ಆ್ಯಪ್ನಗರ

ಪಕ್ಷ ಸಂಘಟನೆಗಾಗಿ ದೇವೇಗೌಡರೊಂದಿಗೆ ರಾಜ್ಯ ಪ್ರವಾಸ: ಪ್ರಜ್ವಲ್‌

ಜೆಡಿಎಸ್‌ ವರಿಷ್ಠರಾದ ದೇವೇಗೌಡರೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ಪ್ರವಾಸ ಮಾಡಿ ಪಕ್ಷ ವನ್ನು ಬಲಪಡಿಸುವುದಾಗಿ ಹಾಸನ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಹೇಳಿದರು.

Vijaya Karnataka 28 May 2019, 5:00 am
ಹಾಸನ : ಜೆಡಿಎಸ್‌ ವರಿಷ್ಠರಾದ ದೇವೇಗೌಡರೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ಪ್ರವಾಸ ಮಾಡಿ ಪಕ್ಷ ವನ್ನು ಬಲಪಡಿಸುವುದಾಗಿ ಹಾಸನ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಹೇಳಿದರು.
Vijaya Karnataka Web state tour with deve gowda for party organization prijwal
ಪಕ್ಷ ಸಂಘಟನೆಗಾಗಿ ದೇವೇಗೌಡರೊಂದಿಗೆ ರಾಜ್ಯ ಪ್ರವಾಸ: ಪ್ರಜ್ವಲ್‌


ಬೇಲೂರಿಗೆ ಸೋಮವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ದೇಶಕ್ಕೆ ಒಂದು ದೊಡ್ಡಶಕ್ತಿ, ನಾಡು ನುಡಿ ಜಲಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಸಮರ್ಥವಾಗಿ ನಿಂತು ಮಾತನಾಡುವ ಶಕ್ತಿ ಹೊಂದಿದವರು. ಅನಿವಾರ್ಯ ಕಾರಣಗಳಿಂದಾಗಿ ಸೋತಿದ್ದಾರೆ. ಅವರಿಗಾಗಿ ತಾನು ರಾಜೀನಾಮೆ ನೀಡುತ್ತೇನೆಂದಾಗ ಧೃತಿಗೆಡಬೇಡ ಎಂದು ಧೈರ್ಯ ತುಂಬಿದ್ದಾರೆ,'' ಎಂದು ಹೇಳಿದರು.

''ದೇವೇಗೌಡರ ಮೊಮ್ಮಗನಾಗಿ ಅವರ ಸೋಲಿನಿಂದ ಮನಸ್ಸಿಗೆ ನೋವಾಗಿದೆ. ಅವರಿಗಾಗಿ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೆ. ಅಂತಹ ತೀರ್ಮಾನ ಬೇಡ ಎಂದು ಆಶೀರ್ವದಿಸಿ ಕಳುಹಿಸಿದ್ದಾರೆ. ಕೆಲವರು ಇದನ್ನೇ ನಾಟಕ ಎಂದು ಬಿಂಬಿಸಲು ಹೊರಟಿರುವುದು ಮನಸ್ಸಿಗೆ ನೋವಾಗಿದೆ,'' ಎಂದರು.

''ದೇವೇಗೌಡರಿಗಾಗಿ ಯಾವುದೇ ಕ್ಷಣದಲ್ಲಿಯೂ ರಾಜೀನಾಮೆ ನೀಡಲು ಸಿದ್ಧ. ಅವರು ಸಮ್ಮತಿಸಬೇಕು ಅಷ್ಟೇ,'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

''ಚುನಾವಣೆ ವೇಳೆ ಹಾಸನದ ಪಪ್ಪು ಎಂದು ಜರಿದಿದ್ದ ಶಾಸಕ ಪ್ರೀತಂ ಜೆ.ಗೌಡರಿಗೆ ಜನರೇ ತಕ್ಕ ಉತ್ತರ ನೀಡಿದ್ದಾರೆ. ಶಾಸಕರಾಗಿ ಅವರ ಕೆಲಸ ಅವರು ಮಾಡಲಿ, ಸಂಸದನಾಗಿ ತನ್ನ ಕೆಲಸ ತಾನು ಮಾಡುತ್ತೇನೆ,''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ