ಆ್ಯಪ್ನಗರ

ಮಿತ ನೀರು ಬೇಸಾಯ ಅಗತ್ಯ

ಹಾನಗಲ್ಲ: ಕೃಷಿಯಲ್ಲಿ ಬದಲಾವಣೆ ಇಂದಿನ ಅಗತ್ಯವಾಗಿದೆ. ಕಡಿಮೆ ನೀರು ಬಳಸಿ ಹೆಚ್ಚು ಫಸಲು ಬೆಳೆಯುವ ವ್ಯವಸ್ಥೆಯತ್ತ ರೈತರು ಚಿತ್ತ ಹರಿಸಬೇಕಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.

Vijaya Karnataka 19 Jun 2019, 5:00 am
ಹಾನಗಲ್ಲ: ಕೃಷಿಯಲ್ಲಿ ಬದಲಾವಣೆ ಇಂದಿನ ಅಗತ್ಯವಾಗಿದೆ. ಕಡಿಮೆ ನೀರು ಬಳಸಿ ಹೆಚ್ಚು ಫಸಲು ಬೆಳೆಯುವ ವ್ಯವಸ್ಥೆಯತ್ತ ರೈತರು ಚಿತ್ತ ಹರಿಸಬೇಕಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.
Vijaya Karnataka Web HVR-18HGL1


ಮಂಗಳವಾರ ತಾಲೂಕಿನ ಇನಾಂನೀರಲಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳ್ಳುವ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ತಾಲೂಕಿನ ವಾಡಿಕೆ ಮಳೆ ಪ್ರಮಾಣದಲ್ಲಿ ಕುಸಿತವಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಕಾಡಣ್ಣನವರ, ಮುಖಂಡರಾದ ರಾಜಣ್ಣ ಪಟ್ಟಣದ, ಜಿ.ಎಸ್‌.ದೇಶಪಾಂಡೆ, ಬಿ.ಆರ್‌.ಪಾಟೀಲ, ಬಿ.ಪಿ.ಪಾಟೀಲ, ಸುರೇಶ ಕರಿಗಿಡ್ಡನವರ, ಫಕ್ಕೀರಪ್ಪ ಸಮ್ಮಸಗಿ, ಶೇಖಪ್ಪ ಬೆಳ್ಳಿಕೊಪ್ಪ, ಲೋಕೋಪಯೋಗಿ ಇಲಾಖೆ ಅಭಿಯಂತರ ನಾಗರಾಜ ಉಪಸ್ಥಿತರಿದ್ದರು.

ನಂತರ ತಾಲೂಕಿನ ಮಾವಕೊಪ್ಪ ಗ್ರಾಮದಲ್ಲಿ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಶಾಸಕ ಉದಾಸಿ ಭೂಮಿಪೂಜೆ ನೆರವೇರಿಸಿದರು. ಗ್ರಾ.ಪಂ ಅಧ್ಯಕ್ಷೆ ರೂಪಾ ಕೊಂಡೋಜಿ, ಸ್ಥಳೀಯ ಮುಖಂಡರಾದ ದೇವಲಪ್ಪ ಲಮಾಣಿ, ಫಕ್ಕೀರಪ್ಪ ಓಲೇಕಾರ, ಶಂಕರ ಲಮಾಣಿ, ರವಿ ಲಮಾಣಿ, ಜಯಂತ ಲಮಾಣಿ, ದೇವಿಂದ್ರಪ್ಪ ಬಿದರಕೊಪ್ಪ ಉಪಸ್ಥಿತರಿದ್ದರು.

ತಾಲೂಕಿನ ಮಲ್ಲಿಗಾರ ಗ್ರಾಮದಲ್ಲಿ ನಡೆದ ರಸ್ತೆ ಕಾಮಗಾರಿಯ ಚಾಲನೆ ವೇಳೆ ಜಿ.ಪಂ ಸದಸ್ಯ ಮಾಲತೇಶ ಸೊಪ್ಪಿನ, ತಾ.ಪಂ ಸದಸ್ಯ ಬಸವರಾಜ ಬೂದಿಹಾಳ, ಗ್ರಾ.ಪಂ ಅಧ್ಯಕ್ಷೆ ಸಾಲೇಹಾಬಾನು ನಜೀರ್‌ಸಾಬ ಮುಲ್ಲಾ, ಉಪಾಧ್ಯಕ್ಷೆ ಧರ್ಮವ್ವ ಡೀಗಪ್ಪ ಲಮಾಣಿ, ಸದಸ್ಯ ಕರಬಸಪ್ಪ ಶೆಟ್ಟರ, ಪಿ.ಎಸ್‌.ಹಿತ್ತಲಮನಿ, ಪವನ ಹಾವೇರಿ, ಅಜಯ ಕಾಡಪ್ಪನವರ, ಮಾಲತೇಶ ಕುರುಬರ ಇದ್ದರು.

ದಶರಥಕೊಪ್ಪ ಗ್ರಾಮದಲ್ಲಿ ನಡೆದ ರಸ್ತೆ ಕಾಮಗಾರಿ ಗುದ್ದಲಿಪೂಜೆ ಸಂದರ್ಭದಲ್ಲಿ ಮುಖಂಡರಾದ ಮಲ್ಲನಗೌಡ ವೀರನಗೌಡ್ರ, ರವಿ ಪಾಟೀಲ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ