್ಮಾಣವಾಗಲಿ. ಆದರೆ, ಅದು ಅಲ್ಲೆ ಆಗಬೇಕೆಂದೇನಿಲ್ಲ. ಅಯ್ಯೋಧ್ಯೆಯ ಸ್ವಲ್ಪ ದೂರದಲ್ಲಿ ಆಗಲಿ ಎಂದು ತಿಳಿಸಿದರು.

ಹಿಂದೂ-ಮುಸ್ಲಿಂ ಎಂದು ತಾರತಮ್ಯ ಬೇಡ. ಎಲ್ಲರೂ ಒಂದೇ. ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಗೆ ಎರಡು ತಿಂಗಳ ಕಾಲಾವಕಾಶ ಇದೆ. ಸಮಿತಿ ಏನೂ ತೀರ್ಮಾಣ ತೆಗೆದುಕೊಳ್ಳುತ್ತದೆ ನೋಡೋಣ. ಆದರೆ, ಈ ಸಮಿತಿಯ ಸಂಧಾನದಿಂದ ಸಮಸ್ಯೆ ಬರೆಹರಿಯುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದರು.

ಚುನಾವಣೆ ಸಂದರ್ಭದಲ್ಲಿ ರಾಜಕೀಯವಾಗಿ ಏನನ್ನೂ ಮಾತನಾಡುವುದಿಲ್ಲ. ದೇಶದ ಮತದಾರರು ಕಾಳಜಿಯಿಂದ ಮತದಾನ ಮಾಡಬೇಕು. ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ ಮತ ನೀಡಿ ಎಂದು ಹೇಳುವುದಿಲ್ಲ. ಆದರೆ, ಪಕ್ಷಾತೀತವಾಗಿ ಮತ ಚಲಾಯಿಸಿ ಎಂದು ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ