ಆ್ಯಪ್ನಗರ

ಶಿಶುವಿನಾಳ ಅಭಿವೃದ್ಧಿಗೆ 10 ಲಕ್ಷ ರೂ. ವೈಯಕ್ತಿಕ ನೆರವು

ಶಿಗ್ಗಾವಿ (ಹಾವೇರಿ): ನಾಡಿಗೆ ಭಾವೈಕ್ಯದ ಸಂದೇಶ ಸಾರಿದ ಶರೀಫರ ಸ್ಥಳದಲ್ಲಿ ವಸತಿ ನಿಲಯ ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ಎಲ್ಲ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಸರಕಾರ ಬದ್ಧವಾಗಿದೆ. ಸದ್ಯಕ್ಕೆ ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ವೈಯಕ್ತಿಕವಾಗಿ 10 ಲಕ್ಷ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದಖಾನ್‌ ಭರವಸೆ ನೀಡಿದರು.

Vijaya Karnataka 2 Jul 2019, 5:00 am
ಶಿಗ್ಗಾವಿ (ಹಾವೇರಿ): ನಾಡಿಗೆ ಭಾವೈಕ್ಯದ ಸಂದೇಶ ಸಾರಿದ ಶರೀಫರ ಸ್ಥಳದಲ್ಲಿ ವಸತಿ ನಿಲಯ ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ಎಲ್ಲ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಸರಕಾರ ಬದ್ಧವಾಗಿದೆ. ಸದ್ಯಕ್ಕೆ ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ವೈಯಕ್ತಿಕವಾಗಿ 10 ಲಕ್ಷ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದಖಾನ್‌ ಭರವಸೆ ನೀಡಿದರು.
Vijaya Karnataka Web 10 lakhs for child development personal assistance
ಶಿಶುವಿನಾಳ ಅಭಿವೃದ್ಧಿಗೆ 10 ಲಕ್ಷ ರೂ. ವೈಯಕ್ತಿಕ ನೆರವು


ಸೋಮವಾರ ತಾಲೂಕಿನ ಶಿಶುವಿನಾಳದ ಶರೀಫ ಶಿವಯೋಗೀಶ್ವರ ಪ್ರೌಢಶಾಲೆ ಆವರಣದಲ್ಲಿ ನಡೆದ ಶರೀಫ ಶಿವಯೋಗಿಗಳ 200ನೇ ಜನ್ಮ ದಿನಾಚರಣೆ, ಪ್ರೌಢ ಶಾಲೆ ಹಾಗೂ ಗುರುಗೋವಿಂದ ಶಿವಯೋಗಿಗಳ ಪ್ರಸಾದ ನಿಲಯದ ಸ್ವರ್ಣಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

''ಒಳ್ಳೆಯ ವ್ಯಕ್ತಿಗೆ ಜಾತಿಯಿಲ್ಲ ಎಂಬುದನ್ನು ಶ್ರೇಷ್ಠ ಸಂತ ಶರೀಫರು ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರು ಇನ್ನೂರು ವರ್ಷವಾದರೂ ಇಂದಿಗೂ ನಾಡಿನ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಜಗತ್ತಿನಲ್ಲಿ ಜಾತಿಗಳನ್ನು ನಾವಾಗೇ ಸೃಷ್ಟಿಸಿಕೊಂಡಿದ್ದೇವೆ. ಇಲ್ಲಿರೋದು ಗಂಡು, ಹೆಣ್ಣು ಎರಡೇ ಜಾತಿ ಎನ್ನುವುದನ್ನು ಶರೀಫರು ತಮ್ಮ ತತ್ವಪದಗಳ ಮೂಲಕ ಸಾರಿ ಹೇಳಿದ್ದಾರೆ. ಸಮಾನತೆಗೆ ಆದ್ಯತೆ ನೀಡಿದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದಿದ್ದಾರೆ. ಹೀಗಾಗಿ ಕನ್ನಡ ನಾಡು ಭಾವೈಕ್ಯತೆಗೆ ಹೆಸರಾಗಿದೆ'' ಎಂದರು.

ಶಾಸಕ ಬಸವರಾಜ ಬೊಮ್ಮಾಯಿ ಅಧ್ಯಕ್ಷ ತೆ ವಹಿಸಿದ್ದರು. ಶಾಸಕರಾದ ಸಿ.ಎಂ.ಉದಾಸಿ, ವಿರುಪಾಕ್ಷ ಪ್ಪ ಬಳ್ಳಾರಿ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಮತ್ತಿತರರು ಉಪಸ್ಥಿತರಿದ್ದರು.

ಲಮಾಣಿಗೆ 1 ಲಕ್ಷ ರೂ. ಸಹಾಯ: ಇದೇ ವೇಳೆ ಶರೀಫರ ಸಾಹಿತ್ಯದೊಂದಿಗೆ ರಾಜ್ಯದ ಖ್ಯಾತ ಕಲಾವಿದನಾದ ಸರಿಗಮಪ ಖ್ಯಾತಿಯ ಹನುಮಂತ ಲಮಾಣಿ ಅವರಿಗೆ ಸಚಿವ ಜಮೀರ ಅಹ್ಮದಖಾನ್‌ ಸ್ಥಳದಲ್ಲೇ 1 ಲಕ್ಷ ರೂ. ನೀಡಿ ಗೌರವಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ