ಆ್ಯಪ್ನಗರ

17 ತಿಂಗಳಿಂದ ವೇತನವಿಲ್ಲ: ವಿಷ ಸೇವಿಸಿದ ವಾಟರ್ ಮ್ಯಾನ್

ಮಂಡ್ಯದ ಕಿಕ್ಕೇರಿ ಮಾದಾಪುರ ಗ್ರಾಮಪಂಚಾಯತ್‌ನ ವಾಟರ್ ಮ್ಯಾನ್ ಗೋವಿಂದ ವಿಷ ಸೇವಿಸಿದ್ದಾರೆ.

Vijaya Karnataka Web 15 Dec 2017, 2:10 pm
ಹಾಸನ: ಕಳೆದ 17 ತಿಂಗಳಿಂದ ವೇತನ ನೀಡದೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮಂಡ್ಯದ ಕಿಕ್ಕೇರಿ ಮಾದಾಪುರ ಗ್ರಾಮಪಂಚಾಯತ್‌ನ ವಾಟರ್ ಮ್ಯಾನ್ ಗೋವಿಂದ ವಿಷ ಸೇವಿಸಿದ್ದಾರೆ.
Vijaya Karnataka Web water man suicide attempt
17 ತಿಂಗಳಿಂದ ವೇತನವಿಲ್ಲ: ವಿಷ ಸೇವಿಸಿದ ವಾಟರ್ ಮ್ಯಾನ್


ವಿಷ ಸೇವಿಸಿದ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ‌ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ವೇತನವಿಲ್ಲದ ಕಾರಣ ಜೀವನ ನಡೆಸುವುದು ಕಷ್ಟವಾಗಿದ್ದರಿಂದ ಮನನೊಂದು ಅವರು ಆತ್ಮಹತ್ಯೆಗೆ ಮುಂದಾಗಿದ್ದರು ಎಂದು ಹೇಳಲಾಗಿದೆ.

ಮಾದಾಪುರ ಗ್ರಾಮ ಪಂಚಾಯಿತಿ ಯಲ್ಲಿ ಸುಮಾರು 15 ನೌಕರಿಗೆ ಕಳೆದ 17 ತಿಂಗಳಿಂದ ಸಂಬಳ ನೀಡುತ್ತಿಲ್ಲ. ಈ ಬಗ್ಗೆ ಕಳೆದ ಎರಡು ದಿನದಿಂದ ನೌಕರರು ಪ್ರತಿಭಟನೆ ನಡೆಸುತ್ತಿದ್ದರೂ ಅಧಿಕಾರಿಗಳು ಪ್ರತಿಭಟನೆಗೆ ಪ್ರತಿಕ್ರಿಯಿಸದೆ ಇರುವುದರಿಂದ ಬೇಸತ್ತು ಗೋವಿಂದ ವಿಷ ಸೇವಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ