ಆ್ಯಪ್ನಗರ

ಎತ್ತಿನಹೊಳೆಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು

​​ಎತ್ತಿನಹೊಳೆ ಕುಡಿಯುವ ನೀರು ಯೋಜನೆ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಸಂದರ್ಭ ಮಣ್ಣು ಕುಸಿದು ಕಾರ್ಮಿಕ ನೊಬ್ಬ ಮಣ್ಣಿನೊಳಗೆ ಸಿಲುಕಿ ಮೃತ ಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿರುವ ಘಟನೆ ತಾಲೂಕಿನ ಕುಂಬರಡಿ(ಹಾರ್ಲೆ ಎಸ್ಟೇಟ್‌) ಸಮೀಪ ಬುಧವಾರ ನಡೆದಿದೆ.

Vijaya Karnataka 31 Oct 2019, 5:00 am
ಸಕಲೇಶಪುರ: ಎತ್ತಿನಹೊಳೆ ಕುಡಿಯುವ ನೀರು ಯೋಜನೆ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಸಂದರ್ಭ ಮಣ್ಣು ಕುಸಿದು ಕಾರ್ಮಿಕನೊಬ್ಬ ಮಣ್ಣಿನೊಳಗೆ ಸಿಲುಕಿ ಮೃತ ಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿರುವ ಘಟನೆ ತಾಲೂಕಿನ ಕುಂಬರಡಿ(ಹಾರ್ಲೆ ಎಸ್ಟೇಟ್‌) ಸಮೀಪ ಬುಧವಾರ ನಡೆದಿದೆ.
Vijaya Karnataka Web soil collapses and worker deaths
ಎತ್ತಿನಹೊಳೆಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು


ಬಿಹಾರ ಮೂಲದ ಯುವಕ ಡಿಂಕು ಕುಮಾರ್‌(23) ಮೃತಪಟ್ಟಿರುವ ಕಾರ್ಮಿಕ. ಮಂಜುಕುಮಾರ್‌(23) ಗಾಯಗೊಂಡಿದ್ದಾರೆ. ಎತ್ತಿನಹೊಳೆ ಕುಡಿಯುವ ನೀರು ಯೋಜನೆಯ ಕಾಮಗಾರಿ ಗುತ್ತಿಗೆ ಪಡೆದಿರುವ ಮೆಗಾ ಎಂಜಿನಿಯರಿಂಗ್‌ ಅಂಡ್‌ infastructure ltd., ಹಾರ್ಲೆ ಎಸ್ಟೇಟ್‌ ಸಮೀಪ ಪೈಪ್‌ಲೈನ್‌ ಅಳವಡಿಕೆಗೆ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದಾಗ ಈ ಅವಘಡ ನಡೆದಿದೆ. ಸುಮಾರು ಹತ್ತು ಅಡಿ ಆಳದೊಳಗೆ ಪೈಪ್‌ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದಾಗ, ಪಕ್ಕದ ಮಣ್ಣು ಮೇಲಿನಿಂದ ಕುಸಿದ ಬಿದ್ದ ಪರಿಣಾಮ ಡಿಂಕು ಕುಮಾರ್‌ ಮಣ್ಣಿನ ಅಡಿ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇವರ ಜೊತೆಯಲ್ಲೆಕೆಲಸ ಮಾಡುತ್ತಿದ್ದ ಮಂಜುಕುಮಾರ್‌ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಗಾಯಾಳುವಿಗೆ ಪಟ್ಟಣದ ಸರಕಾರಿ ಕ್ರಾಫರ್ಡ್‌ ಆಸ್ಪತ್ರೆಯಲ್ಲಿಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮೃತದೇಹವನ್ನು ಆಸ್ಪತ್ರೆಯಲ್ಲಿಇರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ