ಆ್ಯಪ್ನಗರ

ಬಿಜೆಪಿ ನಡೆ ವಿರುದ್ಧ ಜನರ ಮುಂದೆ ಹೋಗ್ತೇವೆ: ಸಿ.ಎನ್‌.ಬಾಲಕೃಷ್ಣ

''14 ತಿಂಗಳ ಸಮ್ಮಿಶ್ರ ಸರಕಾರದ ಅಂತ್ಯಕ್ಕೆ ಬಿಜೆಪಿ ನಡೆಸಿದ ಕೆಟ್ಟ ಸಂಪ್ರದಾಯವೇ ಕಾರಣವಾಗಿದ್ದು, ಇದರಿಂದ ದೋಸ್ತಿ ಪಕ್ಷ ಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಎದುರಾಗುವುದಿಲ್ಲ'' ಎಂಬ ವಿಶ್ವಾಸವನ್ನು ಸ್ಥಳೀಯ ಜೆಡಿಎಸ್‌ ಶಾಸಕ ಸಿ.ಎನ್‌.ಬಾಲಕೃಷ್ಣ ವ್ಯಕ್ತಪಡಿಸಿದ್ದಾರೆ.

Vijaya Karnataka 25 Jul 2019, 5:00 am
ಚನ್ನರಾಯಪಟ್ಟಣ: ''14 ತಿಂಗಳ ಸಮ್ಮಿಶ್ರ ಸರಕಾರದ ಅಂತ್ಯಕ್ಕೆ ಬಿಜೆಪಿ ನಡೆಸಿದ ಕೆಟ್ಟ ಸಂಪ್ರದಾಯವೇ ಕಾರಣವಾಗಿದ್ದು, ಇದರಿಂದ ದೋಸ್ತಿ ಪಕ್ಷ ಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಎದುರಾಗುವುದಿಲ್ಲ'' ಎಂಬ ವಿಶ್ವಾಸವನ್ನು ಸ್ಥಳೀಯ ಜೆಡಿಎಸ್‌ ಶಾಸಕ ಸಿ.ಎನ್‌.ಬಾಲಕೃಷ್ಣ ವ್ಯಕ್ತಪಡಿಸಿದ್ದಾರೆ.
Vijaya Karnataka Web we go for election mla
ಬಿಜೆಪಿ ನಡೆ ವಿರುದ್ಧ ಜನರ ಮುಂದೆ ಹೋಗ್ತೇವೆ: ಸಿ.ಎನ್‌.ಬಾಲಕೃಷ್ಣ


ಸಮ್ಮಿಶ್ರ ಸರಕಾರದ ಪತನದ ಹಿನ್ನೆಲೆಯಲ್ಲಿ ವಿಜಯಕರ್ನಾಟಕ ಜತೆ ಮಾತನಾಡಿ, ''ರಾಜ್ಯ ರಾಜಕಾರಣದಲ್ಲಿ ನಡೆದ ಇತ್ತೀಚಿನ ವಿದ್ಯಮಾನಗಳಿಂದ ನಾವೇನೂ ವಿಚಲಿತರಾಗಿಲ್ಲ. ಮುಂಬರುವ ದಿನಗಳಲ್ಲಿ ಪಕ್ಷ ದ ಸಂಘಟನೆಗೆ ಆದ್ಯತೆ ನೀಡಲಾಗುವುದು. ಕಳೆದ 14 ತಿಂಗಳ ಕಾಲ ನಡೆಸಿರುವ ಆಡಳಿದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಜನರ ಮುಂದಿಟ್ಟು ಸದೃಢವಾಗಿ ಪಕ್ಷ ಕಟ್ಟುತ್ತೇವೆ. ಅಭಿವೃದ್ಧಿ ಕಾರ‍್ಯಗಳು, ರೈತಪರವಾದ ನಿರ್ಧಾರಗಳು ನಮಗೆ ಶ್ರೀರಕ್ಷೆಯಾಗಿದ್ದು, ಈ ರೀತಿಯ ಪ್ರಜಾಪ್ರಭುತ್ವದ ಕಗ್ಗೊಲೆಗೆ ಕಾರಣರಾದವರ ಬಗ್ಗೆ ಮತದಾರರಿಗೆ ತಿಳಿಸಬೇಕಾಗುತ್ತದೆ'' ಎಂದರು.

''ಮುಂದಿನ ನಡೆಗಳ ಬಗ್ಗೆ ಪಕ್ಷ ದ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಕಾಂಗ್ರೆಸ್‌ ಪಕ್ಷ ದ ಮುಖ್ಯಸ್ಥರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಬೇಕಾಗುತ್ತದೆ,'' ಎಂದರು.

ಸ್ಥಳೀಯ ಹಂತದಲ್ಲಿ ಸ್ವತಂತ್ರ ಸ್ಪರ್ಧೆ ಒಳಿತು: ಎಂ.ಎ.ಗೋಪಾಲಸ್ವಾಮಿ
ಮುಖ್ಯಮಂತ್ರಿಗಳ ಸಂಸದೀಯ ಕಾರ‍್ಯದರ್ಶಿಯಾಗಿದ್ದ ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರು ಪತ್ರಿಕೆಯೊಂದಿಗೆ ಮಾತನಾಡಿ, 'ನಮ್ಮ ದಾರಿಯನ್ನು ನಾವು ನೋಡಿಕೊಳ್ಳುವುದು ಸೂಕ್ತ'' ಎಂದು ಅಭಿಪ್ರಾಯಪಟ್ಟಿದ್ದಾರೆ.

''ಈ ಎಲ್ಲ ವಿದ್ಯಮಾನಗಳನ್ನು ಕಂಡ ಜನರಿಗೆ, ಜತೆಗೆ ನಮಗೂ ಬೇಸರವಾಗಿದೆ. ಮುಂದೆ ಅಧಿಕೃತ ಪ್ರತಿಪಕ್ಷ ವಾಗಿದ್ದುಕೊಂಡು ಕಾಂಗ್ರೆಸ್‌ ಪಕ್ಷ ವನ್ನು ಸಂಘಟನೆ ಮಾಡುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ದೋಸ್ತಿಯನ್ನು ಮುಂದುವರಿಸುವ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಸ್ಥಳೀಯ ಮಟ್ಟದಲ್ಲಿ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ವು ಸ್ವತಂತ್ರವಾಗಿಯೇ ಸ್ಪರ್ಧಿಸುವ ಇರಾದೆ ಹೊಂದಿದ್ದು, ಅಂದಿನ ನಿರ್ಧಾರಗಳಿಗೆ ಬದ್ಧರಾಗಬೇಕಾಗುತ್ತದೆ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ