ಆ್ಯಪ್ನಗರ

ತಂಬಾಕಿಗೆ ಸೊರಗು ರೋಗ: ನಷ್ಟ ಭೀತಿ

ಅರಕಲಗೂಡು ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಸೊರಗು ರೋಗ ಕಾಣಿಸಿಕೊಂಡಿದ್ದು, ಬೆಳೆಗಾರರನ್ನು ಕಂಗೆಡಿಸಿದೆ.

Vijaya Karnataka 17 Jun 2019, 5:00 am
ಕೇರಳಾಪುರ: ಅರಕಲಗೂಡು ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಸೊರಗು ರೋಗ ಕಾಣಿಸಿಕೊಂಡಿದ್ದು, ಬೆಳೆಗಾರರನ್ನು ಕಂಗೆಡಿಸಿದೆ.
Vijaya Karnataka Web tobacco crops get disease
ತಂಬಾಕಿಗೆ ಸೊರಗು ರೋಗ: ನಷ್ಟ ಭೀತಿ


ತಾಲೂಕಿನ ಕಾಳೇನಹಳ್ಳಿ, ಕೇರಳಾಪುರ, ಬೆಟ್ಟಸೋಗೆ, ಬಸವನಹಳ್ಳಿ, ಹಾನಗಲ್‌, ಕರ್ಕಿಕೊಪ್ಪಲು ಭಾಗ ಸೇರಿದಂತೆ ಬಹಳಷ್ಟು ಕಡೆ ನಾಟಿ ಮಾಡಿರುವ ತಂಬಾಕು ಗಿಡಗಳು ಸೊರಗು ರೋಗಕ್ಕೆ ತುತ್ತಾಗಿವೆ. ಹಲವೆಡೆ ನಾಟಿಯಾದ ಗಿಡಗಳು ಇನ್ನು ನೆಲೆ ಬಿಟ್ಟು ಮೇಲೆದ್ದಿಲ್ಲ. ಆಗಲೇ ರೋಗಕ್ಕೆ ಒಳಗಾಗಿರುವುದು ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ.

ಒಂದೆಡೆ ಮಳೆ ಅಭಾವದಿಂದಾಗಿ ನಾಟಿ ಮಾಡಿರುವ ಹೊಗೆಸೊಪ್ಪು ಗಿಡಗಳು ಹೊಲದಲ್ಲಿ ಒಣಗುತ್ತಿದ್ದರೆ, ಮತ್ತೊಂದೆಡೆ ಸೊರಗು ರೋಗ ಕಾಣಿಸಿಕೊಂಡು ಸಾಯಲಾರಂಭಿಸಿವೆ. ಕೆಲವು ಕಡೆ ಎಲೆಗಳು ನೆಲಕ್ಕೆ ಜೋತು ಬಿದ್ದಿದ್ದು ಗಿಡಗಳು ಬೆಳವಣಿಗೆ ಕಾಣದಾಗಿವೆ. ನಾಟಿ ಮಾಡಿರುವ ಗಿಡಗಳಿಗೆ ರಸಗೊಬ್ಬರ ನೀಡಿ ಕಳೆ ತೆಗೆದು ಆರೈಕೆ ಮಾಡಲಾಗುತ್ತಿದೆ. ಔಷಧಿ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ ಎಂದು ರೈತರು ಅವಲತ್ತುಕೊಂಡಿದ್ದಾರೆ.

ಸೊರಗು ರೋಗ ನಿಯಂತ್ರಣಕ್ಕೆ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ತಂಬಾಕು ಮಂಡಳಿ, ಸಿಟಿಆರ್‌ಐ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ. ಕೇವಲ ಮಾರುಕಟ್ಟೆಯಲ್ಲಿ ಬೆರಳೆಣಿಕೆಯಷ್ಟು ರೈತರನ್ನು ಕರೆಸಿ ಬೆಳೆ ಕಾರ್ಯಾಗಾರ ನಡೆಸಿ ಕೈತೊಳೆದುಕೊಳ್ಳುತ್ತಿದ್ದಾರೆ ಹೊರತು ಬೆಳೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿಲ್ಲ. ತಂಬಾಕು ಗಿಡಗಳು ಕಾುಲೆಗೆ ತುತ್ತಾಗಿ ನಾಶವಾದರೆ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಬೆಳೆ ನಷ್ಟ ತುಂಬಿಕೊಡಬೇಕು. ಇಲ್ಲವಾದರೆ ರಾಮನಾಥಪುರ ತಂಬಾಕು ಮಾರುಕಟ್ಟೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಸ್‌.ವಿ.ಯೋಗಣ್ಣ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ