ಆ್ಯಪ್ನಗರ

ಕೃಷಿ ಯೋಜನೆ ಅಡಿಯ ಟಾರ್ಪಲ್ ಕಳಪೆ ಗುಣಮಟ್ಟ: ಬೇಕಿದ್ರೆ ತೆಗೆದುಕೊಳ್ಳಿ, ಇಲ್ಲ ಬಿಟ್ಹಾಕಿ ಎಂದ ರೇವಣ್ಣ

ಕೃಷಿ ಯೋಜನೆಯಡಿ ನೀಡುವ ಟಾರ್ಪಲ್‌ಗಳ ಕಳಪೆ ಗುಣಮಟ್ಟದ ಬಗ್ಗೆ ಗಮನಕ್ಕೆ ತಂದ ರೈತರಿಗೆ ''ಬೇಕಿದ್ರೆ ತಗೊಳ್ಳಿ,ಇಲ್ಲಾಂದ್ರೆ ಬಿಡ್ಹಾಕಿ'' ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.

Vijaya Karnataka 15 Sep 2019, 7:29 am
ಹೊಳೆನರಸೀಪುರ: ಕೃಷಿ ಯೋಜನೆಯಡಿ ನೀಡುವ ಟಾರ್ಪಲ್‌ಗಳ ಕಳಪೆ ಗುಣಮಟ್ಟದ ಬಗ್ಗೆ ಗಮನಕ್ಕೆ ತಂದ ರೈತರಿಗೆ ''ಬೇಕಿದ್ರೆ ತಗೊಳ್ಳಿ,ಇಲ್ಲಾಂದ್ರೆ ಬಿಡ್ಹಾಕಿ'' ಎಂಬ ಶಾಸಕ ರೇವಣ್ಣ ಅವರ ಪ್ರತಿಕ್ರಿಯೆ ವಿವಾದಕ್ಕೀಡಾಗಿದೆ.
Vijaya Karnataka Web h d revanna


ತಾಲೂಕಿನ ಹಳೇಕೋಟೆ ಕೃಷಿ ಸಂಪರ್ಕ ಕೇಂದ್ರದಲ್ಲಿಹೋಬಳಿವಾರು ರೈತರಿಗೆ ಸಬ್ಸಿಡಿ ದರದಲ್ಲಿಎಚ್‌.ಡಿ.ರೇವಣ್ಣ ಟಾರ್ಪಲ್‌ ವಿತರಣೆ ಮಾಡುತ್ತಿದ್ದರು. ಈ ವೇಳೆ ಟಾರ್ಪಲ್‌ ಗುಣಮಟ್ಟದ ಬಗ್ಗೆ ರೈತರು ರೇವಣ್ಣರ ಗಮನಕ್ಕೆ ತಂದರು. ರೈತರ ದೂರಿಗೆ ಸಿಡಿಮಿಡಿಗೊಂಡ ಅವರು, ''ನಿಮ್ಮ ದುಡ್ಡಿಗೆ ಇಲ್ಲಿನ ಅಧಿಕಾರಿಗಳು ರಸೀದಿ ಕೊಡುತ್ತಾರೆ. ಸರಕಾರದ ಖಾತೆಗೆ ಅದು ಸಂದಾಯವಾಗುತ್ತೆ. ಗುಣಮಟ್ಟ ಇಲ್ಲಾಂದ್ರೆ ಮೇಲಿನ ಅಧಿಕಾರಿಗಳು ದುಡ್ಡು ತಿಂತಾರೆ'' ಎಂದು ತಮ್ಮದೇ ಶೈಲಿಯಲ್ಲಿಪ್ರತಿಕ್ರಿಯಿಸಿದರು.

''ಇದೇ ದರಕ್ಕೆ ಗುಣಮಟ್ಟದ ಟಾರ್ಪಲ್‌ಗಳು ಅಂಗಡಿಗಳಲ್ಲಿಲಭ್ಯವಾಗುತ್ತದೆ. ಸರಕಾರದಿಂದ ಸಬ್ಸಿಡಿ ಎಂದು ವಿತರಿಸುವ ಟಾರ್ಪಲ್‌ಗಳು ಬಾಳಿಕೆ ಬರುವುದಿಲ್ಲ'' ಎಂಬುದು ರೈತರ ದೂರಾಗಿತ್ತು. ನಂತರ ಕೂಲ್‌ ಆದ ರೇವಣ್ಣ, ''ಎಲ್ಲವನ್ನೂ ಒಂದೇ ಕಡೆ ವಿತರಿಸದಿರಿ. ಕಸಬಾದಲ್ಲೂಕೊಡಿ'' ಎಂದರು.

ಹಳೆಕೋಟೆಗೆ 250, ಕಸಬಾ ಹೋಬಳಿ ವ್ಯಾಪ್ತಿಗೆ 260 ಟಾರ್ಪಾಲ್‌, ಹಳ್ಳಿಮೈಸೂರು ಸೇರಿ ಒಟ್ಟು 800 ಟಾರ್ಪಲ್‌ಗಳು ವಿತರಿಸಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ಸಿದ್ದಪ್ಪಹಳಿ ಮಾಹಿತಿ ನೀಡಿದರು. ''ಒಂದೇ ಕುಟುಂಬಕ್ಕೆ ಎರಡು, ಮೂರು ಟಾರ್ಪಲ್‌ ಗಳನ್ನು ಕೊಡಬೇಡಿ. ಮಹಿಳೆಯರಿಗೆ ಪ್ರಾಧಾನ್ಯತೆ ಕೊಡಿ. ಭೂ ಮಾಲೀಕತ್ವ ಇದ್ದವರಿಗೆ ದಾಖಲೆ ಪಡೆದು ವಿತರಿಸಿ'' ಎಂದು ಶಾಸಕರು ಸೂಚಿಸಿದರು.

ತಹಸೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌, ಕೃಷಿ ಸಹಾಯಕ ಅಧಿಕಾರಿ ದೇವೇಗೌಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ