ಆ್ಯಪ್ನಗರ

ಕ್ಯಾಂಟೀನ್‌ ಕಾರ್ಮಿಕನ ಹತ್ಯೆ

ವಿಕ ಸುದ್ದಿಲೋಕ ಹೊಳೆನರಸೀಪುರ ಪಟ್ಟಣದ ಪಾನಿಪುರಿ ಅಂಗಡಿ ಮತ್ತು ರಸ್ತೆ ಬದಿ ಕ್ಯಾಂಟಿನ್‌ಗಳಲ್ಲಿಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಕಾರ್ಮಿಕನ ಹತ್ಯೆ ನಡೆದಿದೆ...

Vijaya Karnataka 3 Dec 2019, 5:00 am
ಹೊಳೆನರಸೀಪುರ: ಪಟ್ಟಣದ ಪಾನಿಪುರಿ ಅಂಗಡಿ ಮತ್ತು ರಸ್ತೆ ಬದಿ ಕ್ಯಾಂಟಿನ್‌ಗಳಲ್ಲಿಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಕಾರ್ಮಿಕನ ಹತ್ಯೆ ನಡೆದಿದೆ.
Vijaya Karnataka Web the murder of a canteen worker in holenarasipura
ಕ್ಯಾಂಟೀನ್‌ ಕಾರ್ಮಿಕನ ಹತ್ಯೆ

ಅರಕಲಗೂಡು ತಾಲೂಕಿನ ಬಸವಾಪಟ್ಟಣದ ಮಂಜು(42) ಮೃತರು. ಪುರಸಭಾ ವಾಣಿಜ್ಯ ಸಂಕೀರ್ಣದ ಬಳಿ ಸೋಮವಾರ ಬೆಳಗ್ಗೆ ರಕ್ತದ ಮಡುವಿನಲ್ಲಿಬಿದ್ದಿದ್ದ ಮೃತ ದೇಹದ ಬಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮಹಿಳೆಯೊಬ್ಬಾಕೆ ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿಬಳೆ ಒಡೆದಿದ್ದು, ಕಟ್ಟಿಗೆಯಿಂದ ತಲೆಗೆ ಹೊಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಭಾನುವಾರ ರಾತ್ರಿ ಆತನೊಂದಿಗೆ ಮಹಿಳೆಯೊಬ್ಬಾಕೆ ಇದ್ದಳು. ಇಬ್ಬರ ನಡುವೆ ಜಗಳವೇರ್ಪಟ್ಟಿರಬಹುದು ಎಂಬ ಸಾರ್ವಜನಿಕ ಮಾಹಿತಿ ಆಧರಿಸಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನೆಡೆದಿದೆ. ನಗರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ