ಹಾಸನ: ದಸರಾ, ಆಯುಧಪೂಜೆ, ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಪ್ರವಾಸಿಗರಿಂದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ವಾಹನಗಳಿಂದ ತುಂಬಿ ಹೋದ ದೃಶ್ಯ ನಗರದ ಬೈಪಾಸ್ ಹಾಗೂ ಸಕಲೇಶಪುರ-ಬೇಲೂರು ರಸ್ತೆಯಲ್ಲಿ ಭಾನುವಾರ ಕಂಡುಬಂತು. ಕೊರೊನಾ ಭೀತಿಯಿಂದ ವರ್ಷಗಳ ಕಾಲ ಪ್ರವಾಸ ಮುಂದೂಡಿ ಕುಳಿತಿದ್ದ ಸಹಸ್ರ, ಸಹಸ್ರ ಜನ ಇದೀಗ ರಜೆಯ ಕಾರಣದಿಂದ ಧಾರ್ಮಿಕ ಕ್ಷೇತ್ರ ಧರ್ಮಸ್ಥಳ, ಸುಬ್ರಹ್ಮಣ್ಯ, ಬೇಲೂರು, ಹಳೇಬೀಡು, ಶೃಂಗೇರಿ ಮತ್ತಿತರ ಸ್ಥಳಕ್ಕೆ ಆಗಮಿಸುತ್ತಿದ್ದ ಹಾಗೂ ಹಿಂತಿರುಗುತ್ತಿದ್ದರಿಂದ ಸಾಲು ಸಾಲು ವಾಹನಗಳ ಸಂಚಾರದ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಇನ್ನು ರಜೆಯ ಮೋಜು, ಮಸ್ತಿಗಾಗಿ ರೆಸಾರ್ಟ್, ಹೋಂ ಸ್ಟೇಯಲ್ಲಿತಂಗಲು ತೆರಳುತ್ತಿದ್ದವರು, ಹಿಂತಿರುತ್ತಿದ್ದವರು ಬುಲೆಟ್ ಬೈಕ್, ಕಾರು ಮತ್ತಿತರ ವಾಹನದಲ್ಲಿ ಪ್ರಯಾಣಿಸುತ್ತಿದ್ದುದು ಕಂಡುಬಂತು.
ಆಲೂರು ತಾಲೂಕು ಹರೀಹಳ್ಳಿ ಕೆಂಚಾಂಬ ದೇಗುಲಕ್ಕೂ ಭಾನುವಾರ ಭಕ್ತರ ಮಹಾಪೂರವೇ ಹರಿದು ಬಂತು. ಒಟ್ಟಾರೆ ರಜೆಯ ದಿನಗಳನ್ನು ಕಳೆಯಲು ಜನರು ಮನೆಯಿಂದ ಹೊರಬಂದಿದ್ದು, ಸಾವಿರಾರು ವಾಹನಗಳು ಇರುವೆ ಸಾಲಿನಂತೆ ಸಾಗುತ್ತಿರುವ ದೃಶ್ಯ ಹೆದ್ದಾರಿಗಳಲ್ಲಿ ಕಂಡುಬಂತು.
ಎಲ್ಲೆಲ್ಲೂ ಸೆಲ್ಫಿ:
ಪ್ರವಾಸಿಗರ ತಂಡ ನಿಸರ್ಗದತ್ತವಾದ ಹೇಮಾವತಿ ನದಿ ಹಿನ್ನೀರು ಪ್ರದೇಶ, ಶೆಟ್ಟಿಹಳ್ಳಿ, ಸಕಲೇಶಪುರದ ಹೆದ್ದಾರಿ ಬದಿ ಧುಮ್ಮಿಕ್ಕುವ ಸ್ಥಳಗಳಲ್ಲಿ ನಿಂತು ನಿಸರ್ಗವನ್ನು ಕಣ್ತುಂಬಿಸಿಕೊಳ್ಳುವ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದ ದೃಶ್ಯಗಳು ಹೆಜ್ಜೆ ಹೆಜ್ಜೆಗೂ ಕಂಡುಬಂತು.
ಮಳೆ-ಮನೋಲ್ಲಾಸ:
ಜಿಲ್ಲೆಯಲ್ಲಿ ಭಾನುವಾರ ಕೂಡ ಮಳೆಯ ನರ್ತನ ಮುಂದುವರಿದಿತ್ತು. ಮಳೆ ನಡುವೆ ಒಂದಿಷ್ಟು ಕಾಲ ಬಿಡುವು ನೀಡುತ್ತಿದ್ದರಿಂದ ಮೋಡಕವಿದ ವಾತಾವರಣ ಎಲ್ಲೆಲ್ಲೂ ಪ್ರವಾಸಿಗರಿಗೆ, ಪ್ರಕೃತಿ ಪ್ರಿಯರಿಗೆ ಮನೋಲ್ಲಾಸ ನೀಡುವಂತಿತ್ತು.
ಕಾಫಿಗೆ ಡಿಮ್ಯಾಂಡ್
ತಂಪಾದ ವಾತಾವರಣದಲ್ಲಿ ಅದರಲ್ಲೂ ಸಕಲೇಶಪುರ ಭಾಗಕ್ಕೆ ಬಂದರೆ ಒಂದು ಕಪ್ ಬಿಸಿಯಾದ ಕಾಫಿ ಸೇವಿಸದೆ ಹೋದರೆ ಹೇಗೆ? ಮಲೆನಾಡ ಕಾಫಿ ರುಚಿ ಸವಿಯಲು ಹೋಟೆಲ್ಗಳ ಮುಂದೆ ಜನ ಜಮಾಯಿಸಿದ್ದು ಕಂಡುಬಂತು.
ಹಾಸನ ಜಿಲ್ಲೆಯಲ್ಲಿ ನೋಡುವಂತಹ ಸಾಕಷ್ಟು ಪ್ರವಾಸಿ ತಾಣಗಳು ಇವೆ. ವಾತಾವರಣವೂ ಹಿತವಾಗಿದೆ. ಹೀಗಾಗಿ ಒಂದು ಸುತ್ತು ಹಾಕಿ ಬರೋಣ ಎಂದು ತೆರಳಿದ್ದೆವು. ನದಿಗಳು ತುಂಬಿವೆ. ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜಲಧಾರೆಯ ದೃಶ್ಯ, ನಡುವೆ ದೇಗುಲಗಳ ದರ್ಶನ ವರ್ಣಿಸಲು ಪದ ಸಾಲುತ್ತಿಲ್ಲ.
-ಶಿಲ್ಪಾ, ಹಾಸನ.
ರಜೆಯ ಕಾರಣ ಹಾಗೂ ವಾತಾವರಣ ಆಹ್ಲಾದಕರವಾಗಿರುವ ಕಾರಣ ಒಂದೆರಡು ದಿನ ಕುಟುಂಬದೊಂದಿಗೆ ಪ್ರವಾಸಕ್ಕೆ ಆಗಮಿಸಿದ್ದೆವು. ಸಕಲೇಶಪುರ-ಮಂಗಳೂರು ರಸ್ತೆ ಅವ್ಯವಸ್ಥೆ ಹೊರತುಪಡಿಸಿದರೆ ಪ್ರವಾಸಕ್ಕೆ ಸೂಕ್ತವಾಗಿದೆ.
-ಕನ್ನಯ್ಯ, ಪ್ರವಾಸಿಗರು ಬೆಂಗಳೂರು.
ಇನ್ನು ರಜೆಯ ಮೋಜು, ಮಸ್ತಿಗಾಗಿ ರೆಸಾರ್ಟ್, ಹೋಂ ಸ್ಟೇಯಲ್ಲಿತಂಗಲು ತೆರಳುತ್ತಿದ್ದವರು, ಹಿಂತಿರುತ್ತಿದ್ದವರು ಬುಲೆಟ್ ಬೈಕ್, ಕಾರು ಮತ್ತಿತರ ವಾಹನದಲ್ಲಿ ಪ್ರಯಾಣಿಸುತ್ತಿದ್ದುದು ಕಂಡುಬಂತು.
ಆಲೂರು ತಾಲೂಕು ಹರೀಹಳ್ಳಿ ಕೆಂಚಾಂಬ ದೇಗುಲಕ್ಕೂ ಭಾನುವಾರ ಭಕ್ತರ ಮಹಾಪೂರವೇ ಹರಿದು ಬಂತು. ಒಟ್ಟಾರೆ ರಜೆಯ ದಿನಗಳನ್ನು ಕಳೆಯಲು ಜನರು ಮನೆಯಿಂದ ಹೊರಬಂದಿದ್ದು, ಸಾವಿರಾರು ವಾಹನಗಳು ಇರುವೆ ಸಾಲಿನಂತೆ ಸಾಗುತ್ತಿರುವ ದೃಶ್ಯ ಹೆದ್ದಾರಿಗಳಲ್ಲಿ ಕಂಡುಬಂತು.
ಎಲ್ಲೆಲ್ಲೂ ಸೆಲ್ಫಿ:
ಪ್ರವಾಸಿಗರ ತಂಡ ನಿಸರ್ಗದತ್ತವಾದ ಹೇಮಾವತಿ ನದಿ ಹಿನ್ನೀರು ಪ್ರದೇಶ, ಶೆಟ್ಟಿಹಳ್ಳಿ, ಸಕಲೇಶಪುರದ ಹೆದ್ದಾರಿ ಬದಿ ಧುಮ್ಮಿಕ್ಕುವ ಸ್ಥಳಗಳಲ್ಲಿ ನಿಂತು ನಿಸರ್ಗವನ್ನು ಕಣ್ತುಂಬಿಸಿಕೊಳ್ಳುವ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದ ದೃಶ್ಯಗಳು ಹೆಜ್ಜೆ ಹೆಜ್ಜೆಗೂ ಕಂಡುಬಂತು.
ಮಳೆ-ಮನೋಲ್ಲಾಸ:
ಜಿಲ್ಲೆಯಲ್ಲಿ ಭಾನುವಾರ ಕೂಡ ಮಳೆಯ ನರ್ತನ ಮುಂದುವರಿದಿತ್ತು. ಮಳೆ ನಡುವೆ ಒಂದಿಷ್ಟು ಕಾಲ ಬಿಡುವು ನೀಡುತ್ತಿದ್ದರಿಂದ ಮೋಡಕವಿದ ವಾತಾವರಣ ಎಲ್ಲೆಲ್ಲೂ ಪ್ರವಾಸಿಗರಿಗೆ, ಪ್ರಕೃತಿ ಪ್ರಿಯರಿಗೆ ಮನೋಲ್ಲಾಸ ನೀಡುವಂತಿತ್ತು.
ಕಾಫಿಗೆ ಡಿಮ್ಯಾಂಡ್
ತಂಪಾದ ವಾತಾವರಣದಲ್ಲಿ ಅದರಲ್ಲೂ ಸಕಲೇಶಪುರ ಭಾಗಕ್ಕೆ ಬಂದರೆ ಒಂದು ಕಪ್ ಬಿಸಿಯಾದ ಕಾಫಿ ಸೇವಿಸದೆ ಹೋದರೆ ಹೇಗೆ? ಮಲೆನಾಡ ಕಾಫಿ ರುಚಿ ಸವಿಯಲು ಹೋಟೆಲ್ಗಳ ಮುಂದೆ ಜನ ಜಮಾಯಿಸಿದ್ದು ಕಂಡುಬಂತು.
ಹಾಸನ ಜಿಲ್ಲೆಯಲ್ಲಿ ನೋಡುವಂತಹ ಸಾಕಷ್ಟು ಪ್ರವಾಸಿ ತಾಣಗಳು ಇವೆ. ವಾತಾವರಣವೂ ಹಿತವಾಗಿದೆ. ಹೀಗಾಗಿ ಒಂದು ಸುತ್ತು ಹಾಕಿ ಬರೋಣ ಎಂದು ತೆರಳಿದ್ದೆವು. ನದಿಗಳು ತುಂಬಿವೆ. ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜಲಧಾರೆಯ ದೃಶ್ಯ, ನಡುವೆ ದೇಗುಲಗಳ ದರ್ಶನ ವರ್ಣಿಸಲು ಪದ ಸಾಲುತ್ತಿಲ್ಲ.
-ಶಿಲ್ಪಾ, ಹಾಸನ.
ರಜೆಯ ಕಾರಣ ಹಾಗೂ ವಾತಾವರಣ ಆಹ್ಲಾದಕರವಾಗಿರುವ ಕಾರಣ ಒಂದೆರಡು ದಿನ ಕುಟುಂಬದೊಂದಿಗೆ ಪ್ರವಾಸಕ್ಕೆ ಆಗಮಿಸಿದ್ದೆವು. ಸಕಲೇಶಪುರ-ಮಂಗಳೂರು ರಸ್ತೆ ಅವ್ಯವಸ್ಥೆ ಹೊರತುಪಡಿಸಿದರೆ ಪ್ರವಾಸಕ್ಕೆ ಸೂಕ್ತವಾಗಿದೆ.
-ಕನ್ನಯ್ಯ, ಪ್ರವಾಸಿಗರು ಬೆಂಗಳೂರು.