ಆ್ಯಪ್ನಗರ

ಹಾಸನ: ಪುನರ್ವಸು ಮಳೆಯಿಂದ ನದಿಗಳಿಗೆ ಜೀವಕಳೆ; ಯಗಚಿ ಆಣೆಕಟ್ಟು ಭರ್ತಿಗೆ 3 ಅಡಿ ಮಾತ್ರ ಬಾಕಿ

ಹಾಸನ ಹಾಗೂ ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ನದಿಗಳಿಗೆ ಜೀವಕಳೆ ಬಂದಂತಾಗಿದೆ. ಬೇಲೂರು ಬಳಿಯ ಯಗಚಿ ಆಣೆಕಟ್ಟಿಗೆ ಹೆಚ್ಚಿನ ಒಳಹರಿವು ಹರಿದು ಬರುತ್ತಿದ್ದು, ಜಲಾಶಯ ಭರ್ತಿಯಾಗಲು ಕೇವಲ ಮೂರು ಅಡಿ ಬಾಕಿಯಿದೆ.

Vijaya Karnataka Web 17 Jul 2020, 5:29 pm
ಹಾಸನ: ಜಲಾಶಯದ ನದಿ ಪಾತ್ರದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದ ಒಳ ಹರಿವು ಹೆಚ್ಚಾಗಿದ್ದು, ಬೇಲೂರು ತಾಲೂಕಿನ ಯಗಚಿ ಅಣೆಕಟ್ಟು ಭರ್ತಿಯಾಗಲು ಮೂರು ಅಡಿ ಮಾತ್ರ ಬಾಕಿಯಿದೆ. ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಯಗಚಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬಂದಿದ್ದು ಭರ್ತಿಯಾಗಲು 3 ಅಡಿ ಬೇಕಾಗಿದೆ.
Vijaya Karnataka Web rising the inflow to yagachi dam belur after heavy rainfall in district
ಹಾಸನ: ಪುನರ್ವಸು ಮಳೆಯಿಂದ ನದಿಗಳಿಗೆ ಜೀವಕಳೆ; ಯಗಚಿ ಆಣೆಕಟ್ಟು ಭರ್ತಿಗೆ 3 ಅಡಿ ಮಾತ್ರ ಬಾಕಿ


ಜಲಾಶಯದ ಗರಿಷ್ಠ ನೀರಿನ ಮಟ್ಟ 3.603 ಟಿಎಂಸಿ ಇದ್ದು ಶುಕ್ರವಾರ 3.103 ಟಿಎಂಸಿ ನೀರು ಬಂದಿದೆ. ಒಳ ಹರಿವು 170 ಕ್ಯೂಸೆಕ್ಸ್ ಬರುತ್ತಿದೆ. ಯಗಚಿ ನದಿ ಹರಿದು ಬರುವ ಪ್ರದೇಶಗಳಾದ ಆಲ್ದೂರು, ಮಾಕೋನಹಳ್ಳಿ, ಸಿಂಗಾಪುರದ ಭಾಗದಲ್ಲಿ ವಾಡಿಕೆ ಮಳೆ ಕೈಕೊಟ್ಟಿದ್ದರೂ ಪುನರ್ವಸು ಮಳೆ ಭರ್ಜರಿಯಾಗಿರುವುದರಿಂದ ಕಳೆದ 2 ದಿನಗಳಿಂದ ಒಳ ಹರಿವು ಹೆಚ್ಚಾಗಿದೆ.

ಕಳೆದ ವರ್ಷ ಜುಲೈ ನಂತರ ಮಳೆಯ ಆರ್ಭಟ ಜೋರಾಗಿತ್ತು ಆಗಸ್ಟ್‌ನಲ್ಲಿ ಜಲಾಶಯ ಭರ್ತಿ ಯಾಗಿ 5 ಕ್ರೆಸ್ಟ್ ಗೇಟ್ ಮೂಲಕ ನೀರನ್ನು ಹೊರಬಿಡಲಾಗಿತ್ತು. ಆದರೆ ಈ ಬಾರಿ ಜುಲೈ ತಿಂಗಳಲ್ಲೇ ಒಳ ಹರಿವು ಹೆಚ್ಚಾಗಿರುವುದರಿಂದ ಐದಾರು ದಿನದಲ್ಲಿ ಜಲಾಶಯ ಭರ್ತಿಯಾಗುವ ಅಂದಾಜಿದೆ.

ಬೆಳೆಯುವ ಹಂತದಲ್ಲೇ ಕೊಳೆಯುತ್ತಿದೆ ಆಲೂಗಡ್ಡೆ: ತಲೆ ಮೇಲೆ ಕೈಹೊತ್ತು ಕುಳಿತ ಹಾಸನ ರೈತರು
ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಯಗಚಿ ಜಲಾಶಯಕ್ಕೆ ಒಳ ಅರಿವು ಹೆಚ್ಚಾಗುತ್ತಿದ್ದು ಮಾದಿಹಳ್ಳಿ ಹಾಗೂ ಹಳೇಬೀಡು ಹೋಬಳಿ ಕೆರೆಗಳಿಗೆ ಏತ ನೀರಾವರಿ ಮೂಲಕ ಯಗಚಿ ಜಲಾಶಯದಿಂದ ನೀರು ಹರಿಸಲು ಶಾಸಕ ಕೆ.ಎಸ್.ಲಿಂಗೇಶ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಹಾಗೂ ಅತಿ ಶೀಘ್ರವಾಗಿ ಅಧಿಕಾರಿಗಳು ನೀರು ಹರಿಸಲು ಮುಂದಾಗಬೇಕು ಇಲ್ಲದಿದ್ದರೆ ಹೊರಾಟ ಅನಿವಾರ್ಯ.
ಪುಷ್ಪಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಸೋಮಶೇಖರ ಸ್ವಾಮೀಜಿ

ಈ ಜಲಾಶಯದಿಂದ ಪಟ್ಟಣ ಸೇರಿ ಚಿಕ್ಕಮಗಳೂರು ನಗರ ಹಾಗೂ ಅರಸೀಕೆರೆಯ 51 ಗ್ರಾಮಗಳಿಗೆ ಮತ್ತು ತಾಲೂಕಿನ 12 ಗ್ರಾಮಗಳಿಗೆ ಕುಡಿಯುವ ನೀರು ಕೊಡಲಾಗುತ್ತಿದೆ. ಚಿಕ್ಕಮಗಳೂರು ಮತ್ತು ಬೇಲೂರು ಪಟ್ಟಣಗಳು ದಿನಕ್ಕೆ ಕ್ರಮವಾಗಿ 1.85 ಮತ್ತು 0.058 ಕ್ಯೂಸೆಕ್‌ ನೀರನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಇದೇ ಜಲಾಶಯದಿಂದ ಹಾಸನ ತಾಲೂಕು ಕಟ್ಟಾಯ ಭಾಗದ 37 ಸಾವಿರ ಎಕರೆ ಅಚ್ಚುಕಟ್ಟು, ಹಳೆಬೀಡು, ಮಾದೀಹಳ್ಳಿ ಹೋಬಳಿಗೆ ಏತ ನೀರಾವರಿ ಮೂಲಕ ನೀರನ್ನು ಹರಿಸಲಾಗುತ್ತಿದೆ.

ಬಿಸಿಲೆ ಘಾಟ್‌ ಸುತ್ತಮುತ್ತ ಸ್ವಯಂ ಪ್ರೇರಿತ ಬಂದ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ