ಆ್ಯಪ್ನಗರ

ಕಳ್ಳನ ಬಂಧನ: 18 ಲಕ್ಷ ಮೌಲ್ಯದ ವಾಹನ ವಶ

ನಗರ ಸೇರಿದಂತೆ ಹೊರಜಿಲ್ಲೆಗಳಲ್ಲಿ ಬೈಕ್‌ ಆಟೋ ಹಾಗೂ ಕಾರು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 18 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka 16 Jun 2018, 5:00 am
ಅರಸೀಕೆರೆ: ನಗರ ಸೇರಿದಂತೆ ಹೊರಜಿಲ್ಲೆಗಳಲ್ಲಿ ಬೈಕ್‌ ಆಟೋ ಹಾಗೂ ಕಾರು ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 18 ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web thieves arrested vehicle worth rs 18 lakh
ಕಳ್ಳನ ಬಂಧನ: 18 ಲಕ್ಷ ಮೌಲ್ಯದ ವಾಹನ ವಶ


ಟಿಪ್ಪು ಸುಲ್ತಾನ್‌ ಬಂಧಿತ ಆರೋಪಿ. ನಗರ ಠಾಣೆ ಪೊಲೀಸರು ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ಕಳ್ಳತನವಾಗಿದ್ದ ಬೈಕ್‌ಗಳ ಮಾಲೀಕರು ನಗರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪುರಾವಾಡ್‌ ಮಾರ್ಗದರ್ಶನದಲ್ಲಿ ಅರಸೀಕೆರೆ ಉಪ ವಿಭಾಗದ ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ ನೇತೃತ್ವದಲ್ಲಿ ರಚಿಸಲಾಗಿದ್ದ ತಂಡ ಈ ಚಾಲಾಕಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆ ವೇಳೆ ಆರೋಪಿ ಬಾಯಿ ಬಿಟ್ಟಂತೆ 11 ಆಟೋ, 8 ಬೈಕ್‌ಗಳು ಹಾಗೂ 1 ಸ್ಕಾರ್ಪಿಯೋ ಕಾರು ವಶಕ್ಕೆ ತೆಗೆದುಕೊಂಡಿದ್ದು, ಇವುಗಳ ಅಂದಾಜು ಮೌಲ್ಯ 18 ಲಕ್ಷ ಎನ್ನಲಾಗಿದೆ.

ಡಿವೈಎಸ್‌ಪಿ ಸದಾನಂದ್‌ ತಿಪ್ಪಣ್ಣನವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ''ಆರೋಪಿಯು ನಗರದ ಕಂತೇನಹಳ್ಳಿಯ ವಾಸಿಯಾಗಿದ್ದು, ಈತ ನಗರದ ಜೇನುಕಲ್‌ ಸ್ಟೇಡಿಯಂ ಬಳಿ ರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಕಂಡು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಪ್ರಕರಣ ಬಯಲಾಗಿದೆ,'' ಎಂದರು. ಎಎಸ್‌ಪಿ ನಾರಾಯಣ್‌ ಹಾಜರಿದ್ದರು.

ಸಿಬ್ಬಂದಿ ಮಂಜೇಗೌಡ, ರಘು, ಶಶಿಧರ್‌, ಗಿರೀಶ್‌, ಸಿದ್ದೇಶ್‌, ಹರೀಶ್‌, ರಂಗಸ್ವಾಮಿ ಕಾರಾರ‍ಯಚರಣೆ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ