ಆ್ಯಪ್ನಗರ

ಕೊಚ್ಚಿಹೋದ ಲಾರಿ: ಒಬ್ಬ ಜಲಸಮಾಧಿ, ಇಬ್ಬರು ಪಾರು

ವರದಾ ನದಿ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ರಭಸಕ್ಕೆ ಲಾರಿ ಕೊಚ್ಚಿಹೋಗಿ ಕ್ಲೀನರ್‌ ಜಲಸಮಾಧಿಯಾಗಿದ್ದು, ಚಾಲಕ ಮತ್ತು ಇನ್ನೊಬ್ಬ ಕಾರ್ಮಿಕ ಪಾರಾಗಿರುವ ಘಟನೆ ಹಾನಗಲ್ಲ ತಾಲೂಕಿನ ಕೂಡಲ ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

Vijaya Karnataka 14 Jul 2018, 7:32 am
ಹಾವೇರಿ: ವರದಾ ನದಿ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ರಭಸಕ್ಕೆ ಲಾರಿ ಕೊಚ್ಚಿಹೋಗಿ ಕ್ಲೀನರ್‌ ಜಲಸಮಾಧಿಯಾಗಿದ್ದು, ಚಾಲಕ ಮತ್ತು ಇನ್ನೊಬ್ಬ ಕಾರ್ಮಿಕ ಪಾರಾಗಿರುವ ಘಟನೆ ಹಾನಗಲ್ಲ ತಾಲೂಕಿನ ಕೂಡಲ ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.
Vijaya Karnataka Web Varada


ಬಸವರಾಜ ಲಕ್ಷ್ಮಣ ಸೋಮಣ್ಣನವರ (21) ಎಂಬುವನೇ ನದಿಪಾಲಾದ ಕ್ಲೀನರ್‌. ಚಾಲಕ ಪರಮೇಶ ಹಾಗೂ ಕಾರ್ಮಿಕ ಗುಡ್ಡಪ್ಪ ಲಕ್ಷ್ಮಣ ಸೋಮಣ್ಣನವರ ಈಜಿ ದಡ ಸೇರಿದ್ದಾರೆ.

''ಹಾವೇರಿ ತಾಲೂಕಿನ ಕೂರಗುಂದ ಗ್ರಾಮಕ್ಕೆ ಸೇರಿದ ಲಾರಿಯಲ್ಲಿ ಇಟ್ಟಂಗಿ ತರಲು ಹಾನಗಲ್ಲ ತಾಲೂಕಿನ ಕೋಣನಕೆರೆಗೆ ಹೊರಟ ವೇಳೆ ಈ ದುರ್ಘಟನೆ ಸಂಭವಿಸಿದೆ'' ಎಂದು ಬದುಕುಳಿದವರು ತಿಳಿಸಿದ್ದಾರೆ.

ಆದರೆ ಇನ್ನೊಂದು ಮೂಲದ ಪ್ರಕಾರ ಮುಳುಗಡೆಯಾದ ಲಾರಿ ಗುತ್ತಲದಿಂದ ಉಸುಕು ತುಂಬಿಕೊಂಡು ಹಾನಗಲ್ಲ ತಾಲೂಕಿನ ಹಳ್ಳಿಯೊಂದಕ್ಕೆ ಹೊರಟಿತ್ತು. ಪೊಲೀಸರು ಕೇಸ್‌ ಹಾಕಿ ಲಾರಿ ಸೀಜ್‌ ಮಾಡುತ್ತಾರೆ ಎನ್ನುವ ಭಯದಿಂದ ನಾಗನೂರ ಮಾರ್ಗದಿಂದ ಕೂಡಲ ವರದಾ ನದಿಯ ಬ್ರಿಡ್ಜ್‌ ಕಮ್‌ ಬಾಂದಾರ ಮೂಲಕ ನಿಗದಿತ ಸ್ಥಳ ತಲುಪಲು ಮುಂದಾಗಿದ್ದರು ಎನ್ನಲಾಗಿದೆ.

ಬೆಳಗಿನ ಜಾವ ನದಿ ಪಾತ್ರಕ್ಕೆ ಬಂದ ಸಂದರ್ಭ ಲಾರಿ ಚಾಲಕ ಪರಮೇಶ ನೀರು ಹರಿಯುವ ರಭಸಕ್ಕೆ ಸೇತುವೆ ಮೇಲೆ ಲಾರಿ ದಾಟಿಸಲು ಹೆದರಿದ್ದಾನೆ. ಈ ವೇಳೆ ಕ್ಲೀನರ್‌ ಬಸವರಾಜ ಚಾಲಕನ ಬದಲು ತಾನೇ ಲಾರಿ ಚಲಾಯಿಸಲು ಮುಂದಾಗಿದ್ದಾನೆ. ನೀರಿನ ರಭಸಕ್ಕೆ ಲಾರಿ ನೇರವಾಗಿ ನದಿಗೇ ಬಿದ್ದು ಈ ಅವಘಡ ಸಂಭವಿಸಿದೆ. ಈ ಸೇತುವೆ ಮೇಲೆ ಕನಿಷ್ಠ ಎರಡೂವರೆ ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದ ಕಾರಣ ಲಾರಿಗೆ ರಸ್ತೆ ದಾಟಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.

ಈಜು ಪರಿಣಿತರು ಹಾಗೂ ಲಾರಿ ಮೇಲೆತ್ತುವ ಕ್ರೇನ್‌ ಸ್ಥಳಕ್ಕೆ ತಲುಪಲು ತಡವಾಗಿದ್ದರಿಂದ ನಾಳೆಗೆ (ಶನಿವಾರ) ಕಾರ್ಯಾಚರಣೆ ಮುಂದೂಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ