ಆ್ಯಪ್ನಗರ

ಪುರಾತನ ತೀರ್ಥಕ್ಷೇತ್ರ ಸಂರಕ್ಷಿಸುವ ಕಾರ್ಯವಾಗಲಿ

ಹೊಸ ತೀರ್ಥಕ್ಷೇತ್ರಗಳನ್ನು ಹುಟ್ಟುಹಾಕುವುದಕ್ಕಿಂತ ಪುರಾತನವಾದ ತೀರ್ಥಕ್ಷೇತ್ರಗಳನ್ನು ಸಂರಕ್ಷಿಸಬೇಕು ಎಂದು ಮುನಿಶ್ರೀ 108 ಅಮರಕೀರ್ತಿ ಮಹಾರಾಜರು ಅಭಿಪ್ರಾಯಪಟ್ಟರು.

Vijaya Karnataka 10 Jun 2019, 5:00 am
ಚನ್ನರಾಯಪಟ್ಟಣ: ಹೊಸ ತೀರ್ಥಕ್ಷೇತ್ರಗಳನ್ನು ಹುಟ್ಟುಹಾಕುವುದಕ್ಕಿಂತ ಪುರಾತನವಾದ ತೀರ್ಥಕ್ಷೇತ್ರಗಳನ್ನು ಸಂರಕ್ಷಿಸಬೇಕು ಎಂದು ಮುನಿಶ್ರೀ 108 ಅಮರಕೀರ್ತಿ ಮಹಾರಾಜರು ಅಭಿಪ್ರಾಯಪಟ್ಟರು.
Vijaya Karnataka Web HSN-HSN9CRP1


ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಆಯೋಜಿಸಿದ್ದ ಭಾರತ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷ ಮುಂಬೈನ್‌ ಪ್ರಭಾತ್‌ ಚಂದ್ರ ಜೈನ್‌ ಅವರ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

''ಪ್ರಾಚೀನ ಪರಂಪರೆಯೇ ನಮ್ಮ ಪರಂಪರೆ, ಅದನ್ನು ರಕ್ಷಿಸಿದರೆ ನಮ್ಮ ಸಂಸ್ಕಾರವನ್ನು ರಕ್ಷಿಸಿದಂತೆ. ನೂತನ ಅಧ್ಯಕ್ಷ ರ ಕಾರ‍್ಯಕ್ಷ ಮತೆಯಲ್ಲಿ ಸಮಿತಿಯು ಹೊಸರೂಪ ಪಡೆಯಲಿ. ನೂತನ ಅಧ್ಯಕ್ಷ ರು ಸಮರ್ಪಣಾ ಮನೋಭಾವದಿಂದ ಕಾರ‍್ಯನಿರ್ವಹಿಸಬೇಕು. ಅವರ ಸಂಗಡ ನಾವೆಲ್ಲರೂ ಕೈಜೋಡಿಸುತ್ತೇವೆ.''ಎಂದರು.

''ನಮ್ಮ ಸಂಸ್ಕೃತಿ ನಮಗೆ ತಾಯಿ ಸ್ವರೂಪ. ಆ ತಾಯಿಯನ್ನು ಸಂರಕ್ಷ ಣೆ ಮಾಡುವುದರಿಂದ ತಮ್ಮ ಶ್ರದ್ಧಾಕೇಂದ್ರಗಳನ್ನು ರಕ್ಷಿಸಬಹುದಾಗಿದೆ. ನಮ್ಮ ಪವಿತ್ರ ಕ್ಷೇತ್ರಗಳ ಮೇಲೆ ಬೇರೆಯವರಿಂದ ಆಗುವ ಅನ್ಯಾಯಗಳನ್ನು ಪ್ರತಿಯೊಬ್ಬರೂ ತಡೆಯಬೇಕು. ಹಿಂದೆ ಹೀಗೆಯೇ ಆಕ್ರಮಣ ನಡೆದುದರಿಂದ ಭಟ್ಟಾರಕ ಪರಂಪರೆ ಉದ್ಭವವಾಯಿತು. ಭಟ್ಟಾರಕರು ತೀರ್ಥಕ್ಷೇತ್ರಗಳ ಸಂರಕ್ಷ ಣೆಯನ್ನು ತಮ್ಮ ಭಕ್ತರ ಸಹಕಾರದಿಂದ ಮಾಡಲು ಮುಂದಾದರು. ಅವರ ನೆರವಿನಿಂದ ಅನೇಕ ತೀರ್ಥಕ್ಷೇತ್ರಗಳು ಸಂರಕ್ಷಿತವಾಗಿವೆ,''ಎಂದರು.

''ಪ್ರಪಂಚದಲ್ಲಿ ಎಲ್ಲಿಯೂ ಕೆಟ್ಟದೆಂಬುದಿಲ್ಲ, ಎಲ್ಲರಲ್ಲೂ ಒಳ್ಳೆಯತನವಿದೆ. ಅದನ್ನು ಸರಿಯಾದ ರೀತಿಯಲ್ಲಿ ನೋಡಬೇಕೆಂಬುದನ್ನು ದೇವಶಾಸ್ತ್ರ ಹಾಗೂ ಗುರುವನ್ನು ಅನುಸರಿಸುವುದರಿಂದ ಬರುತ್ತದೆ. ಶಾಸ್ತ್ರಗಳು, ಜಿನವಾಣಿ ಇಲ್ಲದಿದ್ದರೆ ಯಾರ ಅಸ್ತಿತ್ವವೂ ಇರುತ್ತಿರಲಿಲ್ಲ. ದೇವಶಾಸ್ತ್ರ, ಗುರುವನ್ನು ಗೌರವಿಸುವ ಮೂಲಕ ಅವರ ಅನುಸರಣೆ,''ಮಾಡಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ''ರಾಜ, ಮಹಾರಾಜರುಗಳ ಕಾಲದಿಂದ ಈಗಿನ ಸರಕಾರಗಳವರೆಗೂ ಈ ಕ್ಷೇತ್ರವನ್ನು ಕಾಪಾಡಿಕೊಂಡು ಬಂದ ಇತಿಹಾಸವಿದೆ. ದೇಶದ ಮೊದಲ ಪ್ರಧಾನಮಂತ್ರಿ ನೆಹರೂ ಕೂಡ ಅಂದೇ ಬಾಹುಬಲಿ ಮೂರ್ತಿಯ ಸಂರಕ್ಷ ಣೆ ಬಗ್ಗೆ ಅತೀವ ಕಾಳಜಿ ವ್ಯಕ್ತಪಡಿಸಿದ್ದರು. ಇಂದಿಗೂ ಅದು ಮುಂದುವರಿದುಕೊಂಡು ಬರುತ್ತಿದೆ,''ಎಂದರು

ಅಂದು ತೀರ್ಥಕ್ಷೇತ್ರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ರಾಗಿದ್ದ ಸಾಹುಶಾಂತಿ ಪ್ರಸಾದ್‌ ಜೈನ್‌, ಶ್ರೇಯಾಂಸ ಪ್ರಸಾದ್‌ ಜೈನ್‌, ರಮೇಶ್‌ಚಂದ್‌ ಜೈನ್‌ ಮೊದಲುಗೊಂಡು ಈ ತನಕವೂ ಭಾರತ ವರ್ಷೀಯ ದಿಗಂಬರ ಜೈನತೀರ್ಥಕ್ಷೇತ್ರ ಸಮಿತಿಯ ಅಧ್ಯಕ್ಷ ರಾದವರು ಸಕಲ ರೀತಿಯಲ್ಲೂ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಚೆನ್ನೈನ ಸರಿತಾಜೈನ್‌ ಅವರು ಮೊದಲ ಬಾರಿಗೆ ಮಹಿಳಾಧ್ಯಕ್ಷ ರಾಗಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸದಾಕಾಲ ಕ್ಷೇತ್ರವು ಸಮಿತಿಯೊಂದಿಗೆ ಕೈಜೋಡಿಸುತ್ತದೆ,'' ಎಂದರು.

ಇದೇ ವೇಳೆ ಪ್ರಭಾತ್‌ ಚಂದ್ರ ಜೈನ್‌ ಅವರಿಗೆ ಸ್ಥಳೀಯ ಶ್ರವಣಬೆಳಗೊಳ ದಿಗಂಬರ ಜೈನ ಮಠ ಸಂಸ್ಥೆಗಳ ಆಡಳಿತ ಮಂಡಳಿಯ (ಎಸ್‌ಡಿಜೆಎಂಐ )ಪದನಿಮಿತ್ತ ಸದಸ್ಯರಾಗಿ ನೇಮಕ ಮಾಡಿದ ಪತ್ರವನ್ನು ಅಧಿಕೃತವಾಗಿ ಸಭೆಯಲ್ಲಿ ಸ್ವಾಮೀಜಿ ನೀಡಿದರು. ಕ್ಷೇತ್ರದ ವತಿಯಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ರು, ''ಈವರೆಗೆ ಜೈನಧರ್ಮದ ಸಿಪಾಯಿ ಮಾತ್ರ ಆಗಿದ್ದ ನಾನು ಇಂದು ಅದರ ಉಳಿವಿನ ಸಾರಥಿಯಾಗಿದ್ದೇನೆ. ಕ್ಷೇತ್ರಕ್ಕೆ ಬಂದ ಮೇಲೆ ಈ ಸ್ಥಾನದ ಮಹತ್ವದ ಅರಿವಾಗುತ್ತಿದೆ. ತೀರ್ಥಕ್ಷೇತ್ರ ಸಮಿತಿಯ ಎದುರು ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪ್ರಯತ್ನಿಸುತ್ತೇನೆ,''ಎಂದರು.

''ಕೇವಲ ಉತ್ತರ ಭಾರತವನ್ನಷ್ಟೇ ಅಲ್ಲದೆ ದಕ್ಷಿಣ ಭಾರತದ ಕ್ಷೇತ್ರಗಳನ್ನೂ ಸಂರಕ್ಷಿಸಲು, ಸಾವಿರಾರು ವರ್ಷಗಳಷ್ಟು ಹಳೆಯದಾದ ಜಿನಾಲಯಗಳನ್ನು ವ್ಯವಸ್ಥಿತ ಸ್ಥಿತಿಯಲ್ಲಿಡಲು, ಪುನರುತ್ಥಾನಗೊಳಿಸಲು ಶ್ರಮಿಸುತ್ತೇನೆ. ಇದಕ್ಕೆ ಭಟ್ಟಾರಕ ಸ್ವಾಮೀಜಿಯವರ ಸಲಹೆ, ಸೂಚನೆ, ಮಾರ್ಗದರ್ಶನ ಅವಶ್ಯ. ಕಮಿಟಿಯ ಎಲ್ಲ ಸದಸ್ಯರೂ ಒಂದೇ ಪರಿವಾರದಂತೆ ಕರ್ತವ್ಯ ನಿರ್ವಹಣೆ ಮಾಡೋಣ,'' ಎಂದರು. ಮುನಿಶ್ರೀ ಅಮೋಘ ಕೀರ್ತಿಮಹಾರಾಜರ ಸಾನ್ನಿಧ್ಯದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್‌, ವಿನೋದ್‌ ಬಾಕ್ಲಿವಾಲ್‌, ಇಂದುದೇವಿ ಜೈನ್‌ ಇದ್ದರು.

ನೂತನ ಅಧ್ಯಕ್ಷರಿಗೆ ಸನ್ಮಾನ

ನೂತನವಾಗಿ ಭಾರತ ವರ್ಷೀಯ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಗಿ ಆಯ್ಕೆಯಾದ ಮುಂಬಯಿಯ ಉದ್ಯಮಿ ಪ್ರಭಾತ್‌ಚಂದ್ರ ಜೈನ್‌ ಅವರಿಗೆ ಕ್ಷೇತ್ರದ ವತಿಯಿಂದ ಶ್ರೀಗಳು ಗೌರವ ಸಮರ್ಪಣೆ ಮಾಡಿದ ನಂತರ ಕರ್ನಾಟಕ ದಿಗಂಬರ ಜೈನ ಸಮಾಜದ ವತಿಯಿಂದ ದೇವೇಂದ್ರಕುಮಾರ್‌ ಮಾಲಾರ್ಪಣೆ ಮಾಡಿ ಗೌರವಿಸಿದರು.

ಸ್ಥಳೀಯ ದಿಗಂಬರ ಜೈನ ಸಮಾಜ, ಕೂಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜ, ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಬಾಹುಬಲಿ ಮಕ್ಕಳ ಆಸ್ಪತ್ರೆ, ಬಾಹುಬಲಿ ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ಕಾಲೇಜು, ಶೃತಕೇವಲ ಎಜುಕೇಷನ್‌ ಟ್ರಸ್ಟ್‌, ಅಂಬಿಕಾ ಶಾಲೆ, ಎಸ್‌.ಎನ್‌.ಪ್ರೌಢಶಾಲೆ, ಮೈಸೂರು ಜೈನ ಸಮಾಜದ ವತಿಯಿಂದ ಗೌರವ ಸಲ್ಲಿಸಲಾಯಿತು.

ನೂತನ ಅಧ್ಯಕ್ಷ ಪ್ರಭಾತ್‌ಚಂದ್ರ ಜೈನ್‌ ಉತ್ತರಪ್ರದೇಶದ ಕನೂಜ್‌ನವರು. ತಮ್ಮ ಜನಕಲ್ಯಾಣ ಟ್ರಸ್ಟ್‌ಗಳ ಮೂಲಕ ನೂರು ಗೋಶಾಲೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಸುಮಾರು 40 ಸಾವಿರ ಗೋವುಗಳ ಸಂರಕ್ಷ ಣೆ ಮಾಡಿದ್ದಾರೆ. ಸವಾಯಿಲಾಲ್‌ ಸ್ಮೃತಿ ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿಯಾಗಿ ಬಡವರು ಮತ್ತು ವಿಶೇಷಚೇತನರು, ಅಸಹಾಯಕರಿಗೆ ವೈದ್ಯಕೀಯ ನೆರವು, ತೀವ್ರತೆರನಾದ ಕಾಯಿಲೆಗಳಿಗೆ ಆರ್ಥಿಕ ನೆರವು, ಬಡಮಕ್ಕಳ ಶಿಕ್ಷ ಣಕ್ಕೆ ನೆರವು ನೀಡುತ್ತಿದ್ದು ಇವರ ಪರಿವಾರವು ಜೈನಮುನಿಗಳ ಸೇವೆಯಲ್ಲಿ ನಿರತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ