ಆ್ಯಪ್ನಗರ

ದರೋಡೆಯಾಗಿದೆ ಎಂದು ನಂಬಿಸಲು ಹೋಗಿ ಸಿಕ್ಕಿಬಿದ್ದರು, ದೂರುದಾರ ಸೇರಿ ನಾಲ್ವರ ಬಂಧನ, 54.30 ಲಕ್ಷ ರೂ. ವಶ

ಸುಲಿಗೆ ಮಾಡಿದ್ದ ಆರೋಪಿಗಳು ನುಗ್ಗೇಹಳ್ಳಿ ಬಸ್ ನಿಲ್ದಾಣದ ಬಳಿ ಇರುವುದನ್ನು ಖಚಿತ ಪಡಿಸಿಕೊಂಡು ದಿವಾಕರ ಹಾಗೂ ಮಂಜುನಾಥನನ್ನು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ ಆದರ್ಶನೇ ಪ್ರಮುಖ ಆರೋಪಿ ಎಂದು ಸಂಗತಿ ಬೆಳಕಿಗೆ ಬಂದಿತು.

Vijaya Karnataka Web 20 Mar 2020, 7:43 pm
ಹಾಸನ; ಹಣ ದೋಚಿ ದರೋಡೆ ಎಂದು ಬಿಂಬಿಸಲು ಹೊರಟಿದ್ದ ನಾಲ್ವರನ್ನು ಚನ್ನರಾಯಪಟ್ಟಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web ಪೊಲೀಸ್‌
ಪೊಲೀಸ್‌


ಚನ್ನರಾಯಪಟ್ಟಣ ವಾಸಿಗಳಾದ ಆದರ್ಶ , ದಿವಾಕರ, ಮಂಜುನಾಥ ಹಾಗೂ ಶಿವಮೊಗ್ಗದ ವಸಂತ ಬಂತ ಆರೋಪಿಗಳು.

ಚನ್ನರಾಯಪಟ್ಟಣದ ಶ್ರೀ ರಾಮ ಫೈನಾನ್ಸ್ ನಲ್ಲಿ ಸಾಲಗಾರರು ಪಾವತಿ ಮಾಡಿದ 54.30 ಲಕ್ಷ ರೂ. ಹಣವನ್ನು ಹಾಸನದ ಆಕ್ಸಿಸ್ ಬ್ಯಾಂಕಿಗೆ ಪಾವತಿಮಾಡಲು ಬುಧವಾರ ತೆಗೆದುಕೊಂಡು ಬಂದಿದ್ದು, ಬ್ಯಾಂಕ್ ಸಮಯ ಆಗಿದ್ದರಿಂದ ಹಿಂತಿರುಗುವ ವೇಳೆ ಬೆಲಸಿಂದ ಪಾರ್ಕ್ ಬಳಿ ಬೈಕ್ ನಲ್ಲಿ ಬಂದ ಅಪರಿಚಿತರು ಚಾಕು, ಮಾರಕಾಸ್ತ್ರ ತೋರಿಸಿ ಹಣ ದೋಚಿಕೊಂಡು ಹೋಗಿದ್ದಾರೆ ಎಂದು ಬ್ರಿಕ್ಸ್ ಕಂಪೆನಿಯ ಉದ್ಯೋಗಿ ಆದರ್ಶ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ.

ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಮೇಲ್ನೋಟಕ್ಕೆ ಕಟ್ಟುಕಥೆಯ ಪ್ರಕರಣ ಎಂಬುದನ್ನು ಅರಿತಿದ್ದ ಪೊಲೀಸರು ಜಾಡು ಹಿಡಿದು
ಹೋಗಿ ದೂರು ನೀಡಿದ್ದ ಆದರ್ಶನ ಬಗ್ಗೆಯೇ ಸಂಶಯ ಹೊಂದಿದ್ದರು.

ಪೊಲೀಸರು ಆರೋಪಿಗಳ ಪತ್ತೆಗೆ ನಿಖರ ಮಾಹಿತಿ ಸಂಗ್ರಹಿಸಿದ್ದರು. ಸುಲಿಗೆ ಮಾಡಿದ್ದ ಆರೋಪಿಗಳು ನುಗ್ಗೇಹಳ್ಳಿ ಬಸ್ ನಿಲ್ದಾಣದ ಬಳಿ ಇರುವುದನ್ನು ಖಚಿತ ಪಡಿಸಿಕೊಂಡು ದಿವಾಕರ ಹಾಗೂ ಮಂಜುನಾಥನನ್ನು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ ಆದರ್ಶನೇ ಪ್ರಮುಖ ಆರೋಪಿ ಎಂದು ಸಂಗತಿ ಬೆಳಕಿಗೆ ಬಂದಿತು.

ಆದರ್ಶ ಮತ್ತು ವಸಂತ ಕಾರಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದು, ಬೈಕಿನಲ್ಲಿ ಬಂದು ಹಣ ತೆಗೆದುಕೊಂಡು ಹೋಗುವಂತೆ ಮಂಜುನಾಥ್ ಮತ್ತು ದಿವಾಕರ್ ಗೆ ಮೊದಲೇ
ತಿಳಿಸಿದ್ದ ಎಂಬುವುದು ತನಿಖೆ ವೇಳೆ ಬಹಿರಂಗವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ