ಆ್ಯಪ್ನಗರ

ಆಲೂ ಬೆಳೆಗಾರರಿಗೆ ಸಬ್ಸಿಡಿ: ರೇವಣ್ಣ

ರಾಜ್ಯದಲ್ಲಿ ಅತಿ ಹೆಚ್ಚು ಆಲೂ ಬೆಳೆಯುವ ಪ್ರದೇಶ ನಮ್ಮ ಜಿಲ್ಲೆಯಾಗಿತ್ತು. ಆದರೆ, ಇಂದು ಆಲೂಗೆಡ್ಡೆ ಬೆಳೆಯುವುದು ಕಡಿಮೆ ಮಾಡಿದ್ದಾರೆ. ಹಿಂದೆ 20 ಸಾವಿರ ಹೆಕ್ಟೇರ್‌ ಆಲೂ ಬೆಳೆಯುತ್ತಿದ್ದರು. ಕಳೆದ ವರ್ಷ 12 ಹೆಕ್ಟೇರ್‌ಗೆ ಇಳಿಕೆಯಾಗಿದೆ. ಈ ಬಾರಿ 15 ಹೆಕ್ಟೇರ್‌ಗೆ ಬೇಡಿಕೆ ಇದೆ. ಆದ್ದರಿಂದ ಈ ಬಾರಿ ಶೇ.50 ರಷ್ಟು ಸಬ್ಸಿಡಿ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

Vijaya Karnataka 25 Apr 2019, 5:00 am
ಹಾಸನ: ರಾಜ್ಯದಲ್ಲಿ ಅತಿ ಹೆಚ್ಚು ಆಲೂ ಬೆಳೆಯುವ ಪ್ರದೇಶ ನಮ್ಮ ಜಿಲ್ಲೆಯಾಗಿತ್ತು. ಆದರೆ, ಇಂದು ಆಲೂಗೆಡ್ಡೆ ಬೆಳೆಯುವುದು ಕಡಿಮೆ ಮಾಡಿದ್ದಾರೆ. ಹಿಂದೆ 20 ಸಾವಿರ ಹೆಕ್ಟೇರ್‌ ಆಲೂ ಬೆಳೆಯುತ್ತಿದ್ದರು. ಕಳೆದ ವರ್ಷ 12 ಹೆಕ್ಟೇರ್‌ಗೆ ಇಳಿಕೆಯಾಗಿದೆ. ಈ ಬಾರಿ 15 ಹೆಕ್ಟೇರ್‌ಗೆ ಬೇಡಿಕೆ ಇದೆ. ಆದ್ದರಿಂದ ಈ ಬಾರಿ ಶೇ.50 ರಷ್ಟು ಸಬ್ಸಿಡಿ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.
Vijaya Karnataka Web subsidy for potato growers revanna
ಆಲೂ ಬೆಳೆಗಾರರಿಗೆ ಸಬ್ಸಿಡಿ: ರೇವಣ್ಣ


ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ''ಆಲೂಗೆ ಬಳಸುವ ಔಷಧಕ್ಕೆ 15 ಕೋಟಿ ರೂ. ಹಣ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ, ಈಗ ಜಿಲ್ಲಾಡಳಿತದಲ್ಲಿ 5 ಕೋಟಿ ರೂ. ಹಣ ಇದೆ. ಇನ್ನೂ 10 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ'' ಎಂದರು.

''ಮೈತ್ರಿ ಸರಕಾರ ಬಂದ ಮೇಲೆ 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೇವೆ. ಅಕ್ಕಿ ಕೊಡುತ್ತಿದ್ದೇವೆ. ಹಾಲು ಖರೀದಿ ದರವನ್ನು 1 ರೂ. ಹೆಚ್ಚಳ ಮಾಡಿದ್ದೇವೆ. ಆದರೆ, ಜನರಿಗೆ ಬಿಜೆಪಿಯವರು ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

''ಈಗ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಎಲ್ಲಾ ಕೆಲಸಗಳನ್ನು ಆಯಾ ಇಲಾಖೆಯವರು ಮಾಡಬೇಕು. ಮಾಡದಿದ್ದರೆ ಅದನ್ನು ಅಭಿವೃದ್ದಿ ಕೆಲಸಗಳನ್ನು ಜಿಲ್ಲಾಧಿಕಾರಿಯವರು ನೋಡಿಕೊಳ್ಳುತ್ತಾರೆ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ