ಆ್ಯಪ್ನಗರ

ಭೀಕರ ಅಪಘಾತ: ಇಬ್ಬರ ಸಾವು

ರಾಷ್ಟ್ರೀಯ ಹೆದ್ದಾರಿ ಅರಸೀಕೆರೆ, ತಿಪಟೂರು ರಸ್ತೆ ರಾಮಸಾಗರ ಬಳಿ ಓಮ್ನಿ ಹಾಗೂ ಸರಕು ಸಾಗಣೆ ವಾಹನದ ನಡುವೆ ಸೋಮವಾರ ರಾತ್ರಿ 8ಕ್ಕೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರಿಗೆ ತೀವ್ರಗಾಯವಾಗಿದೆ.

Vijaya Karnataka 20 Nov 2018, 8:59 pm
ಅರಸೀಕೆರೆ: ರಾಷ್ಟ್ರೀಯ ಹೆದ್ದಾರಿ ಅರಸೀಕೆರೆ, ತಿಪಟೂರು ರಸ್ತೆ ರಾಮಸಾಗರ ಬಳಿ ಓಮ್ನಿ ಹಾಗೂ ಸರಕು ಸಾಗಣೆ ವಾಹನದ ನಡುವೆ ಸೋಮವಾರ ರಾತ್ರಿ 8ಕ್ಕೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರಿಗೆ ತೀವ್ರಗಾಯವಾಗಿದೆ.
Vijaya Karnataka Web road mishap two killed
ಭೀಕರ ಅಪಘಾತ: ಇಬ್ಬರ ಸಾವು


ಬೆಂಗಳೂರು ದೇವನಹಳ್ಳಿ ಬಳಿಯ ಕೊಡಬುರುಕಿ ಗ್ರಾಮದ ಮಧು(35) ಮೃತರು. ಮತ್ತೊಬ್ಬರ ಹೆಸರು ತಿಳಿದು ಬಂದಿಲ್ಲ. ಗಾಯಾಳುಗಳಾದ ರಾಜು, ಗೌತಮ್‌ಯಾದವ್‌, ಮುನಿಯಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ದೌಡಾಯಿಸಿ ಗಾಯಾಳು ಮತ್ತು ಶವಗಳನ್ನು ನಗರದ ಸರಕಾರಿ ಜೆಸಿ ಆಸ್ಪತ್ರೆಗೆ ಸಾಗಿಸಿದರು. ಅಪಘಾತದಿಂದ ಕೆಲಕಾಲ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ