ಆ್ಯಪ್ನಗರ

10 ಸಾವಿರಕ್ಕೆ ದಾಖಲೆ ಬೇಕಿಲ್ಲ

ರಾಜು ನದಾಫ ಹಾವೇರಿ: ಜಿಲ್ಲಾದ್ಯಂತ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ನೆರೆ ಸಂತ್ರಸ್ತರು 10 ಸಾವಿರ ರೂ. ಪರಿಹಾರವನ್ನು ಸುಲಭವಾಗಿ ಪಡೆಯಲಿದ್ದು, ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ. ಆದರೆ ಹೆಚ್ಚಿನ ಪರಿಹಾರಕ್ಕೆ ದಾಖಲೆ ನೀಡುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ.

Vijaya Karnataka 22 Aug 2019, 5:00 am
ರಾಜು ನದಾಫ ಹಾವೇರಿ: ಜಿಲ್ಲಾದ್ಯಂತ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ನೆರೆ ಸಂತ್ರಸ್ತರು 10 ಸಾವಿರ ರೂ. ಪರಿಹಾರವನ್ನು ಸುಲಭವಾಗಿ ಪಡೆಯಲಿದ್ದು, ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ. ಆದರೆ ಹೆಚ್ಚಿನ ಪರಿಹಾರಕ್ಕೆ ದಾಖಲೆ ನೀಡುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ.
Vijaya Karnataka Web 10 thousand does not need a record
10 ಸಾವಿರಕ್ಕೆ ದಾಖಲೆ ಬೇಕಿಲ್ಲ


ಸದ್ಯದ ಮಾಹಿತಿ ಪ್ರಕಾರ, ಯಾವುದೇ ದಾಖಲೆ ಕೇಳದೇ ತಕ್ಷಣಕ್ಕೆ 10 ಸಾವಿರ ರೂ. ಪರಿಹಾರ ವಿತರಿಸಲು ಮತ್ತು ಅಧಿಕ ಪರಿಹಾರಕ್ಕೆ ಅರ್ಹರಾಗಿರುವ ಅರ್ಜಿದಾರದಿಂದ ಆಧಾರ್‌, ಫೋಟೋ, ಉತಾರ, ವಿಳಾಸ, ಬ್ಯಾಂಕ್‌ ಖಾತೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಮನೆ, ಬೆಳೆ, ಜನ ಮತ್ತು ಜಾನುವಾರು ಹಾನಿಗೆ ಅಧಿಕ ಪರಿಹಾರ ನೀಡುವ ಕಾರಣಕ್ಕೆ ಅರ್ಹರ ಸಮೀಕ್ಷೆ ಇನ್ನೂ ಚಾಲ್ತಿಯಲ್ಲಿದೆ. ಕೃಷಿ, ತೋಟಗಾರಿಕೆ, ಕಂದಾಯ, ಪಂಚಾಯತ್‌ರಾಜ್‌ ಜತೆ ಲೋಕೋಪಯೋಗಿ, ಸಮಾಜ ಕಲ್ಯಾಣ, ಶಿಕ್ಷಣ ಮುಂತಾದ ಇಲಾಖೆಗಳಿಂದ ಹಾನಿ ವಾಸ್ತವ ಮಾಹಿತಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಬೇಕಿದೆ.

ತಕ್ಷಣದ ಪರಿಹಾರ: ಜಿಲ್ಲಾಡಳಿತ ಮೂಲಗಳ ಪ್ರಕಾರ, ಜಿಲ್ಲೆಯ 22 ನೆರೆಪೀಡಿತ ಹಳ್ಳಿಗಳ ಫಲಾನುಭವಿಗಳ ಸಂಖ್ಯೆ ಒಟ್ಟು 2723. ಕೇಂದ್ರ ಮತ್ತು ರಾಜ್ಯ ವಿಪತ್ತು ಪರಿಹಾರ ನಿಯಮಾವಳಿ ಪ್ರಕಾರ ಈ ಸಂತ್ರಸ್ತರು ಬಟ್ಟೆ ಬರೆ ಕಳೆದುಕೊಂಡಿದ್ದಲ್ಲಿ 1800 ರೂ., ದಿನಬಳಕೆ ವಸ್ತುಗಳಿಗೆ 2 ಸಾವಿರ ಸೇರಿ ಒಟ್ಟು 3800 ರೂ. ಮತ್ತು ರಾಜ್ಯ ಸರಕಾರ ರಾಜ್ಯದ ನಿಧಿಯಿಂದ ಹೆಚ್ಚುವರಿಯಾಗಿ 6200 ರೂ.ನ್ನು ಸೇರಿಸಿ ಸಂತ್ರಸ್ತರಿಗೆ ಒಟ್ಟು 10 ಸಾವಿರ ರೂ. ಪರಿಹಾರ ಪಾವತಿಸಲು ಆದೇಶಿಸಿದೆ. ಆದರೆ ನಗದು ಬದಲಾಗಿ ಆರ್‌ಟಿಜಿಎಸ್‌ ಮೂಲಕ ತಪ್ಪಿದಲ್ಲಿ ಖಾತೆ ಇಲ್ಲ ಎನ್ನುವ ಅನಿವಾರ್ಯ ಫಲಾನುಭವಿಗಳಿಗೆ ಮಾನವೀಯತೆ ದೃಷ್ಟಿಯಿಂದ ಚೆಕ್‌ ಮೂಲಕವೂ ಪರಿಹಾರ ವಿತರಿಸಲು ಅವಕಾಶ ನೀಡಲಾಗಿದೆ.

ವಿತರಣೆ ಎಷ್ಟು?: ಪರಿಹಾರ ವಿತರಣೆಗೆ ನಿಯಮಾವಳಿ ರೂಪಿಸಿ ಜಿಲ್ಲಾಡಳಿಕ್ಕೆ ಸರಕಾರ ಆದೇಶ ಹೊರಡಿಸಿ ವಾರ ಗತಿಸಿದೆ. ಈ ಅವಧಿಯಲ್ಲಿ ಜಿಲ್ಲಾದ್ಯಂತ ಬರೋಬ್ಬರಿ 1055 ಫಲಾನುಭವಿಗಳಿಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಸವಣೂರ (279), ಶಿಗ್ಗಾವ (225), ಹಾನಗಲ್ಲ (174), ಹಿರೇಕೇರೂರ (109), ಹಾವೇರಿ (106), ರಾಣೇಬೆನ್ನೂರ (45) ಮತ್ತು ಬ್ಯಾಡಗಿ (37) ಕುಟುಂಬಗಳಿಗೆ ಚೆಕ್‌ ಮತ್ತು ಆರ್‌ಟಿಜಿಎಸ್‌ ಮೂಲಕ ಪರಿಹಾರ ನೀಡಲಾಗಿದೆ.

ಮನೆ ಕಳೆದುಕೊಂಡವರು?: ಜಿಲ್ಲಾದ್ಯಂತ ಅತಿ ವೃಷ್ಟಿ ಮತ್ತು ನೆರೆಯ ಕಾರಣಕ್ಕೆ ಗುಡಿಸಲು, ಜೋಪಡಿ, ಕಚ್ಚಾ (ಮಣ್ಣಿನ ಮನೆ), ಪಕ್ಕಾ ಮನೆಗಳ ಪೈಕಿ ಭಾಗಶಃ, ತೀವ್ರ ಹಾಗೂ ಸಂಪೂರ್ಣ ನೆಲಸಮಗೊಂಡಿರುವ ಒಟ್ಟು ಮನೆ ಕಳೆದುಕೊಂಡ ಫಲಾನುಭವಿಗಳ ಸಂಖ್ಯೆ 14,302. ಈ ಪೈಕಿ ಹಾವೇರಿ ಅತಿ ಹೆಚ್ಚು (3328), ಹಿರೇಕೇರೂರ ಅತಿ ಕಡಿಮೆ (721). ಇನ್ನುಳಿದಂತೆ ಸವಣೂರ (3052), ಹಾನಗಲ್ಲ (2171), ರಾಣೇಬೆನ್ನೂರ (1934), ಶಿಗ್ಗಾವ (1684) ಹಾಗೂ ಬ್ಯಾಡಗಿ (1412) ಫಲಾನುಭವಿಗಳು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ಪೈಕಿ 49 ಸಂಪೂರ್ಣ ಮತ್ತು 229 ಶೇ.75 ರಿಂದ ಶೇ.90 ರಷ್ಟು ಹಾನಿಯಾಗಿರುವ ನಿರಾಶ್ರಿತರಿದ್ದಾರೆ. ಇವರಿಗೆ ತಕ್ಷಣಕ್ಕೆ ಶೆಡ್‌ ನಿರ್ಮಿಸುವ ಕೆಲಸ ಸಹ ನಡೆದಿದೆ.

ಯಾವ ತಾಲೂಕು? ಎಷ್ಟು ಸಂತ್ರಸ್ತರು?: ಜಿಲ್ಲೆಯ ಸವಣೂರ ತಾಲೂಕಿನಲ್ಲಿ ಅತಿ ಹೆಚ್ಚು (778) ಮತ್ತು ರಾಣೇಬೆನ್ನೂರಲ್ಲಿ ಅತಿ ಕಡಿಮೆ (60) ಸಂತ್ರಸ್ತರು ಲಭ್ಯವಾಗಿದ್ದಾರೆ. ಇನ್ನುಳಿದಂತೆ ಶಿಗ್ಗಾವ (720), ಹಾವೇರಿ (600), ಹಾನಗಲ್ಲ (388), ಹಿರೇಕೇರೂರ (109) ಹಾಗೂ ಬ್ಯಾಡಗಿ (68) ಸಂತ್ರಸ್ತರು 10 ಸಾವಿರ ಪರಿಹಾರಕ್ಕೆ ಅರ್ಹರಾಗಿದ್ದಾರೆ.

ದಾಖಲೆ ಏನು?: 10 ಸಾವಿರ ಪರಿಹಾರ ಪಡೆದುಕೊಳ್ಳಲು ಸಂತ್ರಸ್ತರು ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಂದ ಪ್ರಮಾಣಪತ್ರ ಪಡೆದಲ್ಲಿ ತಹಸೀಲ್ದಾರ್‌ ವಿವೇಚನಾಧಿಕಾರ ಬಳಿ ತಕ್ಷಣ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳು ವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಈ ಪರಿಹಾರ ಕಾರ್ಯ ಭರದಿಂದ ಸಾಗಿದೆ. ಈ ನಿಟ್ಟಿನಲ್ಲಿ ಎಷ್ಟು ಫಲಾನುಭವಿಗಳಿಗೆ ಪರಿಹಾರ ವಿತರಣೆಯಾಗಿದೆ ಎನ್ನುವ ನಿಖರ ಮಾಹಿತಿ ಲಭ್ಯವಾಗಬೇಕಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ