ಆ್ಯಪ್ನಗರ

ಸಿಎಂ ಹೇಳಿಕೆ: ಪ್ರತಿಕ್ರಿಯಿಗೆ ಜಮೀರ್‌ ನಕಾರ

ಹಾವೇರಿ : ಇನ್ನು ಮುಂದೆ ಮಾಧ್ಯಮಗೋಷ್ಠಿ ನಡೆಸುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ನಾನು ಹೇಗೆ ಮತ್ತು ಏಕೆ ಪ್ರತಿಕ್ರಿಯಿಸಬೇಕು. ಅವರ ಹೇಳಿಕೆಗೆ ಅವರನ್ನೇ ಕೇಳಿ ಎಂದು ರಾಜ್ಯದ ಆಹಾರ ಮತ್ತು ಅಲ್ಪಸಂಖ್ಯಾತ ಸಚಿವ ಬಿ.ಝಡ್‌. ಜಮೀರ ಅಹ್ಮದ ಖಾನ ತಿಳಿಸಿದರು.

Vijaya Karnataka 24 Nov 2018, 5:00 am
ಹಾವೇರಿ : ಇನ್ನು ಮುಂದೆ ಮಾಧ್ಯಮಗೋಷ್ಠಿ ನಡೆಸುವುದಿಲ್ಲ ಎಂದು ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ನಾನು ಹೇಗೆ ಮತ್ತು ಏಕೆ ಪ್ರತಿಕ್ರಿಯಿಸಬೇಕು. ಅವರ ಹೇಳಿಕೆಗೆ ಅವರನ್ನೇ ಕೇಳಿ ಎಂದು ರಾಜ್ಯದ ಆಹಾರ ಮತ್ತು ಅಲ್ಪಸಂಖ್ಯಾತ ಸಚಿವ ಬಿ.ಝಡ್‌. ಜಮೀರ ಅಹ್ಮದ ಖಾನ ತಿಳಿಸಿದರು.
Vijaya Karnataka Web
ಸಿಎಂ ಹೇಳಿಕೆ: ಪ್ರತಿಕ್ರಿಯಿಗೆ ಜಮೀರ್‌ ನಕಾರ


ನಗರದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಗುರುವಾರ ಪಾಲ್ಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ನನಗೆ ಮಾಧ್ಯಮ ಮಿತ್ರರು ಬೇಕು. ನಾನು ಏನಾದರೂ ಹೇಳಿದರೆ ನನ್ನನ್ನು ಕೇಳಿ. ಅವರು (ಸಿಎಂ) ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ'' ಎಂದರು.

''ಡಿ.3 ರೊಳಗೆ ಸಂಪುಟ ವಿಸ್ತರಣೆ ಆಗುವ ಸಾಧ್ಯತೆಗಳಿವೆ. ಶಾಸಕ ಬಿ.ಸಿ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುವೆ'' ಎಂದರು.

''ಜಿಲ್ಲೆಯ ರಾಣೇಬೆನ್ನೂರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ್ದರೂ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿಲ್ಲ. ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಸಿಎಂ ಗಮನ ಸೆಳೆಯಲಾಗುವುದು'' ಎಂದರು.

ಸಚಿವ ಆರ್‌. ಶಂಕರ, ಶಾಸಕ ಬಿ.ಸಿ. ಪಾಟೀಲ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ