ಆ್ಯಪ್ನಗರ

ಸರಣಿ ಅಪಘಾತ: 13 ತಾಸು ಹೆದ್ದಾರಿ ಬಂದ್‌

ಗ್ಯಾಸ್‌ ಟ್ಯಾಂಕರ್‌, ಕಂಟೈನರ್‌ ಲಾರಿ ಹಾಗೂ ಬಸ್‌ ನಡುವೆ ಸರಣಿ ಅಪಘಾತ ಸಂಭವಿಸಿ ಟ್ಯಾಂಕರ್‌ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣ ಸಮೀಪದ ಕೊಲ್ಲಹಳ್ಳಿ ಗ್ರಾಮದ ಬಳಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ 30 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು. ಘಟನೆಯಿಂದ 13 ತಾಸು ಹೆದ್ದಾರಿ ಬಂದ್‌ ಆಗಿ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು.

Vijaya Karnataka 12 Dec 2018, 5:00 am
ಸಕಲೇಶಪುರ (ಹಾಸನ): ಗ್ಯಾಸ್‌ ಟ್ಯಾಂಕರ್‌, ಕಂಟೈನರ್‌ ಲಾರಿ ಹಾಗೂ ಬಸ್‌ ನಡುವೆ ಸರಣಿ ಅಪಘಾತ ಸಂಭವಿಸಿ ಟ್ಯಾಂಕರ್‌ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣ ಸಮೀಪದ ಕೊಲ್ಲಹಳ್ಳಿ ಗ್ರಾಮದ ಬಳಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ 30 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು. ಘಟನೆಯಿಂದ 13 ತಾಸು ಹೆದ್ದಾರಿ ಬಂದ್‌ ಆಗಿ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು.
Vijaya Karnataka Web HSN-HSN11SKP2


ಟ್ಯಾಂಕರ್‌ ಚಾಲಕ, ತಮಿಳುನಾಡು ಮೂಲದ ಅಬ್ದುಲ್‌ ರೆಹಮಾನ್‌(28) ಮೃತರು. ಇವರು ಸಕಲೇಶಪುರದಿಂದ ಹಾಸನ ಕಡೆಗೆ ಟ್ಯಾಂಕರ್‌ ಚಾಲನೆ ಮಾಡಿಕೊಂಡು ತೆರಳುತ್ತಿದ್ದರು. ಕೊಲ್ಲಹಳ್ಳಿ ಸಮೀಪ ಟ್ಯಾಂಕರ್‌, ಕೆಎಸ್‌ಆರ್‌ಟಿಸಿ ಬಸ್‌ಅನ್ನು ಹಿಂದಿಕ್ಕುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕಂಟೈನರ್‌ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಎರಡೂ ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದ್ದು, ಟ್ಯಾಂಕರ್‌ ಚಾಲಕ ತೀವ್ರಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು.

ಟ್ಯಾಂಕರ್‌ ಚಾಲಕ ಓವರ್‌ಟೇಕ್‌ ಮಾಡುವಾಗ ಎದುರಿನಿಂದ ಲಾರಿ ಬರುತ್ತಿದ್ದುದನ್ನು ಕಂಡು ತಬ್ಬಿಬ್ಬಾಗಿದ್ದಾನೆ. ಪರಿಣಾಮ ಎಡಬದಿಯಲ್ಲಿಯೇ ಇದ್ದ ಬಸ್‌ಗೂ ಸಣ್ಣ ಪ್ರಮಾಣದಲ್ಲಿ ಡಿಕ್ಕಿ ಹೊಡೆದು, ಬಳಿಕ ಎದುರಿನ ಟ್ಯಾಂಕರ್‌ಗೆ ನೇರವಾಗಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಬಸ್‌ಗೆ ಬಲವಾಗಿ ಡಿಕ್ಕಿಯಾಗಿದ್ದರೆ 50 ಅಡಿ ಕಂದಕಕ್ಕೆ ಉರುಳಿ ಬಿದ್ದು ಜೀವಹಾನಿಯಾಗುವ ಆತಂಕವಿತ್ತು. ಅಪಾಯ ಅರಿತ ಬಸ್‌ ಚಾಲಕ ಸ್ಥಳದಲ್ಲೇ ವಾಹನ ನಿಲ್ಲಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಬಸ್ಸಿನಲ್ಲಿದ್ದ 30 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದರು. ಸಕಲೇಶಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

13 ತಾಸು ಸಂಚಾರ ಬಂದ್‌: ಪರದಾಟ
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ನಡೆದಿದ್ದು, 13 ತಾಸು ಹೆದ್ದಾರಿ ಬಂದ್‌ ಆಗಿ ಪ್ರಯಾಣಿಕರು ಪರದಾಡುವಂತಾಯಿತು. ಘಟನೆ ನಡೆದ ಪ್ರದೇಶದಲ್ಲಿ ಹೆದ್ದಾರಿಯ ಒಂದು ಬದಿ ಕಾಫಿ ತೋಟ, ಮತ್ತೊಂದು ಬದಿ ಆಳದಲ್ಲಿ ಭತ್ತದ ಗದ್ದೆ ಇದ್ದ ಕಾರಣ ವಾಹನ ಸಂಚಾರ ಸಾಧ್ಯವಾಗದೆ ಮಂಗಳವಾರ ಬೆಳಗ್ಗೆ 11ರವರೆಗೆ ಹೆದ್ದಾರಿ ಬಂದ್‌ ಆಗಿತ್ತು. ಎರಡೂ ಬದಿ ಸುಮಾರು 15 ಕಿ.ಮೀ. ದೂರದವರೆಗೂ ಬಸ್‌, ಲಾರಿ, ಟ್ಯಾಂಕರ್‌ ಸೇರಿದಂತೆ ಘನವಾಹನಗಳು ಸಾಲುಗಟ್ಟಿ ನಿಂತಿದ್ದವು. ಪಕ್ಕದಲ್ಲೇ ಅಂಗಡಿಗಳು ಇದ್ದುದರಿಂದ ತಿಂಡಿಗೆ ಅಷ್ಟೇನೂ ಸಮಸ್ಯೆಯಾಗದಿದ್ದರೂ, ತುರ್ತು ಕೆಲಸಕಾರ್ಯಗಳಿಗೆ ತೆರಳುವವರು ಸಂಕಷ್ಟ ಪಡುವಂತಾಯಿತು. ಬೈಕ್‌, ಕಾರು, ಜೀಪು ಮತ್ತಿತರ ಲಘು ವಾಹನಗಳನ್ನು ಹಲಸುಲಿಗೆ ಮಾರ್ಗವಾಗಿ ಕಳುಹಿಸಿಕೊಡಲಾಯಿತು. ಪೊಲೀಸರು ರಾತ್ರಿ ಪೂರ್ತಿ ಸ್ಥಳದಲ್ಲಿದ್ದು, ಹರಸಾಹಸ ಪಟ್ಟು ಅಪಘಾತಕ್ಕೊಳಗಾದ ಎರಡೂ ವಾಹನಗಳನ್ನು ರಸ್ತೆ ಬದಿಗೆ ಸರಿಸಿ ಮಂಗಳವಾರ ಬೆಳಗ್ಗೆ 11ರ ಸುಮಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಯಶಸ್ವಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ