ಆ್ಯಪ್ನಗರ

ಹಾಸನ: ಪಡಿತರ ಅಕ್ರಮ ದಂದೆ, 450ಕ್ಕೂ ಹೆಚ್ಚು ಚೀಲ ಅಕ್ಕಿ ವಶ

ಲಾರಿಯನ್ನು ನಿಲ್ಲಿಸಿಕೊಂಡು ಪಡಿತರ ಅಕ್ಕಿ ಇಳಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಕ್ರಮ ಖಚಿತಪಡಿಸಿಕೊಂಡ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು.

Vijaya Karnataka Web 9 May 2022, 11:49 pm
ಹಾಸನ: ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ಕಾರ್ಡ್‌ದಾರರಿಗೆ ವಿತರಿಸಬೇಕಿದ್ದ 471 ಚೀಲ ಅಕ್ಕಿ ಸಹಿತ ಲಾರಿಯನ್ನು ನಗರದ ಅರಸೀಕೆರೆ ರಸ್ತೆಯ ಕೈಗಾರಿಕಾ ಪ್ರದೇಶದ ಗೋದಾಮಿನಲ್ಲಿ ವಶಪಡಿಸಿಕೊಂಡಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಲಾರಿಯನ್ನು ನಿಲ್ಲಿಸಿಕೊಂಡು ಪಡಿತರ ಅಕ್ಕಿ ಇಳಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಕ್ರಮ ಖಚಿತಪಡಿಸಿಕೊಂಡ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ದೂರು ನೀಡಿ ಇಲಾಖಾ ವಿಚಾರಣೆ ನಡೆಸುವುದಾಗಿ ತಿಳಿಸಿದ್ದು, ಅಕ್ರಮದ ಜಾಲ ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.

ಸೀರೆ ಹಂಚಿಕೆ ಎಡವಟ್ಟು: ತಾಯಂದಿರ ದಿನವೇ ಉಸಿರುಗಟ್ಟುವ ವಾತಾವರಣದಲ್ಲಿ ಸಿಲುಕಿ ಬದುಕಿಬಂದ ಕಂದಮ್ಮ

ಏನಿದು ಪ್ರಕರಣ?

‘ಭದ್ರಾವತಿಯ ವ್ಯಕ್ತಿಗೆ ಸೇರಿದ ಲಾರಿ ಮೇ 7ರ ಶನಿವಾರ ನಗರಕ್ಕೆ ಬಂದಿದ್ದು, ಹೊಳೆನರಸೀಪುರ ಪಶುಆಹಾರ ಘಟಕದ ಬಳಿಗೆ ಬಂದ ವ್ಯಕ್ತಿ ತನ್ನನ್ನು ಇಳಿಸಿ ತನ್ನ ಮಾಲೀಕರ ಸೂಚನೆಯಂತೆ ಲಾರಿಯನ್ನು ತೆಗೆದುಕೊಂಡು ಹೋದ ಎಂದು ಚಾಲಕ ನಿಜಾಮ್ ತಿಳಿಸಿದರು. ಮೇ 8 ಸಂಜೆ 5ಕ್ಕೆ ಲಾರಿ ತಂದವರು ಕೈಗಾರಿಕಾ ಪ್ರದೇಶದ ಗೋದಾಮು ಬಳಿಗೆ ಹೋಗಿ ಲೋಡ್ ಇಳಿಸಲು ಕಾರ್ಮಿಕರಿಲ್ಲ ಎಂದು ಹೇಳಿದರು.

ಮೇ 9 ರಂದು ಬೆಳಗ್ಗೆ ಅನ್‌ಲೋಡ್ ಮಾಡುವುದಾಗಿ ತಿಳಿಸಿದರು ಇದಕ್ಕೆ ತನ್ನ ಮಾಲೀಕನ ಒಪ್ಪಿಗೆ ಇದ್ದ ಕಾರಣ ತಾನು ಏನು ಪ್ರಶ್ನಿಸಲು ಹೋಗಲಿಲ್ಲ ಎಂದು ಚಾಲಕ ತಿಳಿಸಿದ.

ಸೋಮವಾರ ಲಾರಿಯಿಂದ ಅಕ್ಕಿ ಚೀಲವನ್ನು ಇಳಿಸುವಾಗ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು ಆಗ ಇದು ಅಕ್ರಮ ಎಂದು ತಿಳಿಯಿತು ಎಂದು ಚಾಲಕ ತಿಳಿಸಿದ. ಲಾರಿಯಲ್ಲಿದ್ದ ನೂರಾರು ಮೂಟೆ ಅಕ್ಕಿ ಚೀಲದಲ್ಲಿ ಅರ್ಧದಷ್ಟನ್ನು ಹೊರ ರಾಜ್ಯದ ಕೂಲಿ ಕಾರ್ಮಿಕರು ಗೋದಾಮಿಗೆ ಇಳಿಸಿದ್ದು, ಕೆಲ ಗಂಟೆ ಕಳೆದಿದ್ದರೆ ಅಕ್ಕಿಚೀಲ ಬದಲಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ಸ್ಥಳದಲ್ಲಿದ್ದ ಪೊಲೀಸರು ತಿಳಿಸಿದರು.
ಪಿಎಸ್ಐ ನೇಮಕಾತಿ ಅಕ್ರಮ : ಹಾಸನದಲ್ಲಿ ತಂದೆ-ಮಗ ಸೇರಿ ಮೂವರನ್ನು ಬಂಧಿಸಿ ಸಿಐಡಿ ವಿಚಾರಣೆ!
ಕುವೆಂಪುನಗರ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಸಿಪಿಐ ಕೃಷ್ಣರಾಜು ,ಆಹಾರ ಇಲಾಖೆ ಅಧಿಕಾರಿಗಳು ಆಗಮಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ