ಆ್ಯಪ್ನಗರ

ಬಸ್‌ ಸೇವೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಸಾರಿಗೆ ಬಸ್‌ ಚಾಲಕರು ಹಣ ಮಾಡುವ ಉದ್ದೇಶದಿಂದ ಆಟೋ ಮಾಲೀಕರ ಜತೆ ಶಾಮೀಲಾಗಿ ಬಸ್ಸುಗಳನ್ನು ನಿಲ್ಲಿಸದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು, ಪೋಷಕರು ಮಗ್ಗೆ ರಸ್ತೆ ಕಡಬಗಾಲ ಕ್ರಾಸ್‌ ಬಳಿ ಬಸ್‌ ತಡೆದು ಪ್ರತಿಭಟನೆ ನಡೆಸಿದರು.

Vijaya Karnataka 20 Jul 2019, 5:00 am
ಆಲೂರು: ಸಾರಿಗೆ ಬಸ್‌ ಚಾಲಕರು ಹಣ ಮಾಡುವ ಉದ್ದೇಶದಿಂದ ಆಟೋ ಮಾಲೀಕರ ಜತೆ ಶಾಮೀಲಾಗಿ ಬಸ್ಸುಗಳನ್ನು ನಿಲ್ಲಿಸದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು, ಪೋಷಕರು ಮಗ್ಗೆ ರಸ್ತೆ ಕಡಬಗಾಲ ಕ್ರಾಸ್‌ ಬಳಿ ಬಸ್‌ ತಡೆದು ಪ್ರತಿಭಟನೆ ನಡೆಸಿದರು.
Vijaya Karnataka Web HSN-18ALRP1_STRIKE


ಮಗ್ಗೆ ರಸ್ತೆಯಲ್ಲಿರುವ ಕಡಬಗಾಲ ಕ್ರಾಸ್‌ ಪ್ರಯಾಣಿಕರಿಗೆ ಕೇಂದ್ರಬಿಂದುವಾಗಿದೆ. ಈ ಭಾಗಕ್ಕೆ ಒಳಪಟ್ಟ ಕಡಬಗಾಲ, ಕೆರೆಕೊಪ್ಪಲು, ಚಟ್ಟನಹಳ್ಳಿ, ಹೊಳೆಕೊಪ್ಪಲು, ಹೊಸಪಟ್ಟಣ, ಚಿಟ್ಟನಹಳ್ಳಿ ಜನರು ಆಲೂರು ಪಟ್ಟಣ, ಹಾಸನ ನಗರಕ್ಕೆ ತೆರಳಲು ಸಾರಿಗೆ ಬಸ್ಸು ಅವಶ್ಯ ಹಾಗೂ ಅನಿವಾರ್ಯವಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ಚಾಲಕರು ಸ್ಥಳೀಯ ಆಟೋ ಚಾಲಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಬಸ್ಸು ಖಾಲಿ ಇದ್ದರೂ ನಿಲ್ಲಿಸದೆ ಹೋಗುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಸ್ಸುಗಳನ್ನು ನಿಲ್ಲಿಸದ ದಿವಸ ಅನಿವಾರ್ಯವಾಗಿ ವಿದ್ಯಾರ್ಥಿಗಳು ಸಮೀಪದ ಆಟೋ ವಾಹನದ ಮೂಲಕ ಆಲೂರು ಪಟ್ಟಣಕ್ಕೆ ಹೆಚ್ಚು ಹಣ ವ್ಯಯಿಸಿ ಬರಬೇಕಾಗಿದೆ. ಇಲ್ಲದಿದ್ದರೆ ತರಗತಿಗೆ ಸಕಾಲಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅನೇಕ ಬಾರಿ ಇಂತಹ ತೊಂದರೆಗಳೂ ಎದುರಾಗಿದ್ದು, ನಮ್ಮ ಶಿಕ್ಷ ಣದ ಗುಣಪಟ್ಟ ಕುಸಿಯುತ್ತಿದೆಯಲ್ಲದೆ, ಶೈಕ್ಷ ಣಿಕವಾಗಿ ಹಿನ್ನಡೆ ಸಾಧಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ವಿದ್ಯಾರ್ಥಿಗಳು ಬಸ್‌ ಪಾಸ್‌ ಪಡೆದುಕೊಂಡಿರುವ ಕಾರಣ ಹಣ ಕೊಡುವುದಿಲ್ಲವೆಂಬ ಮೂಲ ಉದ್ದೇಶದಿಂದ ಬಸ್‌ ಚಾಲಕರು, ನಿರ್ವಾಹಕರು ವಿದ್ಯಾರ್ಥಿಗಳಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಂಡು ತೊಂದರೆ ನಿವಾರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ವಿದ್ಯಾರ್ಥಿಗಳಾದ ಸ್ವಾತಿ, ರೇವಣ್ಣ, ಮಂಜು, ಗುರುರಾಜ್‌, ಸುಗತ್‌, ಮನು, ದೇವಿಕಾ, ರಮ್ಯಾ, ಕವನ, ಸುಚಿತ್ರ, ಸಾವಿತ್ರಿ ಮತ್ತು ಹಲವು ಪೋಷಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ