ಹಾಸನ: ಉತ್ತರ ಪ್ರದೇಶದಲ್ಲಿ ಇಷ್ಟು ವರ್ಷ ಜಾತಿ ಆಧಾರದಲ್ಲಿ, ಧರ್ಮದ ಆಧಾರದಲ್ಲಿ ಚುನಾವಣೆ ನಡೆಯುತಿತ್ತು. ಮೊದಲ ಬಾರಿಗೆ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಕರ್ನಾಟಕ ರೈತ ಸುರಕ್ಷತಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ನನ್ನ ಪಾಲಿಸಿ ನನ್ನ ಕೈಯಲ್ಲಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಹಳ ಕಠಿಣ ಎನ್ನುವ ಉತ್ತರ ಪ್ರದೇಶದಲ್ಲೂ ಕೂಡ ಜಯಬೇರಿ ಬಾರಿಸಿರುವುದು ಸಂತೋಷವಾಗಿದೆ. ನಾನು ಅಲ್ಲೆ ಐದಾರು ತಿಂಗಳು ಇದ್ದು, ಪ್ರತಿ ಹಳ್ಳಿಗಳಿಗೆ, ಕ್ಷೇತ್ರಗಳಿಗೆ ಹೋಗಿ ಭೇಟಿ ಮಾಡಿದಾಗ ಅನೇಕ ವಿಚಾರಗಳು ತಿಳಿದು ಬಂದಿದೆ. ಇಷ್ಟು ವರ್ಷ ಜಾತಿ ಆಧಾರದಲ್ಲಿ, ಧರ್ಮದ ಆಧಾರದಲ್ಲಿ ಚುನಾವಣೆ ನಡೆಯುತಿತ್ತು. ಮೊದಲ ಬಾರಿಗೆ ಅಭಿವೃದ್ಧಿ ಆಧಾರದಲ್ಲಿ ಚುನಾವಣೆಯಲ್ಲಿ ಗೆಲ್ಲಬಹುದು ಎಂಬುದಕ್ಕೆ ಈ ಬಾರಿಯ ಉತ್ತರ ಪ್ರದೇಶದ ಚುನಾವಣೆ ಸಾಕ್ಷಿಯಾಗಿದೆ ಎಂದರು.
ಇನ್ನು ನನ್ನ ಪಾಲಿಸಿ ನನ್ನ ಕೈಯಲ್ಲಿ ಎಂಬುದು ಒಂದು ವಿನೂತನವಾದ ಕಾರ್ಯಕ್ರಮ. ಕಳೆದ ಆರು ವರ್ಷಗಳಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈತನಿಗೆ ರಕ್ಷಣೆ ಕೊಡುವಂತದ್ದು, ರೈತನಿಗೆ ಸಮಸ್ಯೆ ಆದಾಗ ನೆರವಿಗೆ ಧಾವಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಸುಮಾರು 11 ಕೋಟಿ ರೈತರಿಗೆ 1 ಲಕ್ಷದ 60 ಸಾವಿರ ಕೋಟಿ ಹಣವನ್ನು ಇವತ್ತು ಕೇಂದ್ರ ಸರಕಾರವು ವಿತರಣೆ ಮಾಡಿದ್ದು, ಕರ್ನಾಟಕದಲ್ಲಿಯೂ ರಾಜ್ಯ ಸರಕಾರ ಕೊಡುವ ಕೆಲಸ ಮಾಡುತ್ತಿದೆ ಎಂದರು.
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರುವ ಫಸಲ್ ಭೀಮಾ ಯೋಜನೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸುವುದು ನನ್ನ ಪಾಲಿಸಿ ನನ್ನ ಕೈಯಲ್ಲಿ ಪಾಲಿಸಿ ಯೋಜನೆ. ಸ್ವಾತಂತ್ರ್ಯ ಬಂದ 75ನೇ ಅಮೃತ ಮಹೋತ್ಸವದಲ್ಲಿ ರೈತರನ್ನು ಒಟ್ಟುಗೂಡಿಸಿ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಂದು ರೈತರು ಬೆಳೆ ಬೆಳೆಯಲು ಒಂದು ಕಡೆ ಕೂಲಿಗಳು ಸಿಗುವುದಿಲ್ಲ. ಔಷಧಿ ಸಿಂಪಡಣೆ ಮಾಡುವ ಹೊಸ ತಂತ್ರಜ್ಞಾನದಲ್ಲಿ ತಯಾರಿಸಿರುವ ಈ ಡ್ರೋಣ್ ಉಪಯೋಗಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟರು. ರೈತರಿಗೆ ಪೂರಕವಾದ ಕೃಷಿ ಮಾಡಲು ಅಧ್ಯತೆ ನೀಡುತ್ತಿದ್ದು, ರೈತರ ಆಧಾಯವನ್ನು ದ್ವಿಗುಣಗೊಳಿಸಲು ಏನೆಲ್ಲಾ ಮಾಡಬಹುದು ಮತ್ತು ಅವರ ಬೆಳೆಯನ್ನು ಇತರೆ ದೇಶಕ್ಕೆ ಹೇಗೆ ಮಾರ್ಕೇಟಿಂಗ್ ಮಾಡಬಹುದು ಹಾಗೂ ಕೃಷಿಯನ್ನು ಒಂದು ಉದ್ಯಮವಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಸರಕಾರವು ಯೋಜನೆ ರೂಪಿಸುತ್ತಿದೆ. ರಾಗಿ ಖರೀದಿ ಕೇಂದ್ರ ಹೆಚ್ಚು ಮಾಡಬೇಕು ಎನ್ನುವ ರೈತರ ಬೇಡಿಕೆ ಇದ್ದು, ಕೇಂದ್ರ ಸರಕಾರವು ಇದರ ಬಗ್ಗೆ ಗಮನ ಹರಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದರು.
ಕರ್ನಾಟಕ ರೈತ ಸುರಕ್ಷತಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ನನ್ನ ಪಾಲಿಸಿ ನನ್ನ ಕೈಯಲ್ಲಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಹಳ ಕಠಿಣ ಎನ್ನುವ ಉತ್ತರ ಪ್ರದೇಶದಲ್ಲೂ ಕೂಡ ಜಯಬೇರಿ ಬಾರಿಸಿರುವುದು ಸಂತೋಷವಾಗಿದೆ. ನಾನು ಅಲ್ಲೆ ಐದಾರು ತಿಂಗಳು ಇದ್ದು, ಪ್ರತಿ ಹಳ್ಳಿಗಳಿಗೆ, ಕ್ಷೇತ್ರಗಳಿಗೆ ಹೋಗಿ ಭೇಟಿ ಮಾಡಿದಾಗ ಅನೇಕ ವಿಚಾರಗಳು ತಿಳಿದು ಬಂದಿದೆ. ಇಷ್ಟು ವರ್ಷ ಜಾತಿ ಆಧಾರದಲ್ಲಿ, ಧರ್ಮದ ಆಧಾರದಲ್ಲಿ ಚುನಾವಣೆ ನಡೆಯುತಿತ್ತು. ಮೊದಲ ಬಾರಿಗೆ ಅಭಿವೃದ್ಧಿ ಆಧಾರದಲ್ಲಿ ಚುನಾವಣೆಯಲ್ಲಿ ಗೆಲ್ಲಬಹುದು ಎಂಬುದಕ್ಕೆ ಈ ಬಾರಿಯ ಉತ್ತರ ಪ್ರದೇಶದ ಚುನಾವಣೆ ಸಾಕ್ಷಿಯಾಗಿದೆ ಎಂದರು.
ಇನ್ನು ನನ್ನ ಪಾಲಿಸಿ ನನ್ನ ಕೈಯಲ್ಲಿ ಎಂಬುದು ಒಂದು ವಿನೂತನವಾದ ಕಾರ್ಯಕ್ರಮ. ಕಳೆದ ಆರು ವರ್ಷಗಳಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈತನಿಗೆ ರಕ್ಷಣೆ ಕೊಡುವಂತದ್ದು, ರೈತನಿಗೆ ಸಮಸ್ಯೆ ಆದಾಗ ನೆರವಿಗೆ ಧಾವಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ಸುಮಾರು 11 ಕೋಟಿ ರೈತರಿಗೆ 1 ಲಕ್ಷದ 60 ಸಾವಿರ ಕೋಟಿ ಹಣವನ್ನು ಇವತ್ತು ಕೇಂದ್ರ ಸರಕಾರವು ವಿತರಣೆ ಮಾಡಿದ್ದು, ಕರ್ನಾಟಕದಲ್ಲಿಯೂ ರಾಜ್ಯ ಸರಕಾರ ಕೊಡುವ ಕೆಲಸ ಮಾಡುತ್ತಿದೆ ಎಂದರು.
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರುವ ಫಸಲ್ ಭೀಮಾ ಯೋಜನೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸುವುದು ನನ್ನ ಪಾಲಿಸಿ ನನ್ನ ಕೈಯಲ್ಲಿ ಪಾಲಿಸಿ ಯೋಜನೆ. ಸ್ವಾತಂತ್ರ್ಯ ಬಂದ 75ನೇ ಅಮೃತ ಮಹೋತ್ಸವದಲ್ಲಿ ರೈತರನ್ನು ಒಟ್ಟುಗೂಡಿಸಿ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಂದು ರೈತರು ಬೆಳೆ ಬೆಳೆಯಲು ಒಂದು ಕಡೆ ಕೂಲಿಗಳು ಸಿಗುವುದಿಲ್ಲ. ಔಷಧಿ ಸಿಂಪಡಣೆ ಮಾಡುವ ಹೊಸ ತಂತ್ರಜ್ಞಾನದಲ್ಲಿ ತಯಾರಿಸಿರುವ ಈ ಡ್ರೋಣ್ ಉಪಯೋಗಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟರು. ರೈತರಿಗೆ ಪೂರಕವಾದ ಕೃಷಿ ಮಾಡಲು ಅಧ್ಯತೆ ನೀಡುತ್ತಿದ್ದು, ರೈತರ ಆಧಾಯವನ್ನು ದ್ವಿಗುಣಗೊಳಿಸಲು ಏನೆಲ್ಲಾ ಮಾಡಬಹುದು ಮತ್ತು ಅವರ ಬೆಳೆಯನ್ನು ಇತರೆ ದೇಶಕ್ಕೆ ಹೇಗೆ ಮಾರ್ಕೇಟಿಂಗ್ ಮಾಡಬಹುದು ಹಾಗೂ ಕೃಷಿಯನ್ನು ಒಂದು ಉದ್ಯಮವಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಸರಕಾರವು ಯೋಜನೆ ರೂಪಿಸುತ್ತಿದೆ. ರಾಗಿ ಖರೀದಿ ಕೇಂದ್ರ ಹೆಚ್ಚು ಮಾಡಬೇಕು ಎನ್ನುವ ರೈತರ ಬೇಡಿಕೆ ಇದ್ದು, ಕೇಂದ್ರ ಸರಕಾರವು ಇದರ ಬಗ್ಗೆ ಗಮನ ಹರಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದರು.