ಆ್ಯಪ್ನಗರ

ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗ್ತಾರಾ ಸಿದ್ದರಾಮಯ್ಯ?

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತಾ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರಾ? ಈ ಕುರಿತು ಭವಿಷ್ಯ ಹೇಳಿದ್ದಾರೆ ಕೋಡಿಮಠದ ಸ್ವಾಮೀಜಿಗಳು....

Vijaya Karnataka Web 20 Sep 2019, 6:21 pm
ಹಾಸನ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದೆ ಶುಭದಿನ ಇದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
Vijaya Karnataka Web ಕೋಡಿಮಠ ಸ್ವಾಮೀಜಿ
ಕೋಡಿಮಠ ಸ್ವಾಮೀಜಿ


ಗಂಡಸಿ ಹೋಬಳಿ ಗಂಗೆಮಡು ಗೊಲ್ಲರಹಳ್ಳಿಯಲ್ಲಿ ಕನಕಶಾಖಾಪೀಠ ಹಾಗೂ ಸಮುದಾಯ ಬವನ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಸ್ವಾಮೀಜಿ ಭವಿಷ್ಯ ನುಡಿದರು.

ಸಿದ್ದರಾಮಯ್ಯ ನವರಿಗೆ ಶುಭದಿನ ಇದೆ. ಕಳಂಕ ರಹಿತವಾಗಿ ಐದು ವರ್ಷ ಆಡಳಿತ ನೀಡಿದ್ದಾರೆ. ಅವರನ್ನು ಹೊಸದಿಲ್ಲಿಯತ್ತ ನೋಡಿ ಎಂದು ಹೇಳಿದ್ದೇನೆ ಸ್ವಾಮೀಜಿ ತಿಳಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಸಿದ್ದರಾಮಯ್ಯಗೆ ಶುಭದಿನ ಇದೆ ಎಂದು ಭವಿಷ್ಯ ನುಡಿದರು.

ನಾನು ಹಿಂದೆ ಸಿದ್ದರಾಮಯ್ಯ ಬಗ್ಗೆ ಭವಿಷ್ಯ ಹೇಳಿದ್ದೆ. 'ಅಂಬಲಿ ಹಳಸೀತು, ಕಂಬಳಿ ಹಾಸೀತು' ಎಂದಿದ್ದೆ ಅದರಂತೆ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಕಳೆದ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಸ್ಚಾಮೀಜಿಗಳು ಮನೆ-ಮನೆಗೆ ಹೋಗಿ ಪ್ರಚಾರ ಮಾಡಿದರು. ಆದರೂ ಸಿದ್ದರಾಮಯ್ಯ ಗೆದ್ದರು. ಸಿದ್ದರಾಮಯ್ಯ ಜಾತಿ ವಾದಿ ಅಲ್ಲ ಎಂದು ಸ್ವಾಮೀಜಿಗಳು ಹೊಗಳಿದರು.

ಮುಂದೆ ಚುನಾವಣೆ ಬರುತ್ತೆ ಎಂದು ಹೇಳಿದ್ದೇನೆ. ಆದ್ರೆ ಕೆಲವೊಂದು ಬೆಳವಣಿಗೆ ಆಗಿ ನಂತರ ಚುನಾವಣೆ ಬರಲಿದೆ ಎಂದಿದ್ದೇನೆ ಎಂದು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಗ್ಗೆ ಕೋಡಿಮಠದ ಸ್ವಾಮೀಜಿ ಭವಿಷ್ಯ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ