ಆ್ಯಪ್ನಗರ

ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ: ಪರಿಶೀಲನೆ

ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಮೇಲಧಿಕಾರಿಗಳ ಸೂಚನೆಯನ್ವಯ ಗುರುವಾರ ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

Vijaya Karnataka 27 Jul 2018, 5:00 am
ಸಾರ್ವಜನಿಕರ ಕೆಲಸ ತ್ವರಿತವಾಗಿ ಮಾಡಿಕೊಡಲು ಸೂಚನೆ
Vijaya Karnataka Web visit lokayukta officials to taluk office scrutiny
ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ: ಪರಿಶೀಲನೆ


ಚನ್ನರಾಯಪಟ್ಟಣ:
ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಮೇಲಧಿಕಾರಿಗಳ ಸೂಚನೆಯನ್ವಯ ಗುರುವಾರ ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ ಸೂಚನೆ ನೀಡಿದರು.

ಆರಂಭದಲ್ಲಿ ಭೂಮಿ ಶಾಖೆ, ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುವ ಶಾಖೆಗೆ ತೆರಳಿದ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ರೇವಣ್ಣ ಮತ್ತು ಎ.ಟಿ.ಭಾನು ದಾಖಲೆಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಸಕಾಲದಲ್ಲಿ ಕೆಲಸ ಮಾಡಿಕೊಡುವಂತೆ ಸೂಚನೆ ನೀಡಿದರು.

ಈ ಶಾಖೆಯ ವಿವಿಧ ಯೋಜನೆಗಳ ಅಡಿಯಲ್ಲಿ 373 ಪ್ರಕರಣಗಳು ಅವಧಿ ಮೀರಿದ್ದರೂ ಬಾಕಿ ಇದ್ದು, ಅವುಗಳನ್ನು ಕೂಡಲೇ ಪೂರೈಸುವಂತೆ ಎಚ್ಚರಿಕೆ ನೀಡಿದರು. ಸದಾ ಅತಿಹೆಚ್ಚು ದೂರುಗಳು ಬರುತ್ತಿರುವ ಸರ್ವೇ ಇಲಾಖೆಯ ಹಿರಿಯ ಅಧಿಕಾರಿಗಳ ಕೊಠಡಿಗೆ ತೆರಳಿದಾಗ ಯಾವ ದಾಖಲೆಗಳನ್ನು ಕೇಳಿದರೂ ಕರೆಂಟ್‌ ಇಲ್ಲದ ಕಾರಣ ಕಂಪ್ಯೂಟರ್‌ನಲ್ಲಿರುವ ಮಾಹಿತಿ ಕೊಡಲು ಆಗುತ್ತಿಲ್ಲವೆಂಬ ಉತ್ತರ ಸಿಬ್ಬಂದಿಯಿಂದ ಬಂತು.

ಕಚೇರಿಯ ಲಭ್ಯ ಮಾಹಿತಿಗಳ ಪ್ರಕಾರ ಈ ವರ್ಷಕ್ಕೆ ಇದುವರೆಗೆ 1400 ಪ್ರಕರಣಗಳು ಬಾಕಿ ಇರುವುದಾಗಿ ಬಹಿರಂಗವಾಯಿತು. ಇದಕ್ಕೆ ಸಿಬ್ಬಂದಿ ಕೊರತೆಯ ಕಾರಣ ಕೇಳಿಬಂತು. ತಾಲೂಕಿನಲ್ಲಿ 22 ಮಂದಿ ಇದ್ದರೂ ಸಾಕಾಗುತ್ತಿಲ್ಲ. ಅದರಲ್ಲಿ ಕೆಲವರನ್ನು ಬೇರೆ ಸ್ಥಳಗಳಿಗೆ ನಿಯೋಜಿಸಿರುವುದನ್ನೂ ಗಮನಕ್ಕೆ ತಂದರು. ಆದರೂ ರೈತರನ್ನು ವಿನಾಕಾರಣ ಅಲೆದಾಡುವಂತೆ ಮಾಡುತ್ತಿರುವ ಪ್ರಕರಣಗಳೂ ಪತ್ತೆಯಾದವು.

ಈ ಬಗ್ಗೆ ಎಚ್ಚರಿಕೆ ನೀಡಿದ ಲೋಕಾಯುಕ್ತ ಅಧಿಕಾರಿಗಳು, ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ಕೊಡಬೇಡಿ. ಯಾವ ಹಂತದಲ್ಲಿಯೂ ಅರ್ಜಿಗಳು ಬಾಕಿ ಉಳಿಯಬಾರದು. ಪರಿಶೀಲನೆ ವೇಳೆ ತಪ್ಪಿತಸ್ಥರು ಕಂಡುಬಂದರೆ ಕ್ರಮಕ್ಕಾಗಿ ಲೋಕಾಯುಕ್ತ ಕಚೇರಿಗೆ ವರದಿ ಮಾಡಲಾಗುವುದು,'' ಎಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ