ಆ್ಯಪ್ನಗರ

ವಿಚಾರ ಮಂಥನಕ್ಕೆ ವೇದಿಕೆಯಾದ ಸ್ಪೀಕ್‌ ಫಾರ್‌ ಇಂಡಿಯಾ

ಯುವಕರು ಭವಿಷ್ಯದಲ್ಲಿ ನಾಯಕತ್ವ ಪಡೆದುಕೊಳ್ಳಲು ಒಂದು ಉತ್ತಮ ವೇದಿಕೆಯನ್ನು ಫೆಡರಲ್‌ ಬ್ಯಾಂಕ್‌ ಸಹಯೋಗದಲ್ಲಿ ಟೈಮ್ಸ್‌ ಆಫ್‌ ಇಂಡಿಯಾ ಮತ್ತು ವಿಜಯ ಕರ್ನಾಟಕ, ಸ್ಪೀಕ್‌ ಫಾರ್‌ ಇಂಡಿಯಾ ಕರ್ನಾಟಕ ಆವೃತ್ತಿಯ ಮೂಲಕ ಕಲ್ಪಿಸಿದ್ದು, ಇದರ ಅಂಗವಾಗಿ ಹಾಸನದ ಸೆಂಟ್ರಲ್‌ ಕಾಮರ್ಸ್‌ ಕಾಲೇಜಿನಲ್ಲಿ ಚರ್ಚಾ ಸ್ಪರ್ಧೆ ನಡೆಯಿತು.

Vijaya Karnataka 24 Aug 2019, 5:00 am
ಹಾಸನ: ಯುವಕರು ಭವಿಷ್ಯದಲ್ಲಿ ನಾಯಕತ್ವ ಪಡೆದುಕೊಳ್ಳಲು ಒಂದು ಉತ್ತಮ ವೇದಿಕೆಯನ್ನು ಫೆಡರಲ್‌ ಬ್ಯಾಂಕ್‌ ಸಹಯೋಗದಲ್ಲಿ ಟೈಮ್ಸ್‌ ಆಫ್‌ ಇಂಡಿಯಾ ಮತ್ತು ವಿಜಯ ಕರ್ನಾಟಕ, ಸ್ಪೀಕ್‌ ಫಾರ್‌ ಇಂಡಿಯಾ ಕರ್ನಾಟಕ ಆವೃತ್ತಿಯ ಮೂಲಕ ಕಲ್ಪಿಸಿದ್ದು, ಇದರ ಅಂಗವಾಗಿ ಹಾಸನದ ಸೆಂಟ್ರಲ್‌ ಕಾಮರ್ಸ್‌ ಕಾಲೇಜಿನಲ್ಲಿ ಚರ್ಚಾ ಸ್ಪರ್ಧೆ ನಡೆಯಿತು.
Vijaya Karnataka Web HSN-HSN23N8


ಜಿಲ್ಲೆಯ ಸರಕಾರಿ ಕಾನೂನು ಕಾಲೇಜು, ಗೃಹ ವಿಜ್ಞಾನ ಕಾಲೇಜು, ಕಾರೇಕೆರೆ ಕೃಷಿ ವಿಜ್ಞಾನ ಕಾಲೇಜು, ಮಲೆನಾಡು ತಾಂತ್ರಿಕ ಎಂಜಿನಿಯರಿಂಗ್‌ ಕಾಲೇಜು, ಸರಕಾರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಎ.ವಿ.ಕಾಂತಮ್ಮ ಕಾಲೇಜು ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 145ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚರ್ಚಾ ಸ್ಪರ್ಧೆ ಬೆಳಗ್ಗೆಯಿಂದ ಸಂಜೆವರಗೂ ನಡೆಯಿತು.

ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿದರಲ್ಲದೆ ಪ್ರತಿಯೊಬ್ಬರೂ ಕೂಡ ತಮಗೆ ದೊರೆತ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ವಿಚಾರಗಳನ್ನು ಮಂಡಿಸಿದರು. ಯುವ ಜನರ ಅಭಿಪ್ರಾಯಗಳಿಗೆ ಪ್ರೋತ್ಸ್ಸಾಹ ನೀಡಲು ಈ ಚರ್ಚಾ ಸ್ಪರ್ಧಾ ಕೂಟದಲ್ಲಿ 8 ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಯಿತು.

ಚರ್ಚಾ ಸ್ಪರ್ಧೆಗೆ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಮೊದಲ ಸುತ್ತಿನಲ್ಲಿ ಟಿಕ್‌ ಟಾಕ್‌, ಮೊಬೈಲ್‌, ರಾಜಕೀಯ ವ್ಯಕ್ತಿಗಳು, ಕ್ರಿಕೆಟ್‌, ಆರು ತಿಂಗಳಿಗೆ ವಿದ್ಯಾಭ್ಯಾಸ ನಿಲ್ಲಿಸಿದರೆ ಹೇಗೆ ಎಂಬ ಕುರಿತಂತೆ ಹಲವಾರು ವಿಷಯಗಳಿಂದ ಆಗುತ್ತಿರುವ ಉಪಯೋಗ ಮತ್ತು ದುರುಪಯೋಗದ ಬಗ್ಗೆ ವಿಷಯ ಮಂಡನೆ ಮಾಡಲು ವಿದ್ಯಾರ್ಥಿಗಳಿಗೆ ಒಂದು ನಿಮಿಷ ಅವಕಾಶ ನೀಡಲಾಗಿತ್ತು. ಅಂತಿಮ ಸುತ್ತಿನಲ್ಲಿ ಆಯ್ಕೆಯಾದ 8 ವಿದ್ಯಾರ್ಥಿಗಳಿಗೆ ಮತ್ತೆ ಚರ್ಚಾ ಸ್ಪರ್ಧೆ ನಡೆಸಿ ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ತೀರ್ಪುಗಾರರಾಗಿ ಸೆಂಟ್ರಲ್‌ ಕಾಮರ್ಸ್‌ ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕ ವಿಕ್ರಂ ಹಾಗೂ ಆರ್ಥಶಾಸ್ತ್ರ ವಿಭಾಗದ ರೋಷನ್‌ಜಮೀರ್‌ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಾಸನ ಶಾಖೆಯ ಫೆಡರಲ್‌ ಬ್ಯಾಂಕ್‌ ವ್ಯವಸ್ಥಾಪಕ ಪ್ರದೀಪ್‌, ಸೆಂಟ್ರಲ್‌ ಕಾಮರ್ಸ್‌ ಕಾಲೇಜಿನ ಪ್ರಾಂಶುಪಾಲ ಪರಿಮಳ ಮಹೇಶ್‌ ಹಾಗೂ ಶಿಕ್ಷಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ