ಆ್ಯಪ್ನಗರ

ಪ್ರವಾಸಿಗರಿಂದ ಗ್ರಾಮಸ್ಥರ ಮೇಲೆ ಹಲ್ಲೆ

ತಾಲೂಕಿನ ಹಾನುಬಾಳು ಸಮೀಪದ ಬಿಳಿಸಾರೆ ಗ್ರಾಮದಲ್ಲಿ ರೆಸಾರ್ಟ್‌ವೊಂದಕ್ಕೆ ಹೋಗುತ್ತಿದ್ದ ಬೆಂಗಳೂರು ಮೂಲದ ಪ್ರವಾಸಿಗರು ಕ್ಷ ುಲ್ಲಕ ಕಾರಣಕ್ಕೆ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Vijaya Karnataka 28 Jul 2019, 5:00 am
ಸಕಲೇಶಪುರ: ತಾಲೂಕಿನ ಹಾನುಬಾಳು ಸಮೀಪದ ಬಿಳಿಸಾರೆ ಗ್ರಾಮದಲ್ಲಿ ರೆಸಾರ್ಟ್‌ವೊಂದಕ್ಕೆ ಹೋಗುತ್ತಿದ್ದ ಬೆಂಗಳೂರು ಮೂಲದ ಪ್ರವಾಸಿಗರು ಕ್ಷ ುಲ್ಲಕ ಕಾರಣಕ್ಕೆ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
Vijaya Karnataka Web tourists assaulted rurals
ಪ್ರವಾಸಿಗರಿಂದ ಗ್ರಾಮಸ್ಥರ ಮೇಲೆ ಹಲ್ಲೆ


ದೇವಾಲದಕೆರೆ ಸಮೀಪದ ರೆಸಾರ್ಟ್‌ವೊಂದಕ್ಕೆ ಹೋಗುತ್ತಿದ್ದ ಕೆಲವರು ಗ್ರಾಮದ ಕಿರಿದಾದ ರಸ್ತೆಯಲ್ಲಿ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದರಲ್ಲದೆ, ಎದುರಿಗೆ ಬರುತ್ತಿದ್ದ ಬಿಳಿಸಾರೆ ಗ್ರಾಮಸ್ಥ ರೋಹಿತ್‌ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ಎರಡು ವಾಹನಗಳಲ್ಲಿ ಬಂದಿದ್ದ ಸುಮಾರು 20 ಕ್ಕೂ ಹೆಚ್ಚು ಜನರಿದ್ದ ಪ್ರವಾಸಿಗರು ರೋಹಿತ್‌ ಮತ್ತು ಅಶೋಕ್‌ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಶೋಕ್‌ ಅವರ ಮೊಬೈಲ್‌ ಕೂಡ ಕಸಿದು ರೆಸಾರ್ಟ್‌ಗೆ ಹೋಗಿದ್ದಾರೆ.

ಇದರಿಂದ ಕೆರಳಿದ ಬಿಳಿಸಾರೆ ಗ್ರಾಮಸ್ಥರು ಮತ್ತು ಗ್ರಾಮಾಭಿವೃದ್ಧಿ ಸಂಘದ ಸದಸ್ಯರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಶನಿವಾರ ಬೆಳಗ್ಗೆ ಪೊಲೀಸರೊಂದಿಗೆ ಪ್ರವಾಸಿಗರು ತಂಗಿದ್ದ ರೆಸಾರ್ಟ್‌ಗೆ ಹೋಗಿ ವಿಚಾರಣೆ ನಡೆಸುವ ವೇಳೆ, ಮಹಿಳೆಯರು ಸೇರಿದಂತೆ ಅಲ್ಲಿದ್ದವರು ಶೂ, ಚಪ್ಪಲಿ ಹಿಡಿದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾದರು ಎನ್ನಲಾಗಿದೆ.

ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಿದ ಪ್ರವಾಸಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರವಾಸಿಗರನ್ನು ಕರೆಸಿ ವಿಚಾರಣೆ ನಡೆಸಿದ್ದು, ಗ್ರಾಮಸ್ಥರ ಜೊತೆ ಕ್ಷ ಮೆ ಕೇಳಿಸಿ ಪ್ರಕರಣ ಇತ್ಯರ್ಥಗೊಳಸಿದ್ದಾರೆ.

ಎಚ್ಚರಿಕೆ: ತಾಲೂಕಿನ ಗ್ರಾಮೀಣ ಭಾಗದಲ್ಲಿ ರೆಸಾರ್ಟ್‌ ಹಾಗೂ ಹೋಂಸ್ಟೇಗೆ ಬರುವ ಪ್ರವಾಸಿಗರು ಸ್ಥಳೀಯರಿಗೆ ನಾನಾ ರೀತಿಯ ತೊಂದರೆ ತಂದೊಡ್ಡುತ್ತಿದ್ದಾರೆ. ವೇಗವಾಗಿ ವಾಹನಗಳ ಚಾಲನೆ, ಶಬ್ಧ ಮಾಲಿನ್ಯ, ದಾರಿ ಮಧ್ಯದಲ್ಲೆ ಮದ್ಯ ಸೇವನೆ, ಮೋಜು ಮಸ್ತಿ, ಎಲ್ಲೆಂದರಲ್ಲಿ ಬಾಟಲಿ, ಪ್ಲಾಸ್ಟಿಕ್‌ ಬಿಸಾಡುವುದು, ಗ್ರಾಮಸ್ಥರೊಂದಿಗೆ ಅಸಭ್ಯ ವರ್ತನೆ ಮುಂತಾದ ಪ್ರಕರಣಗಳು ನಡೆಯುತ್ತಿವೆ. ಪ್ರವಾಸಿಗರು ಇಂತಹ ಅತಿರೇಕದ ವರ್ತನೆ ತೋರಿದರೆ ಗ್ರಾಮಸ್ಥರು ತೀವ್ರ ಪ್ರತಿರೋಧ ಒಡ್ಡಬೇಕಾದೀತು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಒತ್ತಾಯ: ಗ್ರಾಮೀಣ ಭಾಗದ ಪರಿಸರ ಮತ್ತು ವನ್ಯಮೃಗಗಳ ನೆಮ್ಮದಿ ಕೆಡಿಸುವ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ದೇವಾಲದಕೆರೆ ಗ್ರಾ.ಪಂ ಸದಸ್ಯ ಪೂರ್ಣೇಶ್‌ ಒತ್ತಾಯಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ