ಆ್ಯಪ್ನಗರ

ರೇವಣ್ಣರ ನಿಂಬೆ ಹಣ್ಣು ಪೂಜೆ ಫಲ ನೀಡಲಿಲ್ಲ: ಎ.ಮಂಜು ಲೇವಡಿ

ಎಚ್‌.ಡಿ.ರೇವಣ್ಣ ಅವರ ನಿಂಬೆ ಹಣ್ಣು, ಬರಿಕಾಲು ಪೂಜೆ ಯಾವುದೇ ರೀತಿಯ ಪ್ರಯೋಜನ ನೀಡಲಿಲ್ಲ ಎಂದು ಮಾಜಿ ಸಚಿವ ಎ.ಮಂಜು ಲೇವಡಿ ಮಾಡಿದ್ದಾರೆ.

Vijaya Karnataka 25 Jul 2019, 5:00 am
ಮೈಸೂರು: ಎಚ್‌.ಡಿ.ರೇವಣ್ಣ ಅವರ ನಿಂಬೆ ಹಣ್ಣು, ಬರಿಕಾಲು ಪೂಜೆ ಯಾವುದೇ ರೀತಿಯ ಪ್ರಯೋಜನ ನೀಡಲಿಲ್ಲ ಎಂದು ಮಾಜಿ ಸಚಿವ ಎ.ಮಂಜು ಲೇವಡಿ ಮಾಡಿದ್ದಾರೆ.
Vijaya Karnataka Web revennas lemon fruit did not yield a manju teased
ರೇವಣ್ಣರ ನಿಂಬೆ ಹಣ್ಣು ಪೂಜೆ ಫಲ ನೀಡಲಿಲ್ಲ: ಎ.ಮಂಜು ಲೇವಡಿ


ಚಾಮುಂಡಿ ಬೆಟ್ಟದಲ್ಲಿ ಬುಧವಾರ ನಡೆದ ಚಾಮುಂಡೇಶ್ವರಿ ವರ್ಧಂತಿ ಉತ್ಸವದಲ್ಲಿ ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

''ದೇವೇಗೌಡರ ಕುಟುಂಬಕ್ಕೆ 9ರ ಕಂಟಕ ಇದೆ ಎಂದು ಈ ಹಿಂದೆಯೇ ಹೇಳಿದ್ದೆ. ಬರಿಕಾಲಿನಲ್ಲಿ ನಡೆದಾಡಿದ್ರೆ, ನಿಂಬೆಹಣ್ಣು ಹಿಡಿದುಕೊಂಡು ಓಡಾಡಿದರೆ ನಮ್ಮ ಫ್ಯಾಮಿಲಿಗೆ ಒಳ್ಳೆಯದಾಗುತ್ತದೆ ಎಂದುಕೊಂಡಿದ್ದರು. ಆದರೆ, ಅದು ಯಾವೂದೂ ಆಗಲಿಲ್ಲ. ಮಂಗಳವಾರ ವಿಶ್ವಾಸಮತ ಕೋರುವುದನ್ನು ಮುಂದೂಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದರು. ಪ್ರಯೋಜನವಾಗಲಿಲ್ಲ. ಅವರ ನಿಂಬೆಹಣ್ಣು ಪೂಜೆಗೆ ತಕ್ಕ ಉತ್ತರ ಸಿಕ್ಕಿದೆ. ಎಲ್ಲರಿಗೂ ದೇವರು ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. 1999, 2009 ಹಾಗೂ 2019 ಅವರಿಗೆ ಕೂಡಿ ಬರುವುದಿಲ್ಲ ಎಂದು ಹೇಳಿದ್ದೆ,'' ಎಂದು ತಿಳಿಸಿದರು.

''ಕಳೆದ 10 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಪ್ರಹಸನಕ್ಕೆ ತೆರೆ ಬಿದ್ದಿದೆ. ಮೈತ್ರಿ ಸರಕಾರವನ್ನು ಯಾರೂ ಬೀಳಿಸಲಿಲ್ಲ. ಅವರೇ ಬೀಳಿಸಿಕೊಂಡಿದ್ದಾರೆ. ರಾಜ್ಯಕ್ಕೆ ಬಿ.ಎಸ್‌.ಯಡಿಯೂರಪ್ಪ ಹಾಗೂ ಮೋದಿ ಅವರು ಒಳ್ಳೆಯ ಆಡಳಿತ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ರಾಜ್ಯ ಸುಭಿಕ್ಷವಾಗಿರಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ