ಆ್ಯಪ್ನಗರ

ಪೊಲೀಸ್ ಕಣ್ಗಾವಲಲ್ಲೇ ಮರಳು ದಂಧೆ!

ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬೇಲೂರು ಪೊಲೀಸ್‌ ಠಾಣೆಯ ಮುಖ್ಯಪೇದೆ ಕುಮಾರ್‌ ಹಾಗೂ ಟಿಪ್ಪರ್‌ ಚಾಲಕ ದೇವರಾಜು ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

Vijaya Karnataka 22 Apr 2018, 7:41 am
ಬೇಲೂರು: ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬೇಲೂರು ಪೊಲೀಸ್‌ ಠಾಣೆಯ ಮುಖ್ಯಪೇದೆ ಕುಮಾರ್‌ ಹಾಗೂ ಟಿಪ್ಪರ್‌ ಚಾಲಕ ದೇವರಾಜು ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
Vijaya Karnataka Web ಮರಳು ಅಕ್ರಮ ಸಾಗಣೆ: ಮುಖ್ಯಪೇದೆ, ಟಿಪ್ಪರ್‌ ಚಾಲಕನ ಸೆರೆ


''ಹಗರೆ ಸಮೀಪ ಚುನಾವಣಾ ಚೆಕ್‌ಪೋಸ್ಟ್‌ ಬಳಿ ರಾತ್ರಿ 10.45ರಲ್ಲಿ ತಪಾಸಣೆಯಲ್ಲಿ ತೊಡಗಿದ್ದಾಗ ಟಿಪ್ಪರ್‌ ಬರುತ್ತಿರುವುದು ಕಂಡುಬಂತು. ಟಿಪ್ಪರ್‌ ಅನ್ನು ನಿಲ್ಲಿಸುವಂತೆ ಸೂಚಿಸಿದರೂ ಚಾಲಕ ನಿಲ್ಲಿಸದೆ ಹೊರಟ. ಆ ತಕ್ಷ ಣ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‌ ಇಡುವಂತೆ ಸಿಬ್ಬಂದಿಗೆ ಸೂಚಿಸಿದೆ. ಈ ಸಂದರ್ಭ ಚಾಲಕ ಟಿಪ್ಪರ್‌ ವೇಗ ಕಡಿಮೆ ಮಾಡಿದರೂ ಟಿಪ್ಪರ್‌ ಒಳಗೆ ಕುಳಿತಿದ್ದ ಮುಖ್ಯಪೇದೆ ಕುಮಾರ್‌ ಟಿಪ್ಪರ್‌ ನಿಲ್ಲಿಸದೆ ಓಡಿಸುವಂತೆ ಸೂಚಿಸಿದರು. ಗಲಿಬಿಲಿಗೊಂಡ ಚಾಲಕ ಟಿಪ್ಪರ್‌ ನಿಲ್ಲಿಸಿ ಟಿಪ್ಪರ್‌ನಿಂದ ಇಳಿದು ಓಡಲೆತ್ನಿಸಿದ. ಸ್ಥಳದಲ್ಲಿದ್ದ ಚೆಕ್‌ಪೋಸ್ಟ್‌ ಕರ್ತವ್ಯನಿರತ ಸಿಬ್ಬಂದಿ ರಾಜಸ್ವನಿರೀಕ್ಷ ಕ ಕಾಂತರಾಜ್‌ ಹಾಗೂ ಉದೀಪ್‌ ಓಡಲೆತ್ನಿಸಿದ ಚಾಲಕನನ್ನು ಹಿಡಿದಿದ್ದಾರೆ,'' ಎಂದು ತಹಸೀಲ್ದಾರ್‌ ಉಮೇಶ್‌ ತಿಳಿಸಿದ್ದಾರೆ.

''ಟಿಪ್ಪರ್‌ ಒಳಗೆ ಕುಳಿತಿದ್ದ ಮುಖ್ಯಪೇದೆ ಕುಮಾರ್‌ ಅವರನ್ನು ಕೆಳಗಿಳಿಸಿ ನಾನು ತಹಸೀಲ್ದಾರ್‌ ಎಂದು ಪರಿಚಯ ಮಾಡಿಕೊಂಡರೂ ಉಡಾಫೆಯಿಂದ ವರ್ತಿಸಿದರು. ನಂತರ ಹಳೇಬೀಡು ಪೊಲೀಸರಿಗೆ ವಿಷಯ ತಿಳಿಸಿ ಕೇಸು ದಾಖಲಿಸುವಂತೆ ಸೂಚಿಸಿದೆ. ಕುಮಾರ್‌ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅಕ್ರಮ ಮರಳು ಸಾಗಣೆ ತಡೆಗಟ್ಟಬೇಕಾದ ವ್ಯಕ್ತಿಯೇ ಅಕ್ರಮ ಮರಳು ಸಾಗಣೆಯಲ್ಲಿ ತೊಡಗಿದ್ದು ಕಾನೂನು ವಿರುದ್ಧವಾಗಿದೆ. ಅಲ್ಲದೆ ಟಿಪ್ಪರ್‌ ನಿಲ್ಲಿಸುವಂತೆ ಸೂಚಿಸಿದಾಗ ಚಾಲಕನಿಗೆ ನಿಲ್ಲಿಸದೆ ಓಡಿಸುವಂತೆ ಸೂಚಿಸಿದ್ದು ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ಚೆಕ್‌ಪೋಸ್ಟ್‌ಗಳು ಇರುತ್ತವೆ. ಅಲ್ಲಿ ತಪಾಸಣೆ ಮಾಡುತ್ತಾರೆ ಎಂಬುದು ಗೊತ್ತಿದ್ದೂ ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ತಂದಿರುವುದನ್ನು ಗಮನಿಸಿದರೆ ಕುಮಾರ್‌ಗೆ ಇದು ಹೊಸತಲ್ಲ. ಬಹಳ ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಅನುಮಾನವಿದೆ. ಮುಖ್ಯಪೇದೆ ಕುಮಾರ್‌ ಅವರೇ ಮರಳು ಸಾಗಿಸುವಂತೆ ಸೂಚಿಸಿದ್ದರು ಎಂದು ಟಿಪ್ಪರ್‌ ಚಾಲಕ ಕುಮಾರ್‌ ಒಪ್ಪಿಕೊಂಡಿದ್ದಾನೆ. ಎಲ್ಲದಕ್ಕೂ ತನಿಖೆ ನಂತರ ವಾಸ್ತವಾಂಶ ಹೊರಬೀಳಲಿದೆ,'' ಎಂದು ತಿಳಿಸಿದರು.

ಟಿಪ್ಪರ್‌ ಬ್ಯಾಡಿಗೆರೆಯ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ್ದು ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

---------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ