ಆ್ಯಪ್ನಗರ

ಗೌಡರನ್ನು ಸೋಲಿಸಿದ ಕೀರ್ತಿ ರೇವಣ್ಣಗೆ ಸಲ್ಲಬೇಕು

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಸೋಲಿಸಿದ ಕೀರ್ತಿ ಸಚಿವ ಎಚ್‌.ಡಿ.ರೇವಣ್ಣ ಅವರ ಕುಟುಂಬಕ್ಕೆ ಸಲ್ಲಲಿದೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಟೀಕಿಸಿದರು.

Vijaya Karnataka 26 May 2019, 5:00 am
ಹಾಸನ : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಸೋಲಿಸಿದ ಕೀರ್ತಿ ಸಚಿವ ಎಚ್‌.ಡಿ.ರೇವಣ್ಣ ಅವರ ಕುಟುಂಬಕ್ಕೆ ಸಲ್ಲಲಿದೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಟೀಕಿಸಿದರು.
Vijaya Karnataka Web revenna defeat devegowda
ಗೌಡರನ್ನು ಸೋಲಿಸಿದ ಕೀರ್ತಿ ರೇವಣ್ಣಗೆ ಸಲ್ಲಬೇಕು


ಎಚ್‌. ಡಿ.ದೇವೇಗೌಡರು ಹಾಸನದಲ್ಲಿ ನಿಲ್ಲಬೇಕು, ಜಿಲ್ಲೆಯ ಧ್ವನಿಯಾಗಬೇಕೆಂಬುದು ಜನತೆಯ ಅಪೇಕ್ಷೆಯಾಗಿತ್ತು. ಆದರೆ ಕುಟುಂಬ ರಾಜಕಾರಣವನ್ನು ಮುಂದುವರರಿಸುವ ಉದ್ದೇಶದಿಂದ ಅಡುಗೆ ಮನೆಯಲ್ಲಿ ನಿರ್ಧಾರ ಕೈಗೊಂಡು ದೇಶದ ಮುತ್ಸದ್ದಿ ರಾಜಕಾರಣಿಯನ್ನು ವಲಸೆ ಹೋಗುವಂತೆ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿರು.

ಗೌಡರನ್ನು ಸೋಲಿಸಿದ ಸಂಪೂರ್ಣ ಕೀರ್ತಿ ಸಚಿವ ಎಚ್‌.ಡಿ.ರೇವಣ್ಣ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ನೂತನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸಲ್ಲುತ್ತದೆ. ಇದರೊಟ್ಟಿಗೆ ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋಲಿಗೆ ರೇವಣ್ಣ ಅವರಿಗೆ ಮ್ಯಾನ್‌ ಆಫ್‌ ದಿ ಮ್ಯಾಚ್‌ ನೀಡಬೇಕು. ಸುಮಲತ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಮಂಡ್ಯ ಕ್ಷೇತ್ರಕ್ಕೆ ಹೈ ವೋಲ್ಟೇಜ್‌ ನೀಡಿದ್ದೇ ರೇವಣ್ಣ. ಮತ್ತೊಬ್ಬರ ಬಗ್ಗೆ ಕೀಳಾಗಿ ಮಾತನಾಡುವುದನ್ನು ರೇವಣ್ಣ ಅವರು ನಿಲ್ಲಿಸದಿದ್ದರೆ ಈ ಬಾರಿ ಮಂಡ್ಯದಲ್ಲಿ ಬಂದ ಫಲಿತಾಂಶ ಮುಂದೆ ಹಾಸನದಲ್ಲೂ ಮರುಕಳಿಸಲಿದೆ ಎಂದರು.

ಅಭಿವೃದ್ಧಿ ಎಂದರೆ ಇರುವುದನ್ನೇ ಒಡೆದು ಕಟ್ಟುವುದಲ್ಲ. ಸ್ಮಾರ್ಟ್‌ ಸಿಟಿ ತರುವುದು ನಮ್ಮ ಬದ್ಧತೆ. ಮುಂದಿನ ದಿನಗಳಲ್ಲಿ ತರಲಾಗುವುದು. ಐಐಟಿ ತರುವುದರಿಂದ ನಮ್ಮ ಜಿಲ್ಲೆಯ ಜನತೆಗೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ನಮ್ಮ ರೈತರು ಜಮೀನು ಕಳೆದುಕೊಂಡರು. ಹಾಸನಕ್ಕೆ ಮೊದಲು ಐಟಿ ಕಂಪನಿಗಳು ಬರಲಿ ಐಐಟಿ ಬೇಡ. ರೈತರಿಗೆ ಜಮೀನು ಹಿಂದಿರುಗಿಸಲಿ ಎಂದರು.

ಬಿಜೆಪಿ ಕಳೆದ ಬಾರಿ ಒಂದೂವರೆ ಲಕ್ಷ ಮತ ಪಡೆದಿತ್ತು. ಈ ಬಾರಿ ಉತ್ತಮ ಹೋರಾಟ ಮಾಡಿ ಐದೂವರೆ ಲಕ್ಷ ಮತ ಪಡೆದಿದೆ. ಜಿಲ್ಲೆಯಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿ ಹೊರಹೊಮ್ಮುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ