ಆ್ಯಪ್ನಗರ

*ಡಿಸೆಂಬರ್‌ 3 ರೊಳಗೆ ಸಂಪುಟ ವಿಸ್ತರಣೆ

ಹಾವೇರಿ :ಶಾಸಕ ಬಿ.ಸಿ.ಪಾಟೀಲ ಹಿರಿತನದಲ್ಲಿ ನನಗಿಂತ ದೊಡ್ಡವರು. ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವಂತೆ ನಾನೂ ಸಹ ಒತ್ತಾಯಿಸುವೆ. ಡಿಸೆಂಬರ್‌ 3 ರೊಳಗೆ ಸಂಪುಟ ವಿಸ್ತರಣೆ ಆಗುವ ಸಾಧ್ಯತೆಗಳಿವೆ ಎಂದು ರಾಜ್ಯದ ಆಹಾರ ಮತ್ತು ಅಲ್ಪಸಂಖ್ಯಾತ ಸಚಿವ ಜಮೀರ್‌ ಅಹ್ಮದ್‌ ಖಾನ್‌ ತಿಳಿಸಿದ್ದಾರೆ.

Vijaya Karnataka 23 Nov 2018, 5:00 am
ಹಾವೇರಿ :ಶಾಸಕ ಬಿ.ಸಿ.ಪಾಟೀಲ ಹಿರಿತನದಲ್ಲಿ ನನಗಿಂತ ದೊಡ್ಡವರು. ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವಂತೆ ನಾನೂ ಸಹ ಒತ್ತಾಯಿಸುವೆ. ಡಿಸೆಂಬರ್‌ 3 ರೊಳಗೆ ಸಂಪುಟ ವಿಸ್ತರಣೆ ಆಗುವ ಸಾಧ್ಯತೆಗಳಿವೆ ಎಂದು ರಾಜ್ಯದ ಆಹಾರ ಮತ್ತು ಅಲ್ಪಸಂಖ್ಯಾತ ಸಚಿವ ಜಮೀರ್‌ ಅಹ್ಮದ್‌ ಖಾನ್‌ ತಿಳಿಸಿದ್ದಾರೆ.
Vijaya Karnataka Web  cabinet expansion by december 3rd
*ಡಿಸೆಂಬರ್‌ 3 ರೊಳಗೆ ಸಂಪುಟ ವಿಸ್ತರಣೆ


ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಮತ್ತು ಹಿಂಗಾರು ಮಳೆ ಕೊರತೆ ಕಾರಣಕ್ಕೆ ಜಿಲ್ಲಾದ್ಯಂತ ಬರದ ಛಾಯೆ ಇರುವ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿದೆ. ಕೇಂದ್ರ ಸರಕಾರದ ನಿಯಮಾವಳಿ ಆಧರಿಸಿ ರಾಣೇಬೆನ್ನೂರನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರ ಬರ ಅಧ್ಯಯನ ತಂಡ ಇಲ್ಲಿಗೆ ಭೇಟಿ ನೀಡಿಲ್ಲ ಎನ್ನುವ ಮಾಹಿತಿ ತಿಳಿದಿದೆ.

ಈ ಕುರಿತು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವೆ. ಬೆಂಗಳೂರಲ್ಲಿ ಅತಿ ಶೀಘ್ರವೇ ಜಿಲ್ಲೆಯ ಶಾಸಕರ ಸಭೆ ನಡೆಸುವ ಮೂಲಕ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಲು ಸಿ.ಎಂ. ಗಮನ ಸೆಳೆಯಲಾಗುವುದು ಎಂದರು.

ಪ್ರತ್ಯೇಕ ಡಿ.ಸಿ.ಸಿ., ಕೆಎಂಎಫ್‌: ಜಿಲ್ಲೆಗೆ ಪ್ರತ್ಯೇಕ ಡಿ.ಸಿ.ಸಿ. ಬ್ಯಾಂಕ್‌ ಮತ್ತು ಹಾಲು ಒಕ್ಕೂಟ ತರುವ ನಿಟ್ಟಿನಲ್ಲಿ ಭರವಸೆ ನೀಡುವುದಾಗಿ ತಿಳಿಸಿದ ಸಚಿವ ಜಮೀರ ಅಹ್ಮದ ಖಾನ, ಮೆಡಿಕಲ್‌ ಕಾಲೇಜ್‌ಗೆ ಅಗತ್ಯ ಅನುದಾನ ತರುವ ವಿಶ್ವಾಸ ಸಹ ವ್ಯಕ್ತಪಡಿಸಿದರು.

ಖರೀದಿ ಕೇಂದ್ರ ಶೀಘ್ರ: ಮೆಕ್ಕೆಜೋಳಕ್ಕೆ ಕೇಂದ್ರ ಸರಕಾರ ಕ್ವಿಂ.ಗೆ 1750 ಬೆಂಬಲ ಬೆಲೆ ಘೋಷಿಸಿದೆ. ರಾಜ್ಯದಲ್ಲಿ ಪಿಡಿಎಸ್‌ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳುವ ಮತ್ತು ಖರೀದಿ ಕೇಂದ್ರ ತೆರೆಯುವುದಕ್ಕೆ ಬದ್ಧನಿರುವೆ. ಅತಿ ಶೀಘ್ರವೇ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಬೆಂಗಳೂರಲ್ಲಿ ಮರಳು ಗುತ್ತಿಗೆದಾರರ ಸಭೆ: ಜಿಲ್ಲೆಯಲ್ಲಿ ಮರಳು ಮಾಫಿಯಾಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮರಳು ಗಣಿಗಾರಿಕೆ ಗುತ್ತಿಗೆ ಪ್ರಕ್ರಿಯೆ ತಡೆ ಹಿಡಿಯುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೆ. ಸಾರ್ವಜನಿಕರಿಗೆ ಅತಿ ಕಡಿಮೆ ದರದಲ್ಲಿ ಮರಳು ಕೊಡಿಸಲು ಅತಿ ಶೀಘ್ರದಲ್ಲೇ ಮರಳು ಗುತ್ತಿಗೆದಾರರ ಸಭೆ ಕರೆದು ಸಮಸ್ಯೆಗೆ ಪರಿಹಾರ ಕೊಡಿಸುವೆ.

ಸಚಿವ ಆರ್‌. ಶಂಕರ. ಶಾಸಕ ಬಿ.ಸಿ. ಪಾಟೀಲ. ಜಿ.ಪಂ. ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ. ಮಾಜಿ ಸಚಿವ ರುದ್ರಪ್ಪ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ