ಆ್ಯಪ್ನಗರ

ಕುರಿ ಫಾರಂಗೆ 55 ಎಕರೆ ಪ್ರದೇಶ ಗುರುತು

ರಾಜ್ಯದಲ್ಲಿ ಐದು ಬಗೆಯ ಕುರಿ ತಳಿಗಳಿದ್ದು, ಹಾಸನ ತಳಿಯನ್ನು ಅಭಿವದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕುರಿ ಫಾರಂ ತೆರೆಯಲು ಉದ್ದೇಶದಿಂದ ಈಗಾಗಲೇ ಇದಕ್ಕೆ 55 ಎಕರೆ ಪ್ರದೇಶವನ್ನು ಗುರುತು ಮಾಡಲಾಗಿದೆ ಎಂದು ರಾಜ್ಯ ಕುರಿ ಅಭಿವದ್ಧಿ ನಿಗಮದ ಅಧ್ಯಕ್ಷ ಜಿ.ಕಷ್ಣ ತಿಳಿಸಿದರು.

ವಿಕ ಸುದ್ದಿಲೋಕ 1 Jun 2017, 5:15 am
ಅರಸೀಕೆರೆ: ರಾಜ್ಯದಲ್ಲಿ ಐದು ಬಗೆಯ ಕುರಿ ತಳಿಗಳಿದ್ದು, ಹಾಸನ ತಳಿಯನ್ನು ಅಭಿವದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕುರಿ ಫಾರಂ ತೆರೆಯಲು ಉದ್ದೇಶದಿಂದ ಈಗಾಗಲೇ ಇದಕ್ಕೆ 55 ಎಕರೆ ಪ್ರದೇಶವನ್ನು ಗುರುತು ಮಾಡಲಾಗಿದೆ ಎಂದು ರಾಜ್ಯ ಕುರಿ ಅಭಿವದ್ಧಿ ನಿಗಮದ ಅಧ್ಯಕ್ಷ ಜಿ.ಕಷ್ಣ ತಿಳಿಸಿದರು.
Vijaya Karnataka Web sheep farm marks 55 acres of land
ಕುರಿ ಫಾರಂಗೆ 55 ಎಕರೆ ಪ್ರದೇಶ ಗುರುತು


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘‘ಕುರಿ ಸಾಕಾಣಿಕೆ ಮತ್ತು ಉಣ್ಣೆ ಉದ್ಯಮವನ್ನು ಪ್ರೋತ್ಸಾಹಿಸುವ ಸಲುವಾಗಿ ಹತ್ತಾರು ಕಾರ‌್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಅದೇ ರೀತಿ ಉಣ್ಣೆ ಕತ್ತರಿಸಲು ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಕುರಿ ಸಾಕಾಣಿಕೆದಾರರು ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಹೆಚ್ಚು ಉಣ್ಣೆ ವ್ಯರ್ಥವಾಗದಂತೆ ನೋಡಿಕೊಂಡರೆ, ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಬಹುದು,’’ಎಂದು ಹೇಳಿದರು.

‘‘ನಿಗಮದ ವತಿಯಿಂದ ಉಣ್ಣೆ ಸಂಗ್ರಹಕ್ಕಾಗಿ ಗೋದಾಮಿಗೆ 10ಲಕ್ಷ ರೂ. ನೀಡುತ್ತಿದ್ದೇವೆ ಹಾಗೂ ಉಣ್ಣೆ ಕತ್ತರಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಹಲವು ಸಂಘಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. 3 ವರ್ಷದಲ್ಲಿ 230 ಸಂಘಗಳಿಗೆ ಪ್ರತಿ ಸಂಘಕ್ಕೆ 5 ಲಕ್ಷದಂತೆ ಪ್ರೋತ್ಸಾಹ ಧನವನ್ನು ನೀಡಲಾಗಿದೆ. ಈ ಹಣವನ್ನು ಅಗತ್ಯವಿರುವ ಸದಸ್ಯರಿಗೆ ಸಾಲದ ರೂಪದಲ್ಲಿ ನೀಡುವ ಮೂಲಕ ಅವರ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ,’’ಎಂದು ವಿವರಿಸಿದರು.
‘‘ಬರಗಾಲವಿದ್ದು ಕುರಿಗಳನ್ನು ಮೇಯಿಸಲು ಮೇವಿಲ್ಲ, ಜಾನುವಾರುಗಳಿಗಾದರೂ ಗೋಶಾಲೆ ತೆರೆಯುತ್ತೇವೆ. ಆದರೆ ಕುರಿಗಳಿಗೂ ದಿನಕ್ಕೆ 35 ರೂ.ಗಳಂತೆ ಹಣವನ್ನು ಸರಕಾರ ನೀಡಲು ಸಿದ್ದವಿದೆ. ಅದರ ಬಗ್ಗೆಯೂ ಗಮನ ನೀಡಲಾಗುವುದು. ಕುರಿ ಸಾಕಾಣಿಕೆದಾರರಿಗೆ ಆತ್ಮಸ್ಥೈರ್ಯ ತುಂಬಬಲ್ಲ ಯೋಜನೆಗಳನ್ನು ಸರಕಾರ ರೂಪಿಸಿದೆ,’’ ಎಂದರು.

‘‘ಅಕಾಲಿಕವಾಗಿ ರೋಗ ಅಥವಾ ಪ್ರಕತಿ ವಿಕೋಪ, ಅಪಘಾತ ಇವುಗಳಲ್ಲಿ ಮತಪಟ್ಟರೆ ಪ್ರತಿ ಕುರಿಗೆ 5 ಸಾವಿರ ರೂ.ಗಳನ್ನು 6ತಿಂಗಳಿಗಿಂತ ಕಡಿಮೆ ಇದ್ದಲ್ಲಿ 2,500 ರೂ.ಗಳನ್ನು ನೀಡಲಾಗುತ್ತದೆ. ಹತ್ತಾರು ಕುರಿಗಳೂ ಒಮ್ಮೇಲೆ ಸತ್ತ ಸಂದರ್ಭದಲ್ಲಿ ಸ್ಥಳಕ್ಕೆ ಹೋಗಿ ಪರಿಹಾರ ನೀಡುವ ಕೆಲಸ ನಿಗಮ ಮಾಡುತ್ತಿದೆ,’’ಎಂದು ಹೇಳಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ ‘‘ಗೋಮಾಳವನ್ನು ಕಷಿ ಹಾಗೂ ಇತರ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಂಡಿದ್ದು, ಕುರಿಗಳನ್ನು ಮೇಯಿಸಲು ಸ್ಥಳವಿಲ್ಲವಾಗಿದೆ. ಅರಣ್ಯ ಭೂಮಿಯಲ್ಲಿ ನೀರನ್ನೇ ಖಾಲಿ ಮಾಡುವ ನೀಲಗಿರಿ ಬೆಳೆಯಲಾಗುತ್ತಿದ್ದು. ಇದನ್ನು ಎಲ್ಲೆಡೆ ಬೆಳೆಯಬಾರದೆಂದು ನಿಯಮ ಮಾಡಲಾಗಿದ್ದರೂ ಸಸಿ ನೆಡುತ್ತಿದ್ದಾರೆ. ಇದೇ ಸ್ಥಳಗಳನ್ನು ಜಾನುವಾರುಗಳು ಹಾಗೂ ಕುರಿ ಮೇಯಲು ಅವಕಾಶ ಕಲ್ಪಿಸಿದರೆ ರೈತರಿಗೆ ಅನುಕೂಲವಾಗುತ್ತದೆ,’’ಎಂದು ಅಭಿಪ್ರಾಯಪಟ್ಟರು.

ಜಿಪಂ ಮಾಜಿ ಉಪಾಧ್ಯಕ್ಷ ಹಾಗೂ ತಾಲೂಕು ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಬಿಳಿಚೌಡಯ್ಯ, ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಹನುಮಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ