ಆ್ಯಪ್ನಗರ

ಬಿಜೆಪಿ ಸರಕಾರಕ್ಕೆ ಜೆಡಿಎಸ್‌ ಬೆಂಬಲಿಸಿದರೆ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅಪ್ಪಿಕೊಳ್ಳುತ್ತೇವೆ: ಶಾಸಕ ಪ್ರೀತಂ ಗೌಡ

ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪ - ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಬಳಿಕ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ, - ಜೆಡಿಎಸ್‌ ಬಿಜೆಪಿ ಸರಕಾರಕ್ಕೆ ಬೆಂಬಲ ಕೊಡುವುದಾದರೆ ಅಭಿವೃದ್ಧಿ ದೃಷ್ಟಿಯಿಂದ ಅದನ್ನು ಅಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Vijaya Karnataka Web 4 Nov 2019, 12:55 pm
ಹಾಸನ: ಮೂರು ತಿಂಗಳಲ್ಲಿ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂಬ‌ ಜೆಡಿಎಸ್ ನಾಯಕರ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರೀತಂ ಗೌಡ, ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎನ್ನೋ ಬಗ್ಗೆ ನಾನೇನು ಹೇಳಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅವರು ಬೆಂಬಲಿಸಿದರೆ ಅಪ್ಪಿಕೊಳ್ಳುತ್ತೇವೆ ಎಂದು ಬಿಜೆಪಿಯನ್ನು ಜೆಡಿಎಸ್ ಬೆಂಬಲಿಸಿದರೆ ಸ್ವಾಗತ ಎಂದು ಶಾಸಕ ಪ್ರೀತಂ ಗೌಡ ಹಾಸನ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Vijaya Karnataka Web mla-preetham-gowda


ಬಿಜೆಪಿ ತೆಕ್ಕೆಗೆ ಕುಮಾರಸ್ವಾಮಿ: ಸಿ ಟಿ ರವಿ ರಾಜಕೀಯ ಧೃವೀಕರಣ ಮಾತಿನ‌ ಮರ್ಮವೇನು?

ಜೆಡಿಎಸ್‌ನವರಿಗೆ ಈಗ ಮನವರಿಕೆಯಾಗಿದೆ ಅನ್ಸುತ್ತೆ. ಅವರು ಬಿಜೆಪಿ ಸರ್ಕಾರಕ್ಕೆ ಬೆಂಬಲ‌‌ ನೀಡಲಿ, ಅಥವಾ ಸರಕಾರದ ಜತೆ ಸೇರಲಿ. ಅವರು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅವರು ಬೆಂಬಲಿಸಿದರೆ ಅಪ್ಪಿಕೊಳ್ಳುತ್ತೇವೆ ಎಂದು ಬಿಜೆಪಿಯನ್ನು ಜೆಡಿಎಸ್ ಬೆಂಬಲಿಸಿದರೆ ಸ್ವಾಗತ ಎಂದು ಶಾಸಕ ಪ್ರೀತಂ ಗೌಡ ಹಾಸನ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ದೇವೇಗೌಡರ ಕುಟುಂಬವನ್ನು ಬ್ರಿಟಿಷರಿಗೆ ಹೋಲಿಸಿ ಜರಿದ ಶಾಸಕ ಪ್ರೀತಂಗೌಡ

ಇನ್ನು, ನನಗೆ ರಾಜಕೀಯವಾಗಿ ಸ್ವಾತಂತ್ರ್ಯ ದೊರೆತು ನೂರು ದಿನ ಆಗಿದೆ. ಇನ್ನು ಮೂರು ತಿಂಗಳಲ್ಲಿ ಸಾಫ್ಟವೇರ್ ಕಂಪನಿ ತರಲು ಯತ್ನ ನಡೆಯುತ್ತಿದೆ. ಶೀಘ್ರವೇ ಜಿಲ್ಲೆಯಲ್ಲಿ ಕೈಗಾರಿಕೆ‌ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ನಗರದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ತಾಕತ್ತಿದ್ರೆ ಉಪಚುನಾವಣೆ ಎದುರಿಸಿ, ಸಿದ್ದರಾಮಯ್ಯಗೆ ಯಡಿಯೂರಪ್ಪ ಸವಾಲ್‌

ಆರ್‌ಸಿಇಪಿ ಒಪ್ಪಂದದ ಬಗ್ಗೆ ಎದ್ದಿರುವ ತೀವ್ರ ವಿರೋಧದ ಬಗ್ಗೆ ಶಾಸಕ ಪ್ರೀತಂ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಸರಕಾರ ಜನರ ವಿರುದ್ಧ ಯೋಚನೆ ಮಾಡಲ್ಲ. ಜನರಿಗೆ‌ ಅನುಕೂಲ ಆಗಲಿ ಎಂದೇ ಯೋಜನೆ ಆಗುತ್ತೆ. ಆದ್ರೆ ಅದರಿಂದ ತೊಂದರೆಯಾಗುತ್ತದೆ ಎಂದರೆ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಅದನ್ನು ಸರಿಪಡಿಸೋ ಯತ್ನವೂ ನಡೆಯುತ್ತೆ ಎಂದು ಹೇಳಿದ್ದಾರೆ.

ಅಲ್ಲದೆ, ಸರಕಾರ ಬಂದಾಗ ಆಡಳಿತಾತ್ಮಕ ಕಾರಣಕ್ಕೆ ಕೆಲವು ವರ್ಗಾವಣೆ ನಡೆಯುತ್ತೆ. ಬೇರೆಯವರು ಮಾಡಿದ್ರೆ ಆಡಳಿತಾತ್ಮಕ ನಿರ್ಧಾರ, ನಾವು ಮಾಡಿದ್ರೆ ದಂಧೆನಾ ಎಂದು ಹಾಸನದ ಎಸಿ ವಿಚಾರದಲ್ಲಿ ಮಾಜಿ ಸಚಿವ ರೇವಣ್ಣ ಮಾಡಿದ್ದ ಆರೋಪಕ್ಕೆ ಹಾಸನದಲ್ಲಿ ಶಾಸಕ ಪ್ರೀತಂ ಗೌಡ ತಿರುಗೇಟು ನೀಡಿದರು.

ಹೇಮಾವತಿ ಜಲಾಶಯ ಯೋಜನೆ ಪುನರ್ವಸತಿ ಅಕ್ರಮ ಬಯಲು ಮಾಡಿದ್ದಕ್ಕೆ ಎಸಿ ನಾಗರಾಜು ವರ್ಗಾವಣೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಅಕ್ರಮ ಬಯಲಿಗೆಳೆದ ಕಾರಣಕ್ಕೆ ವರ್ಗಾವಣೆ ಎಂದು ಮಾಜಿ ಸಚಿವ ರೇವಣ್ಣ ಅವರ ಆರೋಪ ರಾಜಕೀಯ ಪ್ರೇರಿತ. ಎಸಿ ಅವರ ವರ್ಗಾವಣೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದು ಸಹ ಹಾಸನ ನಗರದಲ್ಲಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ