ಆ್ಯಪ್ನಗರ

ಬಿತ್ತನೆ ಆಲೂ ಮಾರಾಟಕ್ಕೆ ಡಿಸಿ ಚಾಲನೆ

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬಿತ್ತನೆ ಆಲೂ ಮಾರಾಟಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಚಾಲನೆ ನೀಡಿದರು.

Vijaya Karnataka 17 May 2019, 5:00 am
ಹಾಸನ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಬಿತ್ತನೆ ಆಲೂ ಮಾರಾಟಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಚಾಲನೆ ನೀಡಿದರು.
Vijaya Karnataka Web HSN-HSN16N2


ಜಿಲ್ಲೆಯಲ್ಲಿ ಆಲೂ ಬೆಳೆಯುವ 15 ಸಾವಿರ ಹೆಕ್ಟೇರ್‌ ಭೂಮಿಗೆ ಅವಶ್ಯಕವಿರುವ 20 ಸಾವಿರ ಮೆಟ್ರಿಕ್‌ ಟನ್‌ ಬಿತ್ತನೆಆಲೂವನ್ನು ಶಿಥಲೀಕರಣ ಗೃಹದಲ್ಲಿ ಈಗಾಗಲೇ ಶೇಖರಿಸಿಡಲಾಗಿದೆ. ಅಲ್ಲದೆ ಬೇರೆ ಜಿಲ್ಲೆಯಿಂದ ಆಗಮಿಸುವ ರೈತರಿಗೂ ಬಿತ್ತನೆ ಆಲೂ ಪೂರೈಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ವರ್ತಕರು 8,200 ಚೀಲ ಆಲೂವನ್ನು ಪ್ರಾರಂಭಿಕವಾಗಿ ಮಾರುಕಟ್ಟೆಗೆ ತಂದಿದ್ದು, ಬೇಡಿಕೆಗೆ ಅನುಗುಣವಾಗಿ ಬಿತ್ತನೆಆಲೂ ಪೂರೈಸಲು ಸಿದ್ಧರಿದ್ದಾರೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ರೈತರು ಖರೀದಿಸಿದ ಬಿತ್ತನೆ ಆಲೂಗೆ ಕಡ್ಡಾಯವಾಗಿ ರಶೀದಿಯನ್ನು ಪಡೆಯಬೇಕು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಎಪಿಎಂಸಿ ಆವರಣದಲ್ಲೇ ನೋಂದಣಿ ಕಾರ್ಯ ಕೈಗೊಳ್ಳಲಿದ್ದು ,ರೈತರು ಬಿಲ್ಲಿನೊಂದಿಗೆ ಆಧಾರ್‌ಕಾರ್ಡ್‌, ಪಹಣಿ, ಪಾಸ್‌ಬುಕ್‌, ಜಾತಿ ಪ್ರಮಾಣಪತ್ರ, ಫೋಟೋಗಳೊಂದಿಗೆ ನೋದಂಣಿ ಮಾಡಿಸಿದಲ್ಲಿ ಶೇ.50 ರಷ್ಟು ಸಬ್ಸಿಡಿ ಹಣ, ಔಷಧಗಳನ್ನು ನೀಡಲಾಗುವುದು ಎಂದರು.

ಇಂದು ಪ್ರಾರಂಭದ ದಿನವಾಗಿರುವುದರಿಂದ ಹಾಗೂ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇಲ್ಲ ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣವನ್ನಾದರಿಸಿ ಹೆಚ್ಚು ಬೇಡಿಕೆಯ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿತ್ತನೆ ಆಲೂ ಮಾರಾಟ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ಹಾಗೂ ಸಂಚಾರ ದಟ್ಟಣೆಯಾಗದಂತೆ ಪೊಲೀಸ್‌ ಇಲಾಖೆಯ ಮುಂಜಾಗ್ರತಾ ಕ್ರಮಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಎಸ್‌ಪಿ ಡಾ. ಚೇತನ್‌ಸಿಂಗ್‌ ರಾಥೋಡ್‌, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜುನಾಥ್‌, ಕೃಷಿಉತ್ಪನ್ನ ಮಾರುಕಟ್ಟೆ ಇಲಾಖೆಯ ಶ್ರೀಹರಿ ಮತ್ತಿರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ