ಆ್ಯಪ್ನಗರ

ಕ್ಲಷ್ಟರ್‌ ಮಟ್ಟದ ಪ್ರತಿಭಾ ಕಾರಂಜಿ

ತುಮ್ಮಿನಕಟ್ಟಿ: ವಿದ್ಯಾರ್ಥಿಗಳ ಜೀವನದಲ್ಲಿಪಠ್ಯ ಜ್ಞಾನಕ್ಕೆ, ಆದರೆ ಪಠ್ಯೇತರ ಚಟುವಟಿಕೆ ಬದುಕನ್ನು ರೂಪಿಸುವ ಅಂಶವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಪ್ರತಿಭಾ ಕಾರಂಜಿಯಂತಹ ವೇದಿಕೆ ನಿರ್ಮಾಣವಾಗಿರುವುದು ಶ್ಲಾಘನೀಯ ಎಂದು ತಾಪಂ ಸದಸ್ಯ ಜ್ಯೋತಿ ಗಂಜಾಮದ ಹೇಳಿದರು.

Vijaya Karnataka 4 Sep 2019, 5:00 am
ತುಮ್ಮಿನಕಟ್ಟಿ: ವಿದ್ಯಾರ್ಥಿಗಳ ಜೀವನದಲ್ಲಿಪಠ್ಯ ಜ್ಞಾನಕ್ಕೆ, ಆದರೆ ಪಠ್ಯೇತರ ಚಟುವಟಿಕೆ ಬದುಕನ್ನು ರೂಪಿಸುವ ಅಂಶವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಪ್ರತಿಭಾ ಕಾರಂಜಿಯಂತಹ ವೇದಿಕೆ ನಿರ್ಮಾಣವಾಗಿರುವುದು ಶ್ಲಾಘನೀಯ ಎಂದು ತಾಪಂ ಸದಸ್ಯ ಜ್ಯೋತಿ ಗಂಜಾಮದ ಹೇಳಿದರು.
Vijaya Karnataka Web HVR-31 TMK 04


ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಆವರಣದಲ್ಲಿತುಮ್ಮಿನಕಟ್ಟಿ ಪ್ರೌಢಶಾಲೆ ಕ್ಲಷ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ಅದರ ಸಮರ್ಪಕ ಬಳಕೆಯಾದಾಗ ಮಾತ್ರ ಅಂತಹ ಯೋಜನೆಗಳಿಗೆ ಅರ್ಥ ಬರುತ್ತದೆ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಿಂದ ನಮ್ಮ ಗ್ರಾಮೀಣ ಭಾಗದ ಬದುಕಿನ ಕಲೆ ಸಾಹಿತ್ಯ ಜನಪದ ಕೋಲಾಟ ಹೀಗೆ ಹಲವಾರು ಜನಪದ ನೃತ್ಯಗಳನ್ನು ಕಾಣುವಂತಾಗಿದೆ. ಅವುಗಳನ್ನು ಉಳಿಸಿ ಬೆಳೆಸುವಲ್ಲಿಸರ್ವರೂ ಮುಂದಾಗಬೇಕೆಂದರು. ಮುಖ್ಯ ಅಥಿತಿಗಳಾಗಿ ವಿಜಯ ಕುಮಾರ ನಮದಿಹಳ್ಳಿ, ಭಾರತಿ ಸುರವನ್ನಿ, ರಾಮಕೃಷ್ಣ ಕ್ಯಾತರ್‌, ಬಸವರಾಜ, ಸುನಿತಾ, ಸರಸ್ವತಿ, ಹನುಮಂತ, ಶಿವಲೀಲಾ ಕೆಂಬಾವಿ, ಜಯಣ್ಣ ಕರ್ಜಗಿ, ಶಿವು ಚಕ್ಕಡಿ, ಬೀಬಿ ಜಾನ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ