ಆ್ಯಪ್ನಗರ

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮನೆಯಲ್ಲಿ ಯಾರು ಇಲ್ಲದ ವೇಳೆ ವ್ಯಕ್ತಿಯೊಬ್ಬರು ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಸಂತೋಷನಗರದಲ್ಲಿ ನಡೆದಿದೆ.

Vijaya Karnataka 22 Jun 2019, 5:00 am
ಅರೇಹಳ್ಳಿ (ಬೇಲೂರು): ಮನೆಯಲ್ಲಿ ಯಾರು ಇಲ್ಲದ ವೇಳೆ ವ್ಯಕ್ತಿಯೊಬ್ಬರು ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಸಂತೋಷನಗರದಲ್ಲಿ ನಡೆದಿದೆ.
Vijaya Karnataka Web the man committed suicide by hanging
ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ


ಕೂಲಿ ಕಾರ್ಮಿಕ ಶಿವಾಜಿ(32) ಮೃತರು. ಇವರ ಪತ್ನಿ ಲತಾ ಎಂದಿನಂತೆ ಕೂಲಿ ಕೆಲಸಕ್ಕೆಂದು ಕಾಫಿ ತೋಟಕ್ಕೆ ತೆರಳಿದ್ದರು. ಆದರೆ, ಶಿವಾಜಿ ಮಾತ್ರ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದುಕೊಂಡಿದ್ದರು. ಈ ವೇಳೆ ಬೇರೆ ಊರಿನಲ್ಲಿರುವ ಲತಾ ಅವರ ಅಕ್ಕನಿಗೆ ಕರೆಮಾಡಿದ ಶಿವಾಜಿ, 'ನಾಳೆ ಮನೆಯಲ್ಲಿ ಹಬ್ಬ ಮಾಡುತ್ತಿದ್ದೇವೆ ಬನ್ನಿ' ಎಂದು ಆಮಂತ್ರಿಸಿದ್ದಾರೆ. ಆದರೆ ಶಿವಾಜಿಯ ಮಾತಿನಿಂದ ಸಂದೇಹಗೊಂಡ ಆಕೆ ಈ ಬಗ್ಗೆ ಲತಾಗೆ ಕರೆ ಮಾಡಿ ವಿಚಾರಿಸಿದ್ದಾರೆ. ವಿಚಲಿತಗೊಂಡ ಲತಾ ತಕ್ಷಣ ಪತಿಗೆ ಫೋನ್‌ ಮಾಡಿದ್ದಾರೆ. ಆಗ ಶಿವಾಜಿ, ''ನನಗೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ,'' ಎಂದು ಹೇಳಿ ಕರೆಕಟ್‌ ಮಾಡಿದ್ದಾರೆ. ಇದರಿಂದ ಆತಂಕಗೊಂಡ ಆಕೆ ಮನೆಗೆ ಧಾವಿಸಿ ಬಂದು ನೋಡಿದಾಗ ಶಿವಾಜಿ ಮನೆಯ ಕಬ್ಬಿಣದ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅರೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ